Pratap Simha's Blog, page 44

April 23, 2016

ಏಷ್ಯನ್ ಹಾಕಿಗೆ ಸುಲ್ತಾನ್ ಅಜ್ಲಾನ್ ಷಾ ಹೇಗೋ ಕರ್ನಾಟಕ ಹಾಕಿಗೆ ಪಾಂಡಂಡ ಕುಟ್ಟಪ್ಪನವರು ಹಾಗೆ!

ಏಷ್ಯನ್ ಹಾಕಿಗೆ ಸುಲ್ತಾನ್ ಅಜ್ಲಾನ್ ಷಾ ಹೇಗೋ ಕರ್ನಾಟಕ ಹಾಕಿಗೆ ಪಾಂಡಂಡ ಕುಟ್ಟಪ್ಪನವರು ಹಾಗೆ!



ಪ್ರತೀ ವರ್ಷ ಎಪ್ರಿಲ್ – ಮೇ ನಲ್ಲಿ ಕೊಡಗಿನಲ್ಲಿ ನಡೆಯುವ ಹಾಕಿ ಹಬ್ಬಕ್ಕೆ ಜನ ಕಾತರದಿಂದ ಕಾಯಲಾರಂಭಿಸಿದರು. ಹಾಕಿ ಪಂದ್ಯದಲ್ಲಿ ವಿಜೇತರಾಗುವುದು ಪ್ರತಿಷ್ಠೆಯ ಸಂಗತಿಯಾಗಿದೆ. ಜೊತೆಗೆ ಸೈನ್ಯಕ್ಕೆ ಸೇರಲು ಹಾಕಿ ಪಂದ್ಯ ಪ್ರೋತ್ಸಾಹವನ್ನು ನೀಡುತ್ತಿದೆ. ದೇಶದ ಪ್ರತಿಷ್ಠಿತ ಹಾಕಿ ತಂಡಗಳು ಹಾಕಿ ಹಬ್ಬದತ್ತ ಮುಗಿಬೀಳತೊಡಗಿವೆ.

ರಾಜಾ ಅಜ್ಲಾನ್ ಮುಹಿಬುದ್ದೀನ್ ಷಾ ಇಬ್ನಿ ಅಲ್ಮರ್ಹುಂ ಸುಲ್ತಾನ್ ಯೂಸೆ- ಇಜ್ಜುದ್ದೀನ್ ಷಾ ಘಫರುಹು.ಹೆಸರೇ ಇಷ್ಟು ಉದ್ದ. ‘ಡಿ’ಯಿಂದ ‘ಡಿ’ ವರೆಗಿನ ಹಾಕಿ ಮೈದಾನದಂತೆ! ಅಲ್ಲದೆ ಆತ ರಾಜ ಬೇರೆ. ಮಲಯಾದ ಪೆರಾಕ್ ಪ್ರಾಂತವನ್ನು ಅವರ ವಂಶಸ್ಥರು ಆಳುತ್ತಿದರು. ಶ್ರೀಮಂತ ಕುಳ. ನಮ್ಮಲ್ಲಿ ಮೈಸೂರು, ಇಂಧೋರ್, ಗ್ವಾಲಿಯರ್, ಪುಣೆಗಳು ಹೇಗೋ ಮಲಯಾದಲ್ಲಿ ಪೆರಾಕ್ ಹಾಗೆ. ಪೆರಾಕಿನ ಸುಲ್ತಾನರು ನಮ್ಮ ಒಡೆಯರ ಹಾಗೆ ಜನಾನುರಾಗಿಗಳು. ಸುಲ್ತಾನನಾದರೂ ರಾಜಾ ಅಜ್ಲಾನ್ ಷಾನಿಗೆ ಹಲವು ಸಂವೇದನಾಶೀಲರಿಗಿರುವ ಹುಚ್ಚುಗಳಿದ್ದವು. ಆತ ಕವನ ಗೀಚುತ್ತಿದ್ದ, ಚಿತ್ರಕಲೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ. ಬ್ರಿಟನ್ ಲೈಬ್ರರಿಯಲ್ಲಿ ಕಲಾಕೃತಿಗಳ ಬಗ್ಗೆ ಆಸಕ್ತಿಯಿಂದ ಅಧ್ಯಯನ ಮಾಡುತ್ತಿದ್ದ. ಮಲಯಾದಿಂದ ಬ್ಯಾರಿಸ್ಟರ್ ಓದಲು ಇಂಗ್ಲೆಂಡಿಗೆ ಕಳುಹಿಸಿದ್ದರೂ ಅಜ್ಲಾನ್ ಷಾ ಬ್ಯಾರಿಸ್ಟರ್ ಪದವಿಯ ಜೊತೆಗೆ ಹಾಕಿಯ ಹುಚ್ಚನ್ನು ಹಿಡಿಸಿಕೊಂಡು ಮಲಯಾಕ್ಕೆ ಬಂದ. ಮಲಯಾಕ್ಕೆ ಮರಳಿ ಬಂದವನೇ ಅಜ್ಲಾನ್ ಓರಗೆಯ ಹುಡುಗರನ್ನು ಕಟ್ಟಿಕೊಂಡು ಹಾಕಿ ಆಡತೊಡಗಿದ. ಅವರದ್ದೇ ತಂಡ ಕಟ್ಟಿದ. ಮಲಯಾದ್ವೀಪಗಳು ಯೂರೋಪಿಯನ್ ಕಾಲೊನಿಗಳಾಗಿದ್ದರೂ ಅಲ್ಲಿ ಕ್ರಿಕೇಟ್ ಹುಚ್ಚು ಹಿಡಿಯುವುದನ್ನು ರಾಜಾ ಅಜ್ಲಾನ್ ತಪ್ಪಿಸಿದ. ಆತನ ಹಾಕಿಯ ಹುಚ್ಚಿಗೆ ಬ್ರಿಟಿಷರೂ ನೀರೆರೆದರು.


ಕ್ರಮೇಣ ಜನರಿಗೂ ಹಾಕಿಯ ಹುಚ್ಚು ಹಿಡಿಯಿತು. ಹೀಗೆ ಸದಾ ಹಾಕಿಯ ಗುಂಗಲ್ಲಿರುತ್ತಿದ್ದ ರಾಜಾ ಅಜ್ಲಾನ್ ಷಾ ತನ್ನ ದೇಶದ ತಮಿಳು ಜನರಲ್ಲಿದ್ದ ಚಾಕಚಕ್ಯತೆ, ದೇಹದಾಢ್ಯತೆಗಳನ್ನು ಮೊಟ್ಟಮೊದಲು ಗುರುತ್ತಿಸಿ ಇವರಲ್ಲಿ ಹಾಕಿ ಆಡಬಲ್ಲ ದೈತ್ಯ ಪ್ರತಿಭೆಗಳಿವೆ ಎಂಬುದನ್ನು ಗಮನಿಸಿದ. ಮಲಯಾದಲ್ಲಿ ಕಾರ್ಮಿಕ ವರ್ಗವಾಗಿದ್ದ ತಮಿಳರನ್ನು ಕೀಳಾಗಿ ಕಾಣದೆ ಅಜ್ಲಾನ್ ಅವರಿಗೆ ಹಾಕಿ ತರಬೇತಿಯನ್ನು ನೀಡಲಾರಂಭಿಸಿದ. ಅವರನ್ನು ಉತ್ತಮ ಆಟಗಾರರನ್ನಾಗಿ ಮಾರ್ಪಡಿಸಿದ. ಮಲೇಷ್ಯಾ ತಂಡದಲ್ಲಿ ಆಡಿದ ಹರ್ನಾಲಾಲ್ ಸಿಂಗ್, ಕೀವನ್ ರಾಜ್, ಷಣ್ಮುಗನಾಥನ್, ಲೋಗನ್ ರಾಜ್, ಯೋಗೇಶ್ವರನ್, ಕೆವಿಂದರ್ ಸಿಂಗ್, ಹರ್ವಿಂದರ್ ಸಿಂಗ್ ಮೊದಲಾದ ಹೆಸರುಗಳು ಕಾಣುವುದರ ಹಿಂದೆ ಮತ್ತು ದೂರದ ಮಲೇಷಿಯಾದಲ್ಲೂ ಸಿಂಗ್ ಸಭಾ ಎಂಬ ಹಾಕಿ ಕ್ಲಬ್ ಹುಟ್ಟುವಲ್ಲಿ ಈ ಅಜ್ಲಾನ್ ಷಾನ ಹಾಕಿಪ್ರೇಮವಿದೆ. ಜೊತೆಗೆ ರಾಜಾ ಅಜ್ಲಾನ್ ಷಾ ಮಲಯಾದಲ್ಲಿ ಹಲವು ಟೂರ್ನಾ ಮೆಂಟುಗಳನ್ನು ಏರ್ಪಡಿಸಿ ಹಾಕಿಯನ್ನು ಜನಪ್ರಿಯ ಗೊಳಿಸಿದ. ಪರಿಣಾಮ ಮಲಯಾ ಹಾಕಿಯ ಕೋಟೆಯಾಗಿ ಬೆಳೆಯತೊಡಗಿತು. ಏಷ್ಯನ್ ಹಾಕಿಯ ಗರ್ಭಗುಡಿ ಯಾಯಿತು. ಪ್ರತಿವರ್ಷ ನಡೆಯುವ ಅಜ್ಲಾನ್ ಷಾ ಹಾಕಿ ಟೂರ್ನಿ ಜಗತ್ತಿನ ಪ್ರತಿಷ್ಠಿತ ಹಾಕಿ ಟೂರ್ನಿಯಾಯಿತು.

ಆತನನ್ನು ಏಷ್ಯಾದ ಹಾಕಿ ಪಿತಾಮಹನೆಂದು ಜಗತ್ತು ಕರೆಯಿತು.ಟ್ರೂಲಿ ಏಷ್ಯಾ ಎಂಬ ಜಾಹೀರಾತನ್ನಿಟ್ಟುಕೊಂಡು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಇಡೀ ವಿಶ್ವದ ಗಮನವನ್ನು ಸೆಳೆದ ಮಲೇಷಿಯಾ ಅಜ್ಲಾನ್ ಷಾ ಹಾಕಿ ಪಂದ್ಯಾವಳಿಯಿಂದ ಟ್ರೂಲಿ ಏಷ್ಯಾ’ ಹೆಸರನ್ನು ಕಳೆದ 25 ವರ್ಷಗಳಿಂದ ಗಟ್ಟಿಮಾಡಿಕೊಂಡಿದೆ. ಇದಕ್ಕೆ ಕಾರಣ ಕೇವಲ ಒಬ್ಬ ವ್ಯಕ್ತಿ ಎನ್ನುವುದು ವಿಶೇಷ. ಆತ ಇದೇ ಸುಲ್ತಾನ ಅಜ್ಲಾನ್ ಷಾ.ನಮ್ಮ ಕರ್ನಾಟಕದಲ್ಲೂ ಹಾಕಿ ಎಂದಾಗ ಒಬ್ಬ ವ್ಯಕ್ತಿ ಮಲಯಾದ ರಾಜಾ ಅಜ್ಲಾನ್ ಷಾನಂತೆ ಗಮನ ಸೆಳೆಯುತ್ತಾರೆ. ಅವರಂತೆ ಇವರೂ ಶ್ರೀಮಂತರು, ಮಾಡುತ್ತಿದ್ದ ಕೆಲಸವೇ ಬೇರೆ. ಬೆರೆಯುತ್ತಿದ್ದ ಜನಗಳೇ ಬೇರೆ. ಆದರೂ ಇವರಿಗೆ ಹಾಕಿಯ ಹುಚ್ಚು ಹಿಡಿಯಿತು. 25 ವರ್ಷ ಪೂರೈಸಿ ಇತಿಹಾಸ ನಿರ್ಮಿಸಿದ ಅಜ್ಲಾನ್ ಷಾ ಟೂರ್ನಿಯಂತೆ ಇವರೂ ಒಂದು ಟೂರ್ನಿಯನ್ನು ಪ್ರಾರಂಭಿಸಿದರು. ಆ ಟೂರ್ನಿಯನ್ನು ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನವರೆಗೆ ಕೊಂಡೊಯ್ದರು.ಅವರು ಕೊಡವ ಹಾಕಿ ಹಬ್ಬದ ಜನಕ ಪಾಂಡಂಡ ಕುಟ್ಟಪ್ಪನವರು.ಪಾಂಡಂಡ ಕುಟ್ಟಪ್ಪನವರು ನಿವೃತ್ತ ಬ್ಯಾಂಕ್ ಅಧಿಕಾರಿಗಳು. ಕೊಡಗಿನ ಹಾಕಿಯ ಶಾಶ್ವತ ಅಸ್ತಿತ್ವಕ್ಕಾಗಿ ‘ಕೊಡವ ಹಾಕಿ ಅಕಾಡೆಮಿ’ಯನ್ನು ಸ್ಥಾಪಿಸಿದವರು. ರಾಜಾ ಅಜ್ಲಾನ್ ಷಾನಂತೆ ಹಾಕಿ ಬೆಳೆಯಬೇಕು ಎಂದು ಹುಚ್ಚುಹತ್ತಿಸಿಕೊಂಡವರು. ತಮ್ಮ ಕೈಯಿಂದ ಹಣ ಹಾಕಿ 60 ತಂಡಗಳ ಹಾಕಿ ಟೂರ್ನಿಯನ್ನು ನಡೆಸಿದವರು. 1997ರಲ್ಲಿ ಕುಟ್ಟಪ್ಪನವರು ಮೊದಲಬಾರಿಗೆ ಕೊಡಗಿನಲ್ಲಿ ‘ಪಾಂಡಂಡ ಕಪ್’ ಹಾಕಿ ಹಬ್ಬವನ್ನು ಆರಂಭಿಸಿದರು. ಅವರ ಭರವಸೆಗಳು ಹುಸಿಯಾಗಲಿಲ್ಲ.

ಕಾಲದಿಂದ ಕಾಲಕ್ಕೆ ತಂಡಗಳ ಸಂಖ್ಯೆ ಹೆಚ್ಚಾಗಿ 285 ತಂಡಗಳವರೆಗೂ ಮುಟ್ಟಿತು ಮತ್ತು ‘ಲಿಮ್ಕಾ ಬುಕ್ ಆಫ್ ರೆಕಾರ್ಡ್’ನಲ್ಲೂ ಅದು ದಾಖಲಾಯಿತು. ಇದೀಗ ಕುಟ್ಟಪ್ಪನವರು ಪ್ರಾರಂಭಿಸಿದ ಹಾಕಿ ಹಬ್ಬ 20 ವರ್ಷಗಳನ್ನು ಪೂರೈಸಿದೆ. ಪ್ರತೀ ವರ್ಷ ಒಂದೊಂದು ಕುಟುಂಬಸ್ಥರು ಅತಿಥ್ಯಕ್ಕೆ ಮುಗಿಬೀಳತೊಡಗಿದ್ದಾರೆ. ಪಂದ್ಯಾವಳಿಗಳಿಗೆ ಉತ್ಸವದ ಕಳೆ ತರಲೂ ಕುಟ್ಟಪ್ಪನವರು ನಿರ್ಧರಿಸಿದರು.ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಟವಾಡಿದವರೂ ತಮ್ಮ ಕುಟುಂಬವನ್ನು ಪ್ರತಿನಿಧಿಸಿ ಕ್ರೀಡಾಕೂಟವನ್ನು ರಂಗೇರಿಸುತ್ತಿದ್ದಾರೆ. ಹೀಗೆ ನೋಡನೋಡುತ್ತಲೇ ಹಾಕಿ ವೈಭವವನ್ನು ಕಾಣತೊಡಗಿತು. ಪ್ರತೀ ವರ್ಷ ಎಪ್ರಿಲ್ – ಮೇ ನಲ್ಲಿ ನಡೆಯುವ ಹಾಕಿ ಹಬ್ಬಕ್ಕೆ ಜನ ಕಾತರದಿಂದ ಕಾಯಲಾರಂಭಿಸಿದರು. ಹಾಕಿ ಪಂದ್ಯದಲ್ಲಿ ವಿಜೇತರಾಗುವುದು ಪ್ರತಿಷ್ಠೆಯ ಸಂಗತಿಯಾಗಿದೆ. ಜೊತೆಗೆ ಸೈನ್ಯಕ್ಕೆ ಸೇರಲು ಹಾಕಿ ಪಂದ್ಯ ಪ್ರೋತ್ಸಾಹವನ್ನು ನೀಡುತ್ತಿದೆ. ದೇಶದ ಪ್ರತಿಷ್ಠಿತ ಹಾಕಿ ತಂಡಗಳು ಹಾಕಿ ಹಬ್ಬದತ್ತ ಮುಗಿಬೀಳತೊಡಗಿವೆ. ಬದಲಾಗುವ ನಿಯಮಗಳು, ಶಿಸ್ತುಗಳು, ಮಾಧ್ಯಮಗಳ ಹೊರತಾಗಿಯೂ ಆಟಗಾರನ ಅರಿವಿಗೆ ಬರತೊಡಗಿದೆ.

ಕ್ರೀಡೆಯೊಂದು ಏಲಜ್ಞಬದಲಾವಣೆ ತರಬಹುದು ಎಂಬುದಕ್ಕೆ ಅಜ್ಲಾನ್ ಷಾ ಕಪ್ ಮತ್ತು ಕೊಡವ ಹಾಕಿ ಉತ್ಸವದಷ್ಟು ಯೋಗ್ಯ ಉದಾಹರಣೆ ಬಹುಶಃ ವಿಶ್ವದಲ್ಲಿ ಬೇರೆ ಇರಲಿಕ್ಕಿಲ್ಲ.ಏಕೆಂದರೆ ಅಜ್ಲಾನ್ ಷಾ ಟೂರ್ನಿಯಿಂದ ಮಲೇಷಿಯಾ ಪ್ರವಾಸೋದ್ಯಮದ ಹೊರತಾಗಿಯೂ ಹಾಕಿಯ ಕಾರಣಕ್ಕೆ truely asiaಆಗುತ್ತದೆ. ಹಾಗೆಯೇ ಕೊಡವ ಹಾಕಿಹಬ್ಬದಿಂದ ಕರ್ನಾಟಕ the nursery of Indian hockey ಆಗುತ್ತದೆ. ಹೇಗೆ ಮಲೇಷಿಯಾದಲ್ಲಿ ರಾಜಾ ಅಜ್ಲಾನ್ ಷಾ ಹಾಕಿ ಯೂರೋಪ್ ಕೇಂದ್ರಿತವಾಗುವುದನ್ನು ತಪ್ಪಿಸಿ ಏಷ್ಯನ್ ಹಾಕಿಯನ್ನು ಜನಪ್ರಿಯಗೊಳಿಸಿದರೋ ಹಾಗೆ ಪಾಂಡಂಡ ಕುಟ್ಟಪ್ಪನವರು ಹಾಕಿ ಹಬ್ಬದಿಂದ ಕರ್ನಾಟಕದ ಹಾಕಿಯನ್ನು ಜನಪ್ರಿಯಗೊಳಿಸಿದ್ದಾರೆ.ಕೊಡಗಿನ ಹಾಕಿ ಈ ಪಟ್ಟಕ್ಕೆ ಬಂದ ಕಥೆ ಮತ್ತು ಪಾಂಡಂಡ ಕುಟ್ಟಪ್ಪನವರ ಸಾಧನೆಯ ಹಿಂದೆ ರೋಮಾಂಚನಕಾರಿ ಇತಿಹಾಸವಿದೆ.ಬ್ರಿಟೀಷರ ಕಾಲದ ಕೊಡಗಿಗೆ ಹೇಗೋ ಹಾಕಿಯ ಹುಚ್ಚು ಹಿಡಿದಿತ್ತು. ಭಾರತೀಯ ಹಾಕಿಗೆ ಅಮೂಲ್ಯ ರತ್ನಗಳನ್ನು ಕೊಡಗು ಕೊಡುತ್ತಲೂ ಇತ್ತು. ಹಿಂದಿನ ಮಹಾಮಹಾ ಆಟಗಾರರಾದ ಮಾಳೆಯಂಡ ಮುತ್ತಪ್ಪನವರು, ಪೈಕೇರ ಕಾಳಯ್ಯನವರು, ಮಹಾ ತಡೆಗೋಡೆ ಅಂಜಪರವಂಡ ಸುಬ್ಬಯ್ಯನವರು, ಹಾಕಿ ಮಾಂತ್ರಿಕ ಭಾರತ ತಂಡದ ಯಶಸ್ವೀ ನಾಯಕ ಗೋವಿಂದನವರು, ಮಾಜಿ ಕ್ಯಾಪ್ಟನ್ ಮನೆಯಪಂಡ ಸೋಮಯ್ಯನವರು, ಮೊಳ್ಳೆರ ಗಣೇಶ್‌ರವರು, ಅರ್ಜುನ್ ಹಾಲಪ್ಪನವರು, ಒಲಂಪಿಯನ್ ಚೆಪ್ಪುಡಿರ ಪೂಣಚ್ಚನವರು, ಅಂತಾರಾಷ್ಟ್ರೀಯ ತಂಡವೊಂದರ ಕೋಚ್ ಆಗಿ ಮಿಂಚಿದ್ದ ಮತ್ತು ಭಾರತ ತಂಡದ ಬೆನ್ನೆಲುಬು ಎಂದೇ ಖ್ಯಾತರಾಗಿದ್ದ ಕೂತಂಡ ಪೂಣಚ್ಚನವರು, ಭಾರತ ತಂಡದ ಅತ್ಯುತ್ತಮ ಪೆನಾಲ್ಟಿ ಕಾರ್ನರ್ ಸ್ಪೆಶಲಿಸ್ಟ್ ಆಗಿದ್ದ ಬಲ್ಲಚಂಡ ಲೆನ್ ಅಯ್ಯಪ್ಪನವರು, ಸಿಡಿಗುಂಡಿನಂತೆ ಚೆಂಡನ್ನು ಹಿಟ್ ಮಾಡುವ ಪಳಂಗಂಡ ಅಮರ್ ಅಯ್ಯಮ್ಮನವರು, ಸ್ಕೋರ್ ಬೋರ್ಡಿನಲ್ಲಿ ಕಡ್ಡಾಯವಾಗಿ ಕಾಣಿಸುವ ರಘುನಾಥ್ ಮತ್ತು ಸುನಿಲ್ರವರಿಂದ ಹಿಡಿದು ಭರವಸೆಯ ಹೊಸ ಆಟಗಾರರಾದ ನಿಕ್ಕಿನ್ ತಿಮ್ಮಯ್ಯ, ಕಿರಿ ವಯಸ್ಸ ಭಾರತ ತಂಡ ಪ್ರತಿನಿಧಿಸಿದ ಆಲೇಮಾಡ ಚೀಯಣ್ಣ, ಸಣ್ಣುವಂಡ ಉತ್ತಪ್ಪ…

ಹೀಗೆ ಕೊಡಗಿನ ಹಾಕಿರತ್ನಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.ಇವಿಷ್ಟೇ ಅಲ್ಲ…ದೇಶದ ಪ್ರಮುಖ ಹಾಕಿ ತಂಡಗಳಾದ ಸರ್ವಿಸಸ್, ಎಂಇಜಿ, ಎಎಸಿ, ರೈಲ್ವೆ, ಏರ್ ಇಂಡಿಯಾ, ಕೆನರಾ ಬ್ಯಾಂಕ್, ಎಸ್.ಬಿ.ಐ, ಹೆಚ್.ಎ.ಎಲ್., ಟಾಟಾ ತಂಡಗಳಲ್ಲಿ ಕೂಡ ಕೊಡಗಿನ ಆಟಗಾರದ್ದೇ ಪಾರುಪತ್ಯ. ದೇಶದಲ್ಲಿ ಯಾವುದೇ ಹಾಕಿ ತಂಡವಿರಲಿ ಅಲ್ಲಿ ಒಂದಾದರೂ ಕೊಡಗಿನ ಹೆಸರು ಇಲ್ಲದಿದ್ದರೆ ಕೇಳಿ. ಇವಲ್ಲದೆ ರಾಜ್ಯದ ಎಲ್ಲ ಹಾಕಿ ಕ್ಲಬ್ಬುಗಳಿರಲಿ ಒಂದಾದರೂ ಅಪ್ಪಣ್ಣ, ಬೋಪಣ್ಣ ಹೆಸರುಗಳು ಇದ್ದೇ ಇರುತ್ತವೆ. ಕರ್ನಾಟಕದ ಯೂನಿವರ್ಸಿಟಿ ತಂಡಗಳಲ್ಲಿ ಒಮ್ಮೊಮ್ಮೆ ಸಂಪೂರ್ಣ ಕೊಡಗಿನ ಆಟಗಾರರೇ ಇರುವ ವಿಚಿತ್ರವೂ ಇದೆ. ಇದಕ್ಕೆ ಕಾರಣವೂ ಸರಳವಾಗಿದೆ. ಚೀನಾದಲ್ಲಿ ಪುಟ್ಟಮಕ್ಕಳನ್ನು ಒಲಂಪಿಕ್‌ಗೆ ತಯಾರು ಮಾಡುವಂತೆ ನಮ್ಮ ಕೊಡಗು ಹಾಕಿ ಆಟಗಾರರನ್ನು ತಯಾರು ಮಾಡುತ್ತದೆ. ಇಲ್ಲಿ ಪ್ರೈಮರಿಗೆ ಹೋಗುವ ಬಾಲಕನ ಕೈಯಲ್ಲೂ ಹಾಕಿ ಸ್ಟಿಕ್, ಶಾಲೆಗೆ ರಜೆ ಬಂತೆಂದರೆ ಹಾಕಿ ಶಿಬಿರ, ಊರ ಮೈದಾನದಲ್ಲಿ ಸಂಜೆ ಹಾಕಿ ಪಂದ್ಯ! ಸರ್ವವೂ ಇಲ್ಲಿ ಹಾಕಿಮಯ. ಏಕೆಂದರೆ ಇಲ್ಲಿ ಹಾಕಿ ಎಂದರೆ ಎಲ್ಲವೂ. ಜೀವನದಲ್ಲಿ ಒಮ್ಮೆಯಾದರೂ ಹಾಕಿ ಆಡಲಾರದವನನ್ನು ನೀವು ಕೊಡಗಲ್ಲಿ ಕಾಣಲಾರಿರಿ. ಅಷ್ಟರಮಟ್ಟಿಗೆ ಹಾಕಿ ಇಲ್ಲಿನ ಜನರ ಉಸಿರು. ಹೇಗೆ ಕೊಡಗಿನ ಜನರು ತೋಟದ ಕಾಫಿಗೆ ಪ್ರಾಮುಖ್ಯತೆ ಕೊಡುತ್ತಾರೋ ಗ್ರೌಂಡಿನ ಹಾಕಿಗೂ ಅಷ್ಟೇ ಪ್ರಾಮುಖ್ಯವನ್ನು ಕೊಡುತ್ತಾರೆ. ಬ್ರಿಟೀಷರು ಪರಿಚಯಿಸಿದ ಕಾಫಿ ಮತ್ತು ಹಾಕಿ ಕೊಡಗಿನಲ್ಲಿ ಸಮ್ರೃದ್ಧ -ಸಲನ್ನೇ ಬಿಟ್ಟಿತು. ಕಾಲಕಾಲಕ್ಕೆ ಕಾಫಿಯ ಕಾಳಜಿ ಮಾಡುವಂತೆ ಇಲ್ಲಿನ ಜನ ಹಾಕಿಯ ಕಾಳಜಿಯನ್ನು ಮಾಡಲು ಮರೆಯಲಿಲ್ಲ. ಇಂದಿಗೂ ಕೊಡಗಿನ ಪ್ರಮುಖ ಪಟ್ಟಣಗಳಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಒಂದಾದರೂ ಹಾಕಿ ಕ್ಲಬ್ಬುಗಳಿರುವುದನ್ನು ನೋಡಬಹುದು.
ಮಡಿಕೇರಿಯ ಬ್ಲೂಸ್ಟಾರ್, ಸೋಮವಾರಪೇಟೆಯ ಡಾಲಿನ್ ಮತ್ತು ವಾಂಡರರ್ಸ್ , ವೀರಾಜಪೇಟೆಯ ಟವರ್ಸ್  , ನಾಪೋಕ್ಲುವಿನ ಶಿವಾಜಿ, ಗೋಣಿಕೊಪ್ಪದ ಬಿಬಿಸಿ, ಅಮ್ಮತ್ತಿಯ ಸ್ಪೋರ್ಟ್ಸ ಕ್ಲಬ್ ಹೀಗೆ ದೇಶದ ಅತ್ಯುತ್ತಮ ಹಾಕಿಕ್ಲಬ್ಬುಗಳು ಕೊಡಗಿನಲ್ಲಿವೆ. ಹೇಗೆ ಕಾಫಿ ಇಲ್ಲಿನ ಜನರ ಅವಿಭಾಜ್ಯ ಅಂಗವೋ ಹಾಕಿಯೂ ಅವರ ಜೀವನದ ಅವಿಭಾಜ್ಯ ಅಂಗ. ಇಲ್ಲಿ ಮನೆಗೊಂದು ಕೋವಿ ಇರುವಂತೆ ಮನೆಗೆ ಕನಿಷ್ಠ ಒಂದಾದರೂ ಹಾಕಿ ಸ್ಟಿಕ್ ಇದ್ದೇ ಇರುತ್ತದೆ. ಇರಬೇಕೆಂಬ ನಂಬಿಕೆಯೂ ಕೊಡವರಲ್ಲಿದೆ. ಅದಿಲ್ಲದ ಕೊಡವರ ಮನೆಗಳನ್ನು ನೀವು ಕಾಣಲಾರಿರಿ.ಹಾಕಿಯನ್ನು ಕೊಡಗಿನ ಜನ ಆರಾಧಿಸಿಕೊಂಡು ಬಂದ ಮತ್ತು ಅದನ್ನು ತಮ್ಮ ಜನಜೀವನದಲ್ಲಿ ಅಳವಡಿಸಿಕೊಂಡು ಬಂದ ಪ್ರೇರಣಾದಾಯಿ ಉದಾಹರಣೆಗಳೆಷ್ಟೋ ಇಲ್ಲಿ ಸಿಗುತ್ತವೆ. ಕೊಡಗಿನಲ್ಲಿ ಹಾಕಿ ಜನಜೀವನದಲ್ಲಿ ಎಷ್ಟೊಂದು ಹಾಸುಹೊಕ್ಕಾದ ಸಂಗತಿಯೆಂದರೆ, ಹಾಕಿಯನ್ನು ಅರ್ಥೈಸಿಕೊಳ್ಳದೆ ಕೊಡಗನ್ನು ಅರ್ಥೈಸಿಕೊಳ್ಳಲಾಗದು ಎಂಬಷ್ಟು. ಕೊಡಗಿನ ಪಲ್ಸ್ ಅನ್ನು ತಿಳಿಯಬೇಕೆಂದರೆ ಕಾಫಿಯಂತೆ ಹಾಕಿಯನ್ನೂ ಅರಿಯಬೇಕು. ಕೊಡಗಿನ ಇತಿಹಾಸದ ಹಿಂದೆ ಕಂಡೂ ಕಾಣದಂತೆ ಈ ಹಾಕಿಯ ಕಥೆ ಬೆರೆತುಕೊಂಡಿದೆ. ಒಂದು ಪುಟ್ಟ ಜಿಲ್ಲೆ ಹಾಕಿಯನ್ನು ಈ ಪರಿಯಲ್ಲಿ ಹಚ್ಚಿಕೊಳ್ಳಬಹುದೇ ಎಂದು ಆಶ್ಚರ್ಯವೂ ಆಗುತ್ತದೆ. ಏಕೆಂದರೆ ಕೊಡಗು ಭಾರತೀಯ ಹಾಕಿಗೆ ತಮ್ಮಲ್ಲಿಂದ ಮಹಾನ್ ಆಟಗಾರರನ್ನು ಕೊಟ್ಟಿತು. ಅದೂ ಬಹು ದೀರ್ಘ ಸಮಯದವರೆಗೆ.

ಫಿಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯನವರು ಮೊದಲು ಹಾಕಿಯಿಂದಲೇ ಬ್ರಿಟೀಷ್ ಅಧಿಕಾರಿಗಳ ಕಣ್ಣಿಗೆ ಬಿದ್ದಿದ್ದರು ಎಂಬುದು ಇತಿಹಾಸದ ಒಂದು ಮಹತ್ವದ ಸಂಗತಿ. ಕಾಲದ ಪ್ರವಾಹದಲ್ಲಿ ಎಲ್ಲವೂ ಮಗ್ಗುಲು ಬದಲಿಸಿಕೊಂಡರೂ ಕೊಡಗಿನಲ್ಲಿ ಹಾಕಿ ಬದಲಾಗಲೇ ಇಲ್ಲ.1861ರಲ್ಲಿ ಯುರೋಪಿನಲ್ಲಿ ಪ್ರಾರಂಭವಾದ ಹಾಕಿಯನ್ನು ಬ್ರಿಟೀಷರು ತಮ್ಮ ವಸಹಾತುಗಳಿಗೆ ಕೊಂಡೊಯ್ದರು. ಆರಂಭದಲ್ಲಿ ಕಲ್ಕತ್ತಾ, ಪಂಜಾಬ್, ಮುಂಬೈಗಳಲ್ಲಿ ಹಾಕಿ ಕ್ಲಬ್ಬುಗಳು ಶುರುವಾದವು. ಆದರೆ ಅ ಹಾಕಿ ಕೇವಲ ಕ್ಲಬ್ಬುಗಳಿಗೆ ಮಾತ್ರ ಸೀಮಿತವಾಯಿತು. ಆದರೆ ಕೊಡಗು ಮತ್ತು ಪಂಜಾಬು ಹಾಕಿಯನ್ನು ಮಗುವಿನಂತೆ ತಬ್ಬಿಕೊಂಡಿತು. ಬ್ರಿಟಿಷರ ನೆಚ್ಚಿನ ಟೈನಿ ಮಾಡಲ್ ಸ್ಟೇಟ್ ಆಗಿದ್ದ ಕೊಡಗಿನ ಮಡಿಕೇರಿಗೆ ಹಾಕಿ 1885-86ರ ಹೊತ್ತಿನಲ್ಲಿ ಹಾಕಿ ಕಾಲಿಟ್ಟಿತು. ಯುರೋಪಿನಿಂದ ತರಿಸಿದ ಚೆಂಡು ಮತ್ತು ಸ್ಟಿಕ್‌ಗಳು ಇಲ್ಲಿ ಈ ಪರಿಯಲ್ಲಿ ಮೋಡಿ ಮಾಡುತ್ತವೆ ಎಂದು ಯಾವ ಬ್ರಿಟೀಷ್ ಅಧಿಕಾರಿಯೂ ಅಂದುಕೊಂಡಿರಲಿಲ್ಲ. ನೋಡ ನೋಡುತ್ತಲೇ ಹಾಕಿಯ ಕಲರವ ಕೊಡಗಿಗೆ ಪಸರಿಸಿತು. ದನ ಮೇಸುವ ಹುಡುಗರೂ ಹಾಕಿ ಆಡತೊಡಗಿದರು. ಮರದ ಕೊಂಬೆಗಳೇ ಹಾಕಿ ಸ್ಟಿಕ್ಕುಗಳಾದವು. ಕಾಡು ಕಾಯಿಗಳೇ ಚೆಂಡುಗಳಾದವು. ಇನ್ನೊಂದೆಡೆ ಕೊಡವರ ಮಾರ್ಷಲ್ ಗುಣವನ್ನು ಅರಿತಿದ್ದ ಬ್ರಿಟಿಷರು ಸೈನ್ಯದಲ್ಲಿ ಕೊಡವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸತೊಡಗಿದರು. ಹಾಕಿಯ ಶಿಸ್ತು, ಹೊಸ ನಿಯಮಗಳು ಊರೊಳಗೂ ಬಂದವು.


ಬ್ರಿಟಿಷ್ ಅಧಿಕಾರಿಗಳೂ ಕೊಡವರೊಡನೆ ಹಾಕಿಯ ಹುಚ್ಚನ್ನು ಹಿಡಿಸಿಕೊಂಡರು. ಅದಕ್ಕೆ ಉದಾಹರಣೆ ಮಡಿಕೇರಿಯ ಖ್ಯಾತ ಮ್ಯಾನ್ಸ್ ಕಾಂಪೌಂಡ್’ ಎಂಬ ಹಾಕಿ ಮೈದಾನ. ಬ್ರಿಟಿಷ್ ಕಾಫಿ ಬೆಳೆಗಾರನಾಗಿದ್ದ ಮ್ಯಾನ್ ಎಂಬಾತ ಹಾಕಿಯ ಹುಚ್ಚಿನಿಂದ ಎಕರೆಗಟ್ಟಲೆ ಕಾಫಿ ತೋಟವನ್ನು ಬೋಳು ಮಾಡಿ ಮೈದಾನವನ್ನೇ ಮಾಡಿಬಿಟ್ಟಿದ್ದ! ಅದೇ ಇಂದಿನ ಮ್ಯಾನ್ಸ್ ಕಾಂಪೌಂಡ್. ಈ ಮ್ಯಾನ್ಸ್ ಕಾಂಪೌಂಡ್ ಇಂದು ನೂರಾರು ಹಾಕಿಯ ಪ್ರತಿಭೆಗಳನ್ನು ತಯಾರು ಮಾಡುತ್ತಿದೆ. ಇಂದು ಮ್ಯಾನ್ ಮತ್ತು ಆತನ ಕುಟುಂಬ ಮಡಿಕೇರಿಯಲ್ಲಿ ಇಲ್ಲದಿರಬಹುದು. ಆದರೆ ಆತನ ಹೆಸರನ್ನು ಹೊತ್ತ ಹಾಕಿ ಮೈದಾನ ಹಾಕಿಯ ತರಬೇತಿ ತಾಣವಾಗಿ ಆತನ ಆಶಯವನ್ನು ಇಂದಿಗೂ ಈಡೇರಿಸುತ್ತಿದೆ. ಬ್ರಿಟಿಷ್ ಕಾಲದಲ್ಲಿ ಪ್ರತೀ ಆದಿತ್ಯವಾರ ಈ ಮ್ಯಾನ್ಸ್ ಕಾಂಪೌಂಡಿನಲ್ಲಿ ಪಂದ್ಯಾವಳಿಗಳು ನಡೆಯುತ್ತಿತ್ತು. ದಕ್ಷಿಣ ಕೊಡಗಿನಿಂದಲೂ ಕೊಡವರನ್ನು ಕರೆಸಿಕೊಂಡು ಬ್ರಿಟಿಷರು ತಂಡಗಳನ್ನು ಕಟ್ಟುತ್ತಿದ್ದರು. ಹಿರಿಯ ಅಧಿಕಾರಿಗಳ ಪ್ರವಾಸ, ಕೆಲವರ ಸ್ಮರಣಾರ್ಥ ಮ್ಯಾನ್ಸ್ ಕಾಂಪೌಂಡಿನಲ್ಲಿ ಪಂದ್ಯಾವಳಿಗಳು ನಡೆಯುತ್ತಿದ್ದವು. ಆ ಹೊತ್ತಿಗೆ ವೃತ್ತಿಪರ ಹಾಕಿ ಕೊಡಗಿಗೆ ಕಾಲಿಟ್ಟಾಗಿತ್ತು. 19ನೇ ಶತಮಾನದ ಕೊನೆಯ ಭಾಗದಲ್ಲಿ ಪಟ್ಟಡ ಸೋಮಯ್ಯ ಎಂಬ ಮಹಾನ್ ಆಟಗಾರರೊಬ್ಬರು ಎತ್ತಿನ ಗಾಡಿಯಲ್ಲಿ ತಂಡವನ್ನು ಕಟ್ಟಿಕೊಂಡು ಬೆಂಗಳೂರಿನ ಕಂಟೋನ್ಮೆಂಟ್ ಪ್ರದೇಶಕ್ಕೆ ಹಾಕಿ ಆಡಲು ಹೋಗುತ್ತಿದ್ದರು! ಕೊಡಗಿನ ಜನರ ಹಾಕಿಯ ಮೇಲಿನ ನಿಷ್ಠೆ, ಬದ್ಧತೆ, ಆಸಕ್ತಿ ಅಂಥದ್ದು. ಅದೆಂದೂ ಕೊನೆಯಾಗಲಿಲ್ಲ. ಬದಲಿಗೆ ಅದು ಹೆಚ್ಚೇ ಆಯಿತು. ಕ್ರಮೇಣ ಕೊಡಗಿನ ಅಲ್ಲಲ್ಲಿ ಹಾಕಿ ಕ್ಲಬ್ಬುಗಳು ಆರಂಭವಾದವು.

60ರ ದಶಕದಲ್ಲಿ ಕೊಡಗಿನ ಪ್ರೈಮರಿ ಶಾಲಾ ಮೇಷ್ಟ್ರುಗಳೇ ಒಂದು ತಂಡಕಟ್ಟಿಕೊಂಡು ದೇಶದ ಪ್ರಮುಖ ಪಂದ್ಯಾವಳಿಗಳಲ್ಲಿ ಭಾಗವಹಿಸುತ್ತಿದ್ದರು. ಹಲವು ಅಂತಾರಾಷ್ಟ್ರೀಯ ತಂಡಗಳೊಟ್ಟಿಗೆ ಆಡಿದ ಶ್ರೇಯಸ್ಸು ಈ ಕೂರ್ಗ್ ಟೀಚರ್ಸ್ ಟೀಮ್’ನದ್ದು. ಒಮ್ಮೆ ಮದರಾಸಿನಲ್ಲಿ ಶ್ರೀಲಂಕಾ ತಂಡದ ವಿರುದ್ಧ ಇಪ್ಪತ್ತು ಗೋಲುಗಳನ್ನು ಭಾರಿಸಿದ ದಾಖಲೆಯನ್ನೂ ಈ ಸ್ಥಳೀಯ ತಂಡ ಮಾಡಿತ್ತು! ಈ ತಂಡದ ಕೆಲವು ಸದಸ್ಯರು ಅನಂತರ ಭಾರತ ತಂಡವನ್ನೂ ಪ್ರತಿನಿಧಿಸಿದ್ದರು. ಇಲ್ಲಿನ ಹಾಕಿಯ ಹುಚ್ಚಿಗೆ ಇದಕ್ಕಿಂತ ಇನ್ನೇನು ಉದಾಹರಣೆ ತಾನೇ ಬೇಕು? ಇಲ್ಲಿ ಹಾಕಿ ಎಂದರೆ ಇಂಥ ಹಲವು ಅದ್ಭುತಗಳ ಕಂತೆ. ಹಾಕಿ ಎಂದರೆ ಸಾಕ್ಷಾತ್ ಸಮರ. ಹಾಕಿ ಎಂದರೆ ಉಳಿದೆಲ್ಲದರ ಮೈಮರೆವು. ಕೊಡಗಿನ ಹಾಕಿಯ ಇಂಥ ಗುಣಗಳಿಗೆ ಆಧುನಿಕ ಕಾಲದಲ್ಲಿ ನೀರೆರೆದು ಪೋಷಿಸಿದವರು ಅದೇ ಪಾಂಡಂಡ ಕುಟ್ಟಪ್ಪನವರು.ಅಂಥ ಹಾಕಿ ಹಬ್ಬಕ್ಕೆ ಇದೀಗ 20 ನೇ ವರ್ಷ. ಅಂತಾರಾಷ್ಟ್ರೀಯ ಗುಣಮಟ್ಟದ ಅಂಪೈರುಗಳು. ಸುಸಜ್ಜಿತ ಎರಡು ಮೈದಾನಗಳು. ಶಿಸ್ತು, ಸಮಯಪಾಲನೆ. ಪ್ರತೀ ತಂಡಕ್ಕೂ ಮ್ಯಾನೇಜರು ಮತ್ತು ಕೋಚ್‌ಗಳು, ಉತ್ಸಾಹ, ಬೆಂಬಲಿಗರು. ಕೇಕೆ, ನಗು, ಉಸ. ಲಿಂಗಭೇದವಿಲ್ಲ, ವಯಸ್ಸಿನ ಭೇದವಿಲ್ಲ, ವೃತ್ತಿಭೇದವಿಲ್ಲ. ಕೆಲವು ತಂಡಗಳಲ್ಲಿ ನ್ಯೂಟ್ರಿಶನ್ ಮತ್ತು ವೈದ್ಯರುಗಳು!

ಎಪ್ಪತ್ತಕೂ ಹೆಚ್ಚಿನ ಅಂತಾರಾಷ್ಟ್ರೀಯ ಖ್ಯಾತಿಯ ಆಟಗಾರರು. ಆಡಲೆಂದೇ ಮಿಲಿಟರಿಯಿಂದ ಬಂದಿರುವ ಯೋಧರು. ದೊಡ್ಡವರೊಂದಿಗೆ ಮೈದಾನಕ್ಕಿಳಿದ ಪುಟ್ಟಪುಟ್ಟ ಮಕ್ಕಳು, ಅಣ್ಣಂದಿರೊಡಗೂಡಿ ಆಡುವ ತಂಗಿಯರು, ಗಂಡ ಹೆಂಡಿರಿರುವ ತಂಡಗಳು. ಇಂಥ ನೂರಾರು ಕೌತುಕಗಳಿಗೆ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಮೈದಾನ ಸಾಕ್ಷಿಯಾಗುತ್ತಿದೆ. ಎ ಟಿವಿಯಲ್ಲಿ ಕಂಡಿದ್ದ ಆಟಗಾರನ ಆಟವನ್ನು ಜನ ಪ್ರತ್ಯಕ್ಷ ನೋಡುವಂತಾಗಿದೆ.ಅತ್ತ ಮಲಯಾದಲ್ಲಿ ವಿಶ್ವಕಪ್‌ನಷ್ಟೇ ಪ್ರತಿಷ್ಠಿತವೆನಿಸುವ ಅಜ್ಲಾನ್ ಷಾ ಟೂರ್ನಿ ಮುಗಿದಿದೆ. ಇತ್ತ ಕೊಡಗಿನಲ್ಲಿ ಅಜ್ಲಾನ್ ಷಾ ಟೂರ್ನಿಗಿಂತಲೂ ದೊಡ್ಡ ಶಾಂತೇಯಂಡ ಕಪ್’ ಹಾಕಿ ಉತ್ಸವ ನಡೆಯುತ್ತಿದೆ. ಎರಡೂ ಪದ್ಯಾವಳಿಯ ಹಿಂದೆ ಕಾಣುವುದು ಕೇವಲ ಒಬ್ಬ ವ್ಯಕ್ತಿಯ ಹುರುಪು. ಎರಡೂ ಹಾಕಿಯ ದಂತ ಕಥೆಗಳು. ಇಬ್ಬರೂ ಹಾಕಿಯ ಉದ್ಧಾರಕರು. ಅಂಥ ಪರಂಪರೆಯನ್ನು 20 ವರ್ಷದಲ್ಲಿ ಸ್ಮರಣೀಯತೆಯಿಂದ, ಅಚ್ಚುಕಟ್ಟುತನದಿಂದ ನಡೆಸಿಕೊಂಡುಹೋಗುತ್ತಿರುವ ಗೆಳೆಯ ಶಾಂತೇಯಂಡ ರವಿ ಕುಶಾಲಪ್ಪನವರ ಶ್ರಮ, ಏಷ್ಯನ್ ಹಾಕಿಯ ಸೊಗಡು ಎಲ್ಲವನ್ನೂ ನೋಡಲು ಮಡಿಕೇರಿಗೇ ಹೋಗಬೇಕು.






hockey

 •  0 comments  •  flag
Share on Twitter
Published on April 23, 2016 00:53

April 22, 2016

April 21, 2016

April 16, 2016

ಮುಖ್ಯಮಂತ್ರಿಯವರು ದಿಢೀರನೇ ಎದ್ದು ರಾಜ್ಯಪ್ರವಾಸ ಹೊರಡುವಂತೆ ಮಾಡಿದ ಆ ಬರ ಸಿಡಿಲು ಯಾವುದು?!

ಮುಖ್ಯಮಂತ್ರಿಯವರು ದಿಢೀರನೇ ಎದ್ದು ರಾಜ್ಯಪ್ರವಾಸ ಹೊರಡುವಂತೆ ಮಾಡಿದ ಆ ಬರ ಸಿಡಿಲು ಯಾವುದು?!


ಇಂಥದ್ದೊಂದು ಪ್ರಶ್ನೆ ನಿಮ್ಮನ್ನೂ ಕಾಡುತ್ತಿರಬೇಕಲ್ಲವೆ? ಈ ಬಾರಿ, ಅಂದರೆ 2015ರಲ್ಲಿ ನಿರೀಕ್ಷಿತ ಪ್ರಮಾಣದ ಮಳೆ ಬರುವುದಿಲ್ಲ, ಮಾನ್ಸೂನ್ ದುರ್ಬಲವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು 2015 ಮೇನಲ್ಲಿ. ಅದಾಗಲೇ 10 ಬಾರಿ ಬಜೆಟ್ ಮಂಡಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾನ್ಸೂನ್ ದುರ್ಬಲವಾದರೆ, ಕೃಷಿ ಉತ್ಪನ್ನ ಕಡಿಮೆಯಾದರೆ ರಾಜ್ಯದ ಅರ್ಥವ್ಯವಸ್ಥೆ, ಹಣಕಾಸು ಸ್ಥಿತಿ ಮೇಲೆ ಆಗುವ ದುಷ್ಪರಿಣಾಮ, ಬೊಕ್ಕಸದ ಮೇಲಿನ ಹೊರೆ ಹಾಗೂ ಬಡವರ ಹೊಟ್ಟೆ ಮೇಲಿನ ಬರೆಯ ಅಂದಾಜು ಆಗಲೇಬೇಕು ತಾನೇ? ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿ ಯಾಗಿದ್ದಾಗ ಇಂತಹ ಪ್ರಕೃತಿಯ ಏರುಪೇರುಗಳು, ವಿಕೋಪಗಳು ಹಾಗೂ ತುರ್ತು ಸನ್ನಿವೇಶಗಳು ಸಂಭವಿಸಿದರೆ ಕೂಡಲೇ ಜನರ ಕಷ್ಟಕ್ಕೆ ಸ್ಪಂದಿಸುವುದಕ್ಕಾಗಿಯೇ ಒಂದು ಆವರ್ತ ನಿಧಿಯನ್ನು ಸ್ಥಾಪನೆ ಮಾಡಿ 500 ಕೋಟಿಯನ್ನು ಕಾಪಿಟ್ಟಿದ್ದರು. ಕೇಂದ್ರ ಸರ್ಕಾರ ಅಕ್ಕಿ, ಜೋಳಕ್ಕೆ 1350 ರೂ. ಬೆಂಬಲ ಬೆಲೆಯನ್ನು ಕೊಟ್ಟಾಗ, ಅದು ಸಾಕಾಗುವುದಿಲ್ಲ ಎಂದು ರಾಜ್ಯದ ಬೊಕ್ಕಸದಿಂದ ಕ್ವಿಂಟಾಲ್ಗೆ 150 ರೂ. ಸೇರಿಸಿ 1500 ಕೊಟ್ಟು ರೈತನ ನೋವಿಗೆ ಸ್ಪಂದಿಸಿದ್ದರು. ಇನ್ನು ಹೇಳಿ ಕೇಳಿ 10 ಬಜೆಟ್ ಮಂಡಿಸಿದ ವ್ಯಕ್ತಿಗೆ, ಜತೆಗೆ ಎರಡು ಬಾರಿ ಉಪಮುಖ್ಯಮಂತ್ರಿಯೂ ಆಗಿ ದೀರ್ಘ ಅನುಭವವಿದ್ದ ಸಿದ್ದರಾಮಯ್ಯನವರಿಗೆ ಇನ್ನೆಷ್ಟು ದೂರದೃಷ್ಟಿ, ಜಾಗರೂಕತೆ ಇರಬೇಕು ಹೇಳಿ? ರಾಜ್ಯ ತುರ್ತು ವಿಕೋಪ ಪರಿಹಾರ ನಿಧಿ(ಎಸ್ ಡಿಅರ್ ಎಫ್ )ಗೆ ಒಂದಷ್ಟು ದುಡ್ಡು ಹಾಕಿ, ಕೇಂದ್ರ ಸರ್ಕಾರದ ಪಾಲನ್ನು ಪಡೆದುಕೊಂಡು ಸನ್ನದ್ಧವಾಗಿ ಇರಬೇಕಿತ್ತು ತಾನೇ?


ಆದರೆ ಸಿದ್ದರಾಮಯ್ಯನವರು ಮಾಡಿದ್ದೇನು? ಮಂಡ್ಯದಲ್ಲಿ ತಾನೇ ಬೆಳೆದಿದ್ದ ಕಬ್ಬಿನ ಬೆಳೆಗೆ ಬೆಂಕಿಯಿಟ್ಟು ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು ಕಳೆದ ವರ್ಷದ ಜುಲೈನಲ್ಲಿ. ರೈತರ ಆತ್ಮಹತ್ಯೆ ಸಂಖ್ಯೆ ನವಂಬರ್ ವೇಳೆಗೆ ಸಾವಿರ ದಾಟಿತು. ಬಿ.ಎಸ್. ಯಡಿಯೂರಪ್ಪನವರು ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದು ಚಳಿಗಾಲದ ಅಧಿವೇಶನದಲ್ಲಿ. ಈಗ ಸಂಸತ್ತಿನ ಬಜೆಟ್ ಅಧಿವೇಶನದ ಮೊದಲ ಭಾಗ ಪೂರ್ಣಗೊಂಡು ಏಪ್ರಿಲ್ ಅರ್ಧ ಮುಗಿದಿದೆ. ಈಗಾಗಲೇ ಭಾರತೀಯ ಹವಾಮಾನ ಇಲಾಖೆ, 2016ರಲ್ಲಿ ನಿರೀಕ್ಷೆಗಿಂತಲೂ ಹೆಚ್ಚು ಮಳೆಯಾಗಲಿದೆ ಎಂಬ ಸಿಹಿ ಸುದ್ದಿ ಕೊಟ್ಟಿದೆ. ಅದರಿಂದ ಉತ್ಸುಕಗೊಂಡು ಷೇರು ಮಾರುಕಟ್ಟೆಯೂ ಪುಟಿದೆದ್ದಿದೆ. ರೈತರು ಮುಂದಿನ ಬಿತ್ತನೆ ಬಗ್ಗೆ ಚಿಂತಿಸತೊಡಗಿದ್ದಾರೆ. ಆದರೆ ಕಳೆದ ಜೂನ್ಫ ಜುಲೈನಲ್ಲೇ ಎಚ್ಚೆತ್ತುಕೊಳ್ಳಬೇಕಾಗಿದ್ದ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗ ದೀರ್ಘ ನಿದ್ದೆಯಿಂದ ಎದ್ದು ದಿಢೀರ್ ಅಂತ ಬರಪೀಡಿತ ಪ್ರದೇಶಗಳ ಪ್ರವಾಸಕ್ಕೆ ಹೊರಟಿದ್ದಾರಲ್ಲಾ ಏನು ಕಾರಣ ಸ್ವಾಮಿ? ಅಂತ ಕಷ್ಟವಾದರೂ ಏನು ಬಂದಿದೆ ಅವರಿಗೆ? ಅಥವಾ ಯಾವುದಾದರೂ ಬರ‘ಸಿಡಿಲು’ ಬಡಿಯಿತಾ? ಕಳೆದ ಮೂರು ವರ್ಷಗಳಿಂದ ಯಾರೂ ಏನೇ ಟೀಕೆ ಮಾಡಿದರೂ ನನ್ನ ನಿದ್ರೆಗೆ ಭಂಗವಿಲ್ಲ ಎಂಬಂತಿದ್ದವರನ್ನು ಬಡಿದೆಬ್ಬಿಸಿದ ಆ ವ್ಯಕ್ತಿಯಾದರೂ ಯಾರು?


ಬಿಎಸ್ ವೈ  ಅ.ಓ.ಅ. (Also Known As) ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ! ಮಾಜಿ ಪ್ರಧಾನಿ ದೇವೇಗೌಡರು, ಹೂಬ್ಲೋ ವಾಚ್ ವಿಚಾರವಿಟ್ಟುಕೊಂಡು ಹೊರಟ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮೂರು ವರ್ಷಗಳಲ್ಲಿ ಮಾಡಲಾಗದ ಪರಿಣಾಮವನ್ನು ‘ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿಎಸ್ ವೈ ’ ಎಂಬ ಯುಗಾದಿಯ ಒಂದು ಘೋಷಣೆ ಕ್ಷಣಮಾತ್ರದಲ್ಲಿ ಮಾಡಿದೆ ಎಂದರೆ ಆ ವ್ಯಕ್ತಿಯ ಬಗ್ಗೆ ಮುಖ್ಯಮಂತ್ರಿಯವರಿಗೆ ಅದೆಂಥ ಆತಂಕವಿರಬಹುದು?! ಬಿಎಸ್ ವೈ  ವಿರುದ್ಧ ದಾಖಲಾಗಿದ್ದ ಕೇಸನ್ನು ಹೈಕೋರ್ಟ್ ರದ್ದು ಮಾಡಿದ್ದು ಕಳೆದ ಡಿಸೆಂಬರ್ ನಲ್ಲಿ . ಈಗ ಸುಪ್ರೀಂಕೋರ್ಟ್ ಮೇಲ್ಮನವಿ ಸಲ್ಲಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆಯೆಂದರೆ ಸಿದ್ದರಾಮಯ್ಯನವರಿಗೆ ನಿದ್ರೆ ಸಂಪೂರ್ಣವಾಗಿ ಬಿಟ್ಟಿದೆ ಎಂದೇ ಅರ್ಥವಲ್ಲವೆ? ಅಥವಾ ನಿದ್ರೆಯನ್ನು ಅವರು ಕಳೆದುಕೊಂಡಿರಬೇಕು ತಾನೇ? ಒಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದು ಮೂರು ವರ್ಷ ತುಂಬುವುದರೊಳಗೇ 2018ರಲ್ಲಿ 2008 ಪುನರಾವರ್ತನೆಯಾಗುವ ಸ್ಪಷ್ಟ ಸೂಚನೆಗಳು ಸಿಗುತ್ತಿವೆ. ಜನ ಮತ್ತೊಂದು ಚುನಾವಣೆಯನ್ನು ಈಗಾಗಲೇ ಇದಿರು ನೋಡಲಾರಂಭಿಸಿದ್ದಾರೆ.


ಹಾವೇರಿಯಿಂದ ಹೊರಟ ರೈತ ಚೈತನ್ಯ ಯಾತ್ರೆ ಮೈಸೂರಿನಲ್ಲಿ ಮುಕ್ತಾಯಗೊಂಡ ಸಂದರ್ಭದಲ್ಲಿ ನೆರೆದಿದ್ದ ೩೫ ಸಾವಿರ ಜನಸ್ತೋಮವನ್ನು ಕಂಡಾಗಲೇ ಮತ್ತೆ ರಾಜ್ಯದಲ್ಲಿ ಬಿಎಸ್ ವೈ ಹವಾ ಏಳುತ್ತಿದೆ ಎಂಬುದನ್ನು ಸಿದ್ದರಾಮಯ್ಯನವರು ಅರ್ಥಮಾಡಿಕೊಳ್ಳಬಹುದಿತ್ತು. ಬಿಜೆಪಿ ಅತ್ಯಂತ ದುರ್ಬಲ ಎನಿಸಿಕೊಂಡಿರುವ ತಮ್ಮ ತವರಿನಲ್ಲೇ ಇಷ್ಟು ಜನ ಸೇರಿದ್ದರ ಹಿಂದಿರುವ ಮರ್ಮವೇನು ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಬಹುದಿತ್ತು. ಈಗಂತೂ ಕಾಲ ಮೀರಿ ಹೋಗಿದೆ. ಎಲ್ಲೇ ಹೋದರೂ ಜನರ ಬಾಯಿಂದ ಬಿಎಸ್ವೈ ಹೆಸರು ಸಹಜ ಹಾಗೂ ಸ್ವಾಭಾವಿಕವಾಗಿ ಮೊಳಗುತ್ತಿದೆ. ಭಾಷಣದ ಆರಂಭದಲ್ಲಿ ವೇದಿಕೆಯ ಮೇಲಿರುವ ಗಣ್ಯರ ಹೆಸರು ಉಲ್ಲೇಖಿಸುವಾಗ ಬಿಎಸ್ ವೈ ಹೆಸರನ್ನು ಉಲ್ಲೇಖಿಸಿದರೂ ಸಾಕು ಚಪ್ಪಾಳೆ ಮುಗಿಲು ಮುಟ್ಟುತ್ತಿದೆ. ಬರೀ ವೀರಶೈವರು ಮಾತ್ರವಲ್ಲ, ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲೂ ಬಿಎಸ್ ವೈ ಮಾತು ಕೇಳಿ ಬರುತ್ತಿದೆ.


ನಮ್ಮವರೇ ಮುಖ್ಯಮಂತ್ರಿಯಾದರೂ ನಮಗೇನು ಸಿಕ್ಕಿತು, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಕನಕ ಪ್ರಾಧಿಕಾರ ಸ್ಥಾಪನೆ ಮಾಡಿ 24 ಕೋಟಿ ರೂ. ಕೊಟ್ಟರು, ಕನಕ ಜಯಂತಿ ಆರಂಭಿಸಿದರು ಎಂದು ಕುರುಬ ಜನಾಂಗವೂ ಮಾತನಾಡಿಕೊಳ್ಳುತ್ತಿದೆ. ಇಷ್ಟಕ್ಕೂ ಯಾಕಾಗಿ, ಯಾವ ಕಾರಣಕ್ಕಾಗಿ ಜನ ಬಿಎಸ್ ವೈರನ್ನು ನೆನಪಿಸಿಕೊಳ್ಳುತ್ತಿದ್ದಾರೆ, ಹಳೆಯದ್ದನ್ನೆಲ್ಲ ಮರೆತಿದ್ದಾರೆ, ಅವರ ನಾಯಕತ್ವಕ್ಕಾಗಿ ಹಾತೊರೆಯುತ್ತಿದ್ದಾರೆ ಅಂದುಕೊಂಡಿರಿ?

ಖಂಡಿತ ಯಾರೂ ಅವರಿಗೆ ಶುದ್ಧಹಸ್ತತೆಯ ಸರ್ಟಿಫಿಕೆಟ್  ನೀಡುತ್ತಿಲ್ಲ. ಅವರ ತಪ್ಪನ್ನು ಟೀಕಿಸಿ ನಾನೂ ಹತ್ತಾರು ಬಾರಿ ಬರೆದಿದ್ದೇನೆ. ನಮ್ಮ ರಾಜಕಾರಣಿಗಳಲ್ಲಿ ಒಂದು ಪ್ರವೃತ್ತಿಯಿದೆ. ಏನೇ ತಪ್ಪು ಮಾಡಿದರೂ ಅದಕ್ಕೊಂದು ನೆಪ, ಸಮಜಾಯಿಷಿ ಕೊಡುತ್ತಾರೆ. ತಪ್ಪು ಒಪ್ಪಿಕೊಳ್ಳುವ ಜಾಯಮಾನ ಅವರದ್ದಲ್ಲ. ಆದರೆ ತಮ್ಮಿಂದಾದ ತಪ್ಪನ್ನು ಒಪ್ಪಿಕೊಂಡು, ಮಾಡಿದ ಅಚಾತುರ್ಯಗಳಿಗೆ ಜನರ ಕ್ಷಮೆಯಾಚಿಸಿದಂಥ ವ್ಯಕ್ತಿ ಯಡಿಯೂರಪ್ಪನವರು. ಲೋಕಾಯುಕ್ತ ಸಂತೋಷ್ ಹೆಗ್ಡೆ ರಾಜೀನಾಮೆ ಪ್ರಕರಣ ನಡೆದಾಗ ‘ಶ್ರದ್ಧೆಯ ತಾಯಂದಿರೇ, ತತ್ವಾದರ್ಶದ ಶ್ರಾದ್ಧ ನೋಡಿಕೊಂಡು ಸುಮ್ಮನಿರಬೇಕಾ?’ ಎಂಬ ಲೇಖನದಲ್ಲಿ ಅವರನ್ನು ಟೀಕಿಸಿ ಬರೆದಿದ್ದೆ. ಲೇಖನ ಪ್ರಕಟವಾದ ದಿನ ಅವರು ಉಡುಪಿಯಲ್ಲಿದ್ದರು. ನನಗೆ ಕರೆ ಬಂತು. ಇನ್ನು ಮುಂದೆ ಸರಿಪಡಿಸಿಕೊಂಡು ಹೋಗುತ್ತೇನೆ ಎಂದರು. ಒಂದು ಪ್ರತಿಷ್ಠಿತ ರಾಜ್ಯದ ಮುಖ್ಯಮಂತ್ರಿ ಒಬ್ಬ ಸಾಮಾನ್ಯ ಪತ್ರಕರ್ತನಿಗೆ ಕರೆ ಮಾಡಿ ಇಂತಹ ಮಾತುಗಳನ್ನಾಡಬೇಕೆಂದರೆ ಆ ವ್ಯಕ್ತಿ ಎಂತಹ ಸಂವೇದನಾಶೀಲರೆಂಬುದನ್ನು ಊಹಿಸಿ? ಅವರು ಮುಖ್ಯಮಂತ್ರಿಯಾಗಿದ್ದಾಗ ಬೆಳಗ್ಗೆ 8 ಗಂಟೆಯ ತಿಂಡಿಗೆ ಮೊದಲು ಆ ದಿನದ ಎಲ್ಲ ಪತ್ರಿಕೆಗಳ ವರದಿಗಳನ್ನು ಪಟ್ಟಿ ಮಾಡಿ, ಸಮಸ್ಯೆ ನಿವಾರಣೆಗೆ ಯಾವ ಕ್ರಮ‘ಕೈಗೊಳ್ಳಬೇಕೆಂಬುದನ್ನು ಸಿದ್ಧಮಾಡಿ ಅಧಿಕಾರಿಗಳು ಅವರ ಟೇಬಲ್ಲಿನ ಮೇಲಿಟ್ಟಿರಬೇಕಿತ್ತು. ಸೂಕ್ತ ಕ್ರಮಕ್ಕೆ ಸೂಚನೆ ಕೊಟ್ಟ ನಂತರವೇ ಬ್ರೇಕ್ಫಸ್ಟ್. ಹೌದು,


ಯಡಿಯೂರಪ್ಪನವರ ಸಿಟ್ಟು ಸೆಡವುಗಳ ಹಿಂದೆ ಹೆಂಗರುಳೂ ಇದೆ. ಖ್ಯಾತ ವಾಗ್ಮಿಗಳೂ, ವಿಧಾನ ಪರಿಷತ್ ಸದಸ್ಯರೂ ಆದ ಗೋ. ಮಧುಸೂದನ್ ಅವರು ಯಡಿಯೂರಪ್ಪನವರ ವ್ಯಕ್ತಿತ್ವವನ್ನು ‘ಅವರು ಶೀಘ್ರ ಕೋಪಿಯೇ ಹೊರತು, ದೀರ್ಘ ದ್ವೇಷಿಯಲ್ಲ’ ಎಂದು ಒಂದೇ ವಾಕ್ಯದಲ್ಲಿ ಕಟ್ಟಿಕೊಡುತ್ತಾರೆ. ಇಂತಹ ಶೀಘ್ರ ಕೋಪ, ದುಡುಕುಗಳಿಂದ ಅವರಿಂದ ಅಚಾತುರ್ಯಗಳಾಗಿದ್ದೂ ಇದೆ. ಆದರೆ ತಪ್ಪು, ಅಚಾತುರ್ಯಗಳಿಗಿಂತ ಅವರು ವಿರೋಧಿಗಳ ಪಿತೂರಿಗೆ ಬಲಿಯಾಗಿದ್ದೇ ಹೆಚ್ಚು!


ಅವರನ್ನು ತೀವ್ರ ಮುಜುಗರಕ್ಕೆ ಸಿಲುಕಿಸಿದ ಎಫಐಆರ್ ವಿಚಾರವನ್ನೇ ತೆಗೆದುಕೊಳ್ಳಿ. ಸಿಎಜಿ (ಮಹಾಲೆಕ್ಕ ಪರಿಶೋಧಕ) ರಿಪೋರ್ಟ್ ಬಂದಾಗ ಅದರಲ್ಲಿ ಸಾರ್ವಜನಿಕ ಹಣ ಪೋಲಾಗಿದ್ದು, ವ್ಯವಸ್ಥೆಯಲ್ಲಿ ವ್ಯತ್ಯಯಗಳಾಗಿದ್ದು ಕಂಡುಬಂದರೆ ಮೊದಲಿಗೆ ಅದು ಪಬ್ಲಿಕ್ ಅಕೌಂಟ್ಸ್ ಕಮಿಟಿ ಅಥವಾ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಹೋಗುತ್ತದೆ. ಅಲ್ಲಿಂದ ಶಾಸನಸಭೆಯ ಮುಂದೆ ಚರ್ಚೆಗೆ ಬರುತ್ತದೆ. ಅಲ್ಲೂ ವ್ಯತ್ಯಯಗಳು ಕಾಣುತ್ತಿರುವುದು ಸಾಬೀತಾದರೆ ಮುಂದಿನ ಕ್ರಮದತ್ತ ಸಾಗುತ್ತದೆ. ಆದರೆ ಬಿಎಸ್ ವೈ ವಿಷಯದಲ್ಲಿ ಈ ಯಾವ ಪ್ರಕ್ರಿಯೆಗಳೂ ನಡೆಯಲಿಲ್ಲ. ಅವರ ಮುಖ್ಯಮಂತ್ರಿ ಗಾದಿಯನ್ನು, ಇಮೇಜು, ವ್ಯಕ್ತಿತ್ವ, ವರ್ಚಸ್ಸನ್ನು ಫಸಿಗೆ ಕಳುಹಿಸುವ ಸಲುವಾಗಿ ರಾಜ್ಯದ ಪಾಲಿಗೆ ಭಾರಧ್ವಾಜರಾಗಿದ್ದ ಕಾಂಗ್ರೆಸ್ನ ಏಜೆಂಟ್ರೊಬ್ಬರು ತನಿಖೆಗೆ ಅಸ್ತು ನೀಡಿದರು, ಸುಖಾಸುಮ್ಮನೆ ಖಾಸಗಿ ದೂರು ನೀಡಿದಾಗಲೂ ಸಂವಿಧಾನಬಾಹಿರವಾಗಿ ಎಫಐಆರ್ ದಾಖಲಿಸಲು ಅನುಮತಿ ನೀಡಿದರು, ಜೈಲಿಗೆ ಹೋಗುವಷ್ಟರ ಮಟ್ಟಿಗೆ ನೋವು ತಂದರು. ಮತ್ತೊಂದು ಕಡೆ ಬಳ್ಳಾರಿಯ ಅದಿರು ಲಾಬಿ ಸತತವಾಗಿ ಬೆದರಿಸಿತು. ನಂಬಿದವರೂ ಕೈಕೊಟ್ಟರು, ದಿಲ್ಲಿಯ ಶ್ರೀರಕ್ಷೆಯಂತೂ ಅವರಿಗಿರಲಿಲ್ಲ. ಇಷ್ಟಾಗಿಯೂ ವೈಯಕ್ತಿಕ ನೋವು ಹಾಗೂ ಆತಂಕಗಳ ನಡುವೆಯೂ ರೈತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದ ಬಿಎಸ್ ವೈ ರೈತರನ್ನು ಮರೆಯಲಿಲ್ಲ.


ಉಪಮುಖ್ಯಮಂತ್ರಿಯಾಗಿದ್ದಾಗ ಸಾಲ ಮನ್ನಾ ಮಾಡಿದ್ದ ಅವರು, ಮುಖ್ಯಮಂತ್ರಿಯಾದ ನಂತರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿದ್ದ ಸಾಲವನ್ನೂ ಒಳಪಟ್ಟಂತೆ ರೈತನ ಬಡ್ಡಿ ಮನ್ನಾ ಮಾಡಿದರು. ಕರೆಂಟಿನ ಬಿಸಿಯಲ್ಲಿ ರೈತನ ಬದುಕು ಮತ್ತು ಬೆಳೆ ಸುಟ್ಟು ಹೋಗಬಾರದೆಂದು ಭಾವಿಸಿ ಆತನ ಲಕ್ಷಾಂತರ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಿದರು.


ಇವತ್ತು ಜನ ಹಳೆಯದ್ದನ್ನು ಮರೆತು ಬಿಎಸ್ ವೈ   ಗಾಗಿ ಹಪಾಹಪಿಸುತ್ತಿರುವುದು ಇದೇ ಕಾರಣಕ್ಕೆ! ಈ ಬರವೆನ್ನುವುದು ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾದ ಮೇಲೆ ತಲೆದೋರಿರುವ ಸಮಸ್ಯೆಯಲ್ಲ. ಕಳೆದ 16 ವರ್ಷಗಳಿಂದ ದೇಶ ಹಾಗೂ ನಮ್ಮ ರಾಜ್ಯದ ಒಂದಿಲ್ಲೊಂದು ಭಾಗಗಳು ಬರ, ನೆರೆಗೆ ತುತ್ತಾಗುತ್ತಲೇ ಬಂದಿವೆ. ಆದರೆ ಒಬ್ಬ ಮುಖ್ಯಮಂತ್ರಿಯಾದವರಿಗೆ ದೂರದೃಷ್ಟಿ ಇರಬೇಕಾಗುತ್ತದೆ. ಎಸ್.ಎಂ. ಕೃಷ್ಣ ಅವರು ಮೂರು ವರ್ಷಗಳ ಸತತ ಬರ ಬಂದಾಗ ಅಂತರ್ಜಲ ಮಟ್ಟವನ್ನು ಹೆಚ್ಚಿಸಬೇಕಾದರೆ ಬೀಳುವ ಹನಿ ಹನಿ ನೀರನ್ನೂ ಕಾಪಿಟ್ಟುಕೊಳ್ಳಬೇಕೆಂದು ಭಾವಿಸಿ ಕೆರೆಗಳ ಪುನಶ್ಚೇತನಕ್ಕೆಂದೇ ಕಾಯಕ ಕೆರೆ ಎಂಬ ಯೋಜನೆ ಜಾರಿಗೆ ತಂದಿದ್ದರು. ಅದೇ ರೀತಿ ಬರ ಎದುರಿಸುತ್ತಿದ್ದ ಮೈಸೂರುಫಚಾಮರಾಜನಗರ ಜಿಲ್ಲೆಗಳ ಕೆರೆಗಳು ನೀರಿಗಾಗಿ ಬಾಯ್ಬಿಟ್ಟುಕೊಂಡು ಕುಳಿತಿವೆ, ಬತ್ತಿದ ಕೆರೆಗಳಿಂದಾಗಿ ದನಕರುಗಳು ಬಳಲಿವೆ ಎಂಬುದನ್ನು ಕಂಡಕೂಡಲೇ ಎರಡೂ ಜಿಲ್ಲೆಗಳ ಕೆರೆಗಳಿಗೆ ಕಬಿನಿಯಿಂದ ನೀರು ತುಂಬಿಸಲು 219 ಕೋಟಿ ರೂಪಾಯಿಯನ್ನು ನಿಂತಲ್ಲೇ ಬಿಡುಗಡೆ ಮಾಡಿದವರು ಬಿಎಸ್ ವೈ. ಇವತ್ತು ಮೈದುಂಬಿರುವ ಕೆರೆಗಳು ಬಿಎಸ್ವೈ ಹೆಸರು ಹೇಳುತ್ತಿವೆ. ಇತ್ತ ಸಿದ್ದರಾಮಯ್ಯನವರ ಕಥೆ ಕೇಳಿ… ಇತ್ತೀಚೆಗೆ ಕೆಆರ್ಎಸ್ನಿಂದ ಚಾಮುಂಡೇಶ್ವರಿ ಕ್ಷೇತ್ರದ ೨೦ ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಸುವ ಯೋಜನೆಗೆ ಅಡಿಗಲ್ಲು ಇಟ್ಟರು. ಅದಕ್ಕೂ ಮೊದಲು 4 ಸಾರಿ ಅವರನ್ನು ಶಾಸಕರನ್ನಾಗಿ ಮಾಡಬೇಕಾಗಿ ಬಂತು ಆ ಕ್ಷೇತ್ರದ ಜನರ ದುರದೃಷ್ಟ! ಎರಡು ಸಾರಿ ಉಪಮುಖ್ಯಮಂತ್ರಿಯಾಗಿ, 10 ಬಜೆಟ್ ಮಂಡಿಸಿ, ಮೂರು ವರ್ಷ ಮುಖ್ಯಮಂತ್ರಿಯಾದ ನಂತರ ಇಪ್ಪತ್ತು ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಗೆ ಅಡಿಗಲ್ಲು ಇಟ್ಟಿದ್ದೇ ದೊಡ್ಡ ಸಾಧನೆಯೆಂಬಂತೆ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಾ, ಹೃದಯವನ್ನು ಆರ್ದ್ರ ಮಾಡಿಕೊಂಡು ಭಾವುಕರಾಗಿ ಮುಂದಿನ ಸಾರಿ ವರುಣಾಕ್ಕೆ ಮಗನನ್ನು ನಿಲ್ಲಿಸಿ, ತಾನು ಚಾಮುಂಡೇಶ್ವರಿಗೆ ಮತ್ತೆ ಬರುತ್ತೇನೆ ಎಂದರು! ಅಲ್ಲೂ ಸ್ವಾರ್ಥದ ದೂರದೃಷ್ಟಿಯೇ ಹೊರತು ನಿಜವಾದ ಸಂವೇದನೆಯಲ್ಲ! ಆದರೆ ಶಿವಮೊಗ್ಗವನ್ನು ಒಮ್ಮೆ ಹಿಂತಿರುಗಿ ನೋಡಿ?


ಸಿದ್ದರಾಮಯ್ಯನವರು ಪ್ರತಿನಿಧಿಸಿದ ಚಾಮುಂಡೇಶ್ವರಿಯಲ್ಲಿ ಏನು ಉಳಿದಿದೆ ಗೊತ್ತಾ? ಅಡಿಗಡಿಗೂ ರಿಯಲ್ ಎಸ್ಟೇಟ್ ಕುಳಗಳ ಬಡಾವಣೆಗಳು. ಆರು ಕಾಸಿಗೆ, ಮೂರು ಕಾಸಿಗೆ ಕೃಷಿ ಭೂಮಿಯನ್ನು ಮಾರಿಕೊಂಡು ಕೂಲಿ ಕಾರ್ಮಿಕರಾಗಿರುವ ರೈತರ ದಂಡು. ಖಾಸಗಿಯವರಿಗೆ ರೆಡ್ಕಾರ್ಪೆಟ್ ಹಾಕಿ ನಿರುಮ್ಮಳವಾಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮೂಡಾ). ಸಿದ್ದರಾಮಯ್ಯನವರ ಚಾಮುಂಡೇಶ್ವರಿ, ಖರ್ಗೆಯವರ ಗುರ್ಮಿಟ್ಕಲ್, ಧರ್ಮಸಿಂಗರ ಜೇವರ್ಗಿ, ಬಂಗಾರಪ್ಪನವರ ಸೊರಬದಂತೆ ಸೊರಗಿದ ಕ್ಷೇತ್ರಗಳ ಸಾಲಿಗೆ ಸೇರಿದ್ದರೆ ಮೂರು ವರ್ಷದಲ್ಲಿ ಶಿವಮೊಗ್ಗದ ಚರ್ಯೆಯನ್ನೇ ಬದಲಾಯಿಸಿದವರು ಬಿಎಸ್ ವೈ!

ಅಷ್ಟು ಮಾತ್ರವಲ್ಲ, ರೈತರ ವಿಷಯ ಬಂದರೆ ಅವರು ಮಗುವಾಗುತ್ತಿದ್ದರು. ಹಾಗಾಗಿಯೇ ರಾಜ್ಯದಲ್ಲಿರುವ ಬರಪೀಡಿತ ಪ್ರದೇಶಗಳಲ್ಲೆಲ್ಲ ಕುಡಿಯುವ ನೀರು ಪೂರೈಕೆ ಹಾಗೂ ಕೆರೆಗಳಿಗೆ ನೀರು ತುಂಬಿಸುವ ಕಾಯಕಕ್ಕೆ ಕೈಹಾಕಿದರು. ಜೋಳಕ್ಕೆ, ಭತ್ತಕ್ಕೆ ಕೇಂದ್ರ ಸರ್ಕಾರ ಕೊಡುವ ಕನಿಷ್ಟ ಬೆಂಬಲ ಬೆಲೆಗೆ 150 ರೂ. ಸೇರಿಸಿಕೊಟ್ಟು ಖರೀದಿ ಮಾಡಿದರು. ಮನೆಯಲ್ಲಿ ಹೆಣ್ಣು ಮಗಳು ಹುಟ್ಟಿದರೆ ಅವಳು ಮನೆಗೆ ಭಾರವಲ್ಲ, ಅವಳು ಮನೆಯ ಭಾಗ್ಯಲಕ್ಷ್ಮಿ ಎನ್ನುತ್ತಾ ಅವಳ ಭವಿಷ್ಯಕ್ಕಾಗಿ ಒಂದು ಲಕ್ಷ ರೂಪಾಯಿಯ ಯೋಜನೆ ತಂದರು. ಆ ಹೆಣ್ಣುಮಗಳ ಶಾದಿ ಬಗ್ಗೆ ಯೋಚಿಸಲಿಲ್ಲ, ಅವಳನ್ನ ಶಾಲೆಗೆ ಸೇರಿಸಿ ವಿದ್ಯಾಲಕ್ಷ್ಮಿಯನ್ನಾಗಿ ಮಾಡುವುದಕ್ಕಾಗಿ ಸೈಕಲ್ ಕೊಟ್ಟರು. ರೆಕ್ಕೆ ಪುಕ್ಕ ಬಂದ ಮೇಲೆ ಗೂಡು ತೊರೆದು ಹಾರಿಹೋಗುವ ಹಕ್ಕಿಗಳಂತೆ ವೃದ್ಧ ತಂದೆತಾಯಂದಿರನ್ನು ಊರಲ್ಲಿ ಬಿಟ್ಟು ಮಕ್ಕಳು ಪೇಟೆ ಸೇರಿದರೇನಂತೆ ಆಳುವ ಪಕ್ಷಕ್ಕೆ ಹಿರಿಯರನ್ನು ಸಾಕಿ ಸಲಹುವ ಸಾಮಾಜಿಕ ಜವಾಬ್ದಾರಿಯಿದೆಯೆಂದು ಅರಿತು ಸಂಧ್ಯಾಸುರಕ್ಷಾ ಯೋಜನೆಯನ್ನು ಜಾರಿಗೆ ತಂದರು. ವೃದಾಟಛಿಪ್ಯ, ವಿಧವಾ ವೇತನವನ್ನು ಹೆಚ್ಚಿಸಿದರು. ನಲವತ್ತು ವರ್ಷ ದಾಟಿದ ಅವಿವಾಹಿತ ಹೆಣ್ಣುಮಕ್ಕಳನ್ನೂ ಪಿಂಚಣಿ ಯೋಜನೆಯ ವ್ಯಾಪ್ತಿಗೆ ತಂದರು.


ಸಿದ್ದರಾಮಯ್ಯನವರ ಸರ್ಕಾರ ಅಸ್ತಿತ್ವಕ್ಕೆ ಬಂದ ಪ್ರಾರಂಭದಲ್ಲಿ ಬೆಳಗಾವಿ ಆಧಿವೇಶನದಲ್ಲಿ ಕಬ್ಬುಬೆಳೆಗಾರ ವಿಠ್ಠಲ ಅರಭಾವಿ ಆತ್ಮಹತ್ಯೆ ಮಾಡಿಕೊಂಡ. ಅವರು ವಾರಕ್ಕೊಮ್ಮೆ ಬರುವ ಮೈಸೂರಿನ ಮಾರ್ಗ ಮಧ್ಯದಲ್ಲಿ ಸಿಗುವ ಮಂಡ್ಯದಲ್ಲಿ ತಾನೇ ಬೆಳೆದ ಕಬ್ಬಿನ ಗದ್ದೆಗೆ ಬೆಂಕಿಕೊಟ್ಟು ರೈತ ಸುಟ್ಟುಕೊಂಡು ಸಾವಾದ. ಆದರೆ ಸಿಎಂ ಸ್ಪಂದನೆ ಹೇಗಿತ್ತು? ಬಿಎಸ್ ವೈ ಕೂಡ ಕಬ್ಬು ಬೆಳೆಗಾರರ ಸಮಸ್ಯೆ ಎದುರಿಸಿದ್ದರು. ಕೂಡಲೇ ಕಬ್ಬಿನ ಕಾರ್ಖಾನೆಗಳ ಪುನಶ್ಚೇತನಕ್ಕೆ ಕೈಹಾಕಿದರು. ಬರ, ನೆರೆಯಂಥ ಪ್ರಕೃತಿ ವಿಕೋಪಗಳಾದರೆ ಕೂಡಲೇ ರೈತನ ಸಂಕಷ್ಟಕ್ಕೆ ಸ್ಪಂದಿಸಲು 500 ಕೋಟಿಯನ್ನು ಮೀಸಲಿಡುವ ಆವರ್ತ ನಿಧಿಯನ್ನು ಆರಂಭಿಸಿದರು.


ಡಾ. ಬಾಬಾ ಸಾಹೇಬ್ ಅಂಬೇಡ್ಕರರ 125ನೇ ಜನ್ಮ ಜಯಂತಿಯಂದು ಬಿಎಸ್ ವೈ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ 125ನೇ ಜಯಂತಿಯನ್ನು ರಾಷ್ಟ್ರವ್ಯಾಪಿಯಾಗಿ ಆಚರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು ಮುಂದಾದ ಕೂಡಲೇ ನಮ್ಮ ಮಾಧ್ಯಮಗಳು ಮೋದಿ ಹಾಗೂ ಅಮಿತ್ ಶಾ ಜೋಡಿ ಸೋಷಿಯಲ್ ಎಂಜಿನಿಯರಿಂಗ್ಗೆ ಅಂದರೆ ಎಲ್ಲ ಜಾತಿಗಳಿಗೂ ಪ್ರಧಾನ್ಯತೆ ಕೊಟ್ಟು ಸೆಳೆದುಕೊಳ್ಳುವ ತಂತ್ರಕ್ಕೆ ಕೈಹಾಕಿದ್ದಾರೆ ಎಂದು ವಿಶ್ಲೇಷಣೆ ಮಾಡುತ್ತಿವೆ. ಈ ಸೋಷಿಯಲ್ ಎಂಜಿನಿಯರಿಂಗನ್ನು ಯಡಿಯೂರಪ್ಪನವರು 2008ರಲ್ಲಿ ಮುಖ್ಯಮಂತ್ರಿಯಾದ ಕೂಡಲೇ ಆರಂಭಿಸಿದ್ದರು. ಸಣ್ಣ ಸಣ್ಣ ಜಾತಿಗಳನ್ನೂ ಗುರುತಿಸಿ ಸಮಾವೇಶ ನಡೆಸಿದರು, ಅವರ ಬೇಡಿಕೆ, ನೋವನ್ನು ಆಲಿಸಿ ಸ್ಪಂದಿಸುವ ಕೆಲಸ ಮಾಡಿದರು. ಅವರಲ್ಲಿ ನಾಯಕತ್ವ ಬೆಳೆಸುವ ಕಾರ್ಯಕ್ಕೂ ಕೈಹಾಕಿದ್ದರು. ನಮ್ಮ ಹಿಂದುಳಿದ ಜಾತಿ, ವರ್ಗ, ಜನಾಂಗಗಳಲ್ಲಿ ಹೆಮ್ಮೆಯನ್ನು ಮೂಡಿಸಬೇಕೆಂದು ಕನಕ, ವಾಲ್ಮೀಕಿ ಜಯಂತಿಯನ್ನು ಆರಂಭಿಸಿದರು. ಇಂತಹ ಆದರ್ಶ ವ್ಯಕ್ತಿಯನ್ನು ಮೇಲ್ಪಂಕ್ತಿಯಾಗಿಟ್ಟುಕೊಂಡು ಹೆಮ್ಮೆಯಿಂದ ಮುನ್ನಡೆಯಿರಿ ಎಂಬ ಸಂದೇಶ ಕೊಟ್ಟಿದ್ದರು. 24 ಕೋಟಿ ಕೊಟ್ಟು ಕನಕ ಪ್ರಾಧಿಕಾರ ರಚಿಸಿದರು. ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಗ್ರಾಮ ಮಟ್ಟಗಳಲ್ಲಿ ಅಂಬೇಡ್ಕರ್, ಬಾಬು ಜಗಜೀವನ್ರಾಮ್, ವಾಲ್ಮೀಕಿ, ಕನಕ ಭವನಗಳ ನಿರ್ಮಾಣಕ್ಕೆ ಕೈಹಾಕುವ ಮೂಲಕ ಮದುವೆ, ಮುಂಜಿ ಅಥವಾ ಯಾವುದೇ ಸಮಾರಂಭವಿರಲಿ, ಎಲ್ಲರಂತೆ ಭವ್ಯ ಕಟ್ಟಡಗಳಲ್ಲೇ ಆಚರಿಸಿ ಎಂದು ಸಾಮಾಜಿಕ ನ್ಯಾಯ ಸ್ಥಾಪನೆಗೆ ಮುಂದಾದವರು ಬಿಎಸ್ ವೈ.


ಇತ್ತ 14ನೇ ಹಣಕಾಸು ಆಯೋಗದ ಮುಖಾಂತರ ಪ್ರಧಾನಿ ನರೇಂದ್ರ ಮೋದಿಯವರು ಇತಿಹಾಸದಲ್ಲೇ ಮೊದಲ ಭಾರಿಗೆ ಗ್ರಾಮಪಂಚಾಯಿತಿಗಳಿಗೆ ಲಕ್ಷಾಂತರ ರೂ. ಅನುದಾನವನ್ನು ನೇರವಾಗಿ ನೀಡಿದರೆ, ಅದರಲ್ಲಿ ಕರೆಂಟು ಬಿಲ್ ಬಾಕಿಯನ್ನು ಕಟ್ಟಿ ಎಂದು ಪಂಚಾಯಿತಿಗಳಿಗೆ ಸುತ್ತೋಲೆ ಹೊರಡಿಸಿದ, ಪಂಚಾಯಿತಿಗೆ ಕೇವಲ ೫ಫ೬ ಮನೆಗಳನ್ನು, ಅಂದರೆ ಸದಸ್ಯರ ಸಂಖ್ಯೆಗಿಂತಲೂ ಕಡಿಮೆ ಮನೆ ಕೊಟ್ಟ ವ್ಯಕ್ತಿ ಸಿದ್ದರಾಮಯ್ಯನವರಾದರೆ, ಬಸವ ವಸತಿ ಯೋಜನೆ ಆರಂಭಿಸಿ ಪ್ರತಿ ಪಂಚಾಯಿತಿಗೆ ಗರಿಷ್ಠ 300 ಮನೆಗಳನ್ನು ಕೊಟ್ಟವರು ಬಿಎಸ್ವೈ.

ಅಷ್ಟೇ ಅಲ್ಲ, ಪ್ರತಿ ನಗರ ಸಭೆಗಳಿಗೆ 25 ಕೋಟಿ, ಮಹಾನಗರಪಾಲಿಕೆಗಳಿಗೆ ತಲಾ ವಾರ್ಷಿಕ 50 ಕೋಟಿ ನೀಡಿದ್ದರು. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗೆ ಸೋನಿಯಾ ಗಾಂಧಿ ನಿಯಂತ್ರಿತ ಯುಪಿಎ ಸರ್ಕಾರ ದುಡ್ಡೇ ಕೊಡದೇ ಹೋದಾಗ, ನೀವು ಕೊಡದಿದ್ದರೇನಂತೆ ನಾನೇ ಗ್ರಾಮಗಳ ರಸ್ತೆಯನ್ನು ಅಭಿವೃದಿಟಛಿ ಮಾಡುತ್ತೇನೆಂದು ನಮ್ಮ ಗ್ರಾಮ; ನಮ್ಮ ರಸ್ತೆ ಯೋಜನೆಯನ್ನು ಜಾರಿಗೆ ತಂದರು. 4 ಸಾವಿರ ಸುವರ್ಣ ಗ್ರಾಮಗಳನ್ನು ತಲಾ 75 ಲಕ್ಷದಿಂದ 2 ಕೋಟಿವರೆಗೂ ನೀಡಿ ಅಭಿವೃದಿಟಛಿಪಡಿಸಿದರು. ಖಂಡಿತ ಬಿಜೆಪಿಯವರು ಬೀದಿ ಜಗಳ ಮಾಡಿದ್ದಾರೆ, ಒಳಜಗಳ ಮಾಡಿದ್ದಾರೆ, ಆದರೆ ರಾಜ್ಯದ ಅಭಿವೃದಿಯ ವಿಷಯದಲ್ಲಿ ಮಾತ್ರ ಜಗಳವಾಡಲಿಲ್ಲ. ಹಾಗಾಗಿ ರಾಜ್ಯದ ಪ್ರತಿ ವಿಧಾನಸಭೆ ಕ್ಷೇತ್ರಗಳಲ್ಲೂ ೫ ವರ್ಷಗಳ ಬಿಜೆಪಿ ಆಡಳಿತಾವಧಿಯಲ್ಲಿ ಮಾಡಿದ ಕನಿಷ್ಟ ನಾಲ್ಕೆ ದು ಗಣನೀಯ ಕೆಲಸ – ಕಾರ್ಯಗಳು ಕಾಣುತ್ತವೆ. ಬಹುಶಃ ಈ ಕಾರಣಕ್ಕಾಗಿಯೇ ಜನ ಮತ್ತೆ ಬಿಜೆಪಿ ಸರ್ಕಾರವನ್ನು ಬಯಸಿದ್ದಾರೆ. ಅದರ ಚುಕ್ಕಾಣಿಯನ್ನು ಬಿಎಸ್ ವೈ ಅವರೇ ಹಿಡಿಯಬೇಕೆಂದು ಇಚ್ಛಿಸಿದ್ದಾರೆ.


ಅದನ್ನು ಅರ್ಥಮಾಡಿಕೊಂಡೇ ಯಡಿಯೂರಪ್ಪನವರನ್ನು ಕೇಂದ್ರದ ನಾಯಕರು ರಾಜ್ಯಾಧ್ಯಕ್ಷರನ್ನಾಗಿ ನಿಯುಕ್ತಿ ಮಾಡಿದ್ದಾರೆ. ಇಷ್ಟಕ್ಕೂ ಯಾರು ಲೀಡರ್ ಅನಿಸಿಕೊಳ್ಳುತ್ತಾರೆ ಹೇಳಿ? ಬರುವಾಗ ನಾಲ್ಕಾರು ಕಾರುಗಳಲ್ಲಿ ಭಟ್ಟಂಗಿಗಳನ್ನು ಕರೆದುಕೊಂಡು ಬಂದು, ಇಳಿದ ಕೂಡಲೇ ಅಣ್ಣ ಬಂದ್ರು, ದಾರಿ ಬಿಡಿ ಅನಿಸಿಕೊಳ್ಳುವ ಪುಢಾರಿಗಳಲ್ಲ, ಕಾರಿಂದ ಇಳಿದ ಕೂಡಲೇ ಜನ ಯಾರನ್ನು ಸುತ್ತುವರಿಯುತ್ತಾರೋ ಅವರೇ ನಿಜವಾದ ಲೀಡರ್. ಅಂತಹ ಕರ್ನಾಟಕದ ಒಂದೆರಡು ನಾಯಕರಲ್ಲಿ ಬಿಎಸ್ ವೈ ಅಗ್ರಗಣ್ಯರು. ಇತ್ತ ಅಧ್ಯಕ್ಷಗಾದಿಯನ್ನು ಬಿಟ್ಟು ಕೊಟ್ಟಿರುವ ಪ್ರಹ್ಲಾದ ಜೋಶಿಯವರು, ಬಿಜೆಪಿ ವಿಪ್ಲವವನ್ನು ಎದುರಿಸುತ್ತಿದ್ದ ಕಾಲದಲ್ಲಿ ಅಧ್ಯಕ್ಷರಾದವರು. ಅದನ್ನು ಕೂಲಿಂಗ್ ಡೌನ್ ಪೀರಿಯಡ್ ಎನ್ನಬಹುದೇನೋ. ಕಷ್ಟಕಾಲದಲ್ಲಿ ಬಹಳ ಸಮಸ್ಥಿತಿಯಿಂದ ಪಕ್ಷವನ್ನು ಮುನ್ನಡೆಸಿ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಹೇಳಬೇಕಾದುದ್ದನ್ನು ಬಹಳ ಪರಿಣಾಮಕಾರಿಯಾಗಿ ಹಾಗೂ ಆತ್ಮಸ್ಥೆ ರ್ಯದಿಂದ ಸಂಸತ್ತಿನಲ್ಲಿ ಹೇಳುವಂಥ ಒಳ್ಳೆಯ ಸಂಸದ ಜೋಶಿಯವರು. ಸಂಸತ್ತಿನಲ್ಲಿ ಅವರ ಹೋರಾಟ ಮುಂದುವರಿಯಲಿದೆ, ರಾಜ್ಯದಲ್ಲಿನ ಹೋರಾಟವೇನಿದ್ದರೂ ಬಿಎಸ್ ವೈ ಜವಾಬ್ದಾರಿ. ಇನ್ನು ಮುಂದೆ ರಾಜ್ಯದಲ್ಲಿ ವಿರೋಧ ಪಕ್ಷವೇ ಇಲ್ಲ ಎಂದು ದೂರುವ ಪ್ರಸಂಗವೇ ಎದುರಾಗುವುದಿಲ್ಲ.


ವಿಧಾನಸಭೆಗೆ 150, ಲೋಕಸಭೆಗೆ 25 ನನ್ನ ಗುರಿ ಎಂದಿದ್ದಾರೆ ಬಿಎಸ್ವೈ, ಹಾಗಾಗಿ ಮುಖ್ಯಮಂತ್ರಿಯವರು ನಿದ್ರೆಯಿಂದೆದ್ದು ಪ್ರವಾಸಕ್ಕೆ ಹೊರಟಿದ್ದಾರೆ. ಬಹಳ ಸಕಾರಾತ್ಮಕ ಅಂಶವೆಂದರೆ ಬಿಎಸ್ವೈ ಮುಂದಿನ ರಾಜ್ಯಾಧ್ಯಕ್ಷರು ಎಂದು ದಿಲ್ಲಿಯಲ್ಲಿ ಘೋಷಣೆಯಾದ ಮರುಕ್ಷಣವೇ, ಮುಂದಿನ ಚುನಾವಣೆಯಲ್ಲಿ ಗೆದ್ದೇ ಬಿಟ್ಟೆವು ಎನ್ನವ ವಿಶ್ವಾಸ ಬಿಜೆಪಿ ಕಾರ್ಯಕರ್ತರಲ್ಲಿ ಒಂದೇ ದಿನದಲ್ಲಿ ಬಂದು ಬಿಟ್ಟಿದೆ. ಅದೇ ಬಿಎಸ್ ವೈ  ಶಕ್ತಿ. ಆದರೆ ಹಳೇ ಮೈಸೂರಿನ ಬಗ್ಗೆ ಸ್ವಲ್ಪ ಹುಷಾರು.


BSY

 •  0 comments  •  flag
Share on Twitter
Published on April 16, 2016 06:30

April 14, 2016

ಕಾಂಗ್ರೆಸಿಗರೇ ನೆನಪಿರಲಿ ,ಅಂಬೇಡ್ಕರರನ್ನು ಸೋಲಿಸಲು ನಿಮ್ಮ ನೆಹರು ಹೊರಟಾಗ ಅವರ ಪರ ಎಲೆಕ್ಷನ್ ಏಜೆಂಟ್ ಆಗಿದ್ದವರು ಒಬ್ಬ ಸಂಘಿಯೇ!

ಕಾಂಗ್ರೆಸಿಗರೇ ನೆನಪಿರಲಿ ,ಅಂಬೇಡ್ಕರರನ್ನು ಸೋಲಿಸಲು ನಿಮ್ಮ ನೆಹರು ಹೊರಟಾಗ ಅವರ ಪರ ಎಲೆಕ್ಷನ್ ಏಜೆಂಟ್ ಆಗಿದ್ದವರು ಒಬ್ಬ ಸಂಘಿಯೇ!


ಒಮ್ಮೆ ಶಾಲೆಯಲ್ಲಿ ಓದುತ್ತಿರುವಾಗ ಅಪ್ಪನನ್ನು ನೋಡಬೇಕೆನಿಸಿತು. ಸಹೋದರನ ಜತೆಗೂಡಿ   ಹೊರಟೇಬಿಟ್ಟ. ಇಬ್ಬರೂ ಮಾಸೂರು ರೈಲು ನಿಲ್ದಾಣಕ್ಕೆ ಬಂದಿಳಿದರು. ಗಾಡಿಯೊಂದನ್ನು ಗೊತ್ತುಪಡಿಸಿ ಊರತ್ತ ಹೊರಟರು. ಸ್ವಲ್ಪ ದೂರ ಹೋಗಿದ್ದಾರೆ, ಗಾಡಿಚಾಲಕನಿಗೆ ಗೊತ್ತಾಯಿತು ಅವರು ಮಹರ್  ಎಂಬ ಕೆಳಜಾತಿಗೆ ಸೇರಿದವರು, ದಲಿತರೆಂದು. ಗಾಡಿಯನ್ನು ಅಲ್ಲಿಯೇ ನಿಲ್ಲಿಸಿದ ಆತ ನೊಗವನ್ನು  ಎತ್ತಿದ, ಗಾಡಿ ಏರುಪೇರಾಯಿತು. ಬಾಲಕರಿಬ್ಬರೂ ಕೆಳಗೆ ಬಿದ್ದರು. ಬ್ಯೆಗುಳಗಳ ಸುರಿಮಳೆಗೈದ  ಚಾಲಕ, ನಿಂದಿಸಿ ಹಿಂತಿರುಗಿ ಹೊರಟುಹೋದ. ಇತ್ತ ಮಾಗ೯ ಮಧ್ಯದಲ್ಲಿ ದಿಕ್ಕು ತೋಚದಂತಾದ ಬಾಲಕರು ಬಾಯಾರಿಕೆಯಿಂದ ಬಳಲಲಾರಂಭೀಸಿದರು. ಆದರೆ ಬೇಡಿ- ಕೊಂಡರೂ ಬೊಗಸೆ ನೀರು  ಸಿಗಲಿಲ್ಲ. ಬಾಯಾರಿಕೆಯನ್ನು ತಾಳಲಾರದೆ ಬಾವಿಯ ಬಳಿಗೆ ಹೋದ ಕಿರಿಯ ಸಹೋದರ ದಾಹವನ್ನು ಆರಿಸಿಕೊಂಡ. ಅದನ್ನು ಗಮನಿಸಿದ ಮೇಲ್ಜಾತಿಯವರು ಮನುಷ್ಯತ್ವವನ್ನೇ ಕಳೆದುಕೊಂಡು ಆತನನ್ನು ದಂಡಿಸಿದರು. ಹೇರ್ ಕಟ್ ಮಾಡಿಸಿಕೊಳ್ಳಲು ಹೋದರೆ ಕ್ಷೌರಿಕನಿಂದಲೂ ತಿರಸ್ಕಾರ. ಮತ್ತೊಮ್ಮೆ  ಶಾಲೆಗೆ ತೆರಳುತ್ತಿರುವಾಗ ಜೋರಾಗಿ ಮಳೆ ಬಂದ ಕಾರಣ ಬದಿಯಲ್ಲೇ ಇದ್ದ ಮನೆಯ ಗೋಡೆಯ  ಬಳಿ ನಿ೦ತಾಗ ಅದನ್ನು ಗಮನಿಸಿದ ಮನೆಯಾಕೆ ಕೋಪದಿಂದ ಕೊಚ್ಚೆಗೆ ತಳ್ಳಿದಳು.


***

ಅದೇ ಬಾಲಕ ಮುಂದೆ ಅಮೆರಿಕಕ್ಕೆ ಹೋಗಿ ಸ್ನಾತಕೋತ್ತರ ಪದವಿ ಪಡೆದುಕೊ೦ಡು 1917ರಲ್ಲಿ ಭಾರತಕ್ಕೆ ಆಗಮಿಸಿದಾಗ ಬರೋಡಾದ ಮಹಾರಾಜರು ಸೇನಾ ಕಾಯ೯ದಶಿ೯ಯಾಗಿ ನೇಮಕ ಮಾಡಿದರು. ಒಬ್ಬಂಟಿಯಾಗಿದ್ದ ಅವರು ಲಾಡ್ಜ್ ವೊಂದರಲ್ಲಿ ಕೊಠಡಿಯೊಂದನ್ನು ಬಾಡಿಗೆಗೆ ತೆಗೆದುಕೊಂಡರು. ಅದು ಪಾಸಿ೯ಗಳ ವಠಾರವಾಗಿತ್ತು. ಅವರಿಗೆ ಬಾಡಿಗೆಗೆ ಬಂದ ವ್ಯಕ್ತಿಯ ಜಾತಿಯ ಬಗ್ಗೆ ಅನುಮಾನ  ಶುರುವಾಯಿತು. ಅಡ್ಡಹಾಕಿ “ಯಾರು ನೀನು?’ ಎಂದು ಪ್ರಶ್ನಿಸಿದರು. “ನಾನೊಬ್ಬ ಹಿಂದು’ ಎಂದು ಉತ್ತರಿಸಿದಾಗ, “ಯಾವ ಜಾತಿಯವನು ಹೇಳು?’ ಎಂಬ ಗದರಿಕೆ. ಅವರು ದಲಿತ ಸಮುದಾಯಕ್ಕೆ ಸೇರಿದವರು ಎಂದು ಗೊತ್ತಾದ ಕೂಡಲೇ ಮನೆಯಿಂದಲೇ ಹೊರಹಾಕಿದರು. ಕಚೇರಿಗೆ ಹೋದರೆ ಅವರಿಗಿಂತ ತೀರಾ ಕೆಳದಜೆ೯ಯ ನೌಕರನಿಂದಲೂ ತಿರಸ್ಕಾರ. ಹತ್ತಿರಕ್ಕೆ ಬಂದರೆ ಮ್ಯೆಲಿಗೆಯಾಗುತ್ತದೆ ಎಂಬ ಕಾರಣಕ್ಕೆ  ಕಡತಗಳನ್ನು ಮೇಜಿನ ಮೇಲೆ ಎಸೆದು ಹೋಗುತ್ತಿದ್ದ!


***

ಡಾ. ಬಿ.ಆರ್. ಅಂಬೇಡ್ಕರ್ ಬದುಕಿನ ಪುಟಗಳನ್ನು ತಿರುವಿ ಹಾಕುತ್ತಾ ಹೋದರೆ ಇಂತಹ ನೂರಾರು  ಘಟನೆಗಳನ್ನು ಕಾಣಬಹುದು. ಆದರೆ… “ಸ೦ಸ್ಕೃತಕ್ಕೆ ಹೋಲಿಸಿದರೆ ಪಷಿ೯ಯನ್ ಏನೇನೂ ಅಲ್ಲ. ನಮ್ಮ ಮನಸ್ಸಿನಲ್ಲಿರುವುದನ್ನು ಬೇರೆಯವರಿಗೆ ಸ್ಪಷ್ಟವಾಗಿ ತಿಳಿಹೇಳಬೇಕೆಂದರೆ ಅದು ಸಂಸ್ಕೃತದಲ್ಲಿ ಮಾತ್ರ ಸಾಧ್ಯ’ ಎಂದಿದ್ದು, “ಸಂಸ್ಕೃತವೇ ರಾಷ್ಟ್ರಭಾಷೆಯಾಗಬೇಕು’ ಎಂದು ಸಂಸತ್ತಿನಲ್ಲಿ ವಿಧೇಯಕ ಮಂಡಿಸಿದ್ದು  ಮಡಿವಂತರಿಂದ ದೌಜ೯ನ್ಯಕ್ಕೊಳಗಾದ ಅಂಬೇಡ್ಕರ್ ಅವರೇ ಎಂದರೆ ನಂಬುತ್ತೀರಾ?


   ಅದರ ಹಿಂದೆಯೂ ಒಂದು ಕಥೆಯಿದೆ, ಕಾರಣವೂ ಇದೆ. 1928ರಲ್ಲಿ ಲೆಜಿಸ್ಲೇಟಿವ್ ಕೌನ್ಸಿಲ್‍ಗೆ ಆಯ್ಕೆಯಾಗಿ ಬಂದ ಅಂಬೇಡ್ಕರ್, ದಲಿತರಿಗೆ ದೇವಾಲಯ ಪ್ರವೇಶವನ್ನು ದೊರಕಿಸಿಕೊಡಲು ಬಹಳ ಕಾಲದಿಂದಲೂ ಹೋರಾಡುತ್ತಿದ್ದರು. ಆ ಹೊತ್ತಿನಲ್ಲಿಯೇ ಕೆಲ  ಮೇಲ್ವಗ೯ದವರು ಮಹಾತ್ಮ ಗಾಂಧೀಜಿಯವರ ಕರೆಯನ್ನು ಧಿಕ್ಕರಿಸಿ ನಾಸಿಕ್‍ನ ಕೇಲಾರಾಮ್ ದೇವಾಲಯಕ್ಕೆ ದಲಿತರು ಪ್ರವೇಶ ಮಾಡುವುದಕ್ಕೆ ಅಡ್ಡಿಪಡಿಸಿದರು. ಆಗ ಅಂಬೇಡ್ಕರ್ ಅವರೇ ದೇವಾಲಯ ಪ್ರವೇಶ ಚಳವಳಿಯ ನೇತೃತ್ವ ವಹಿಸಿಕೊಂಡರು. ಆದರೆ ದಲಿತರು ದೇವಾಲಯ ಪ್ರವೇಶ  ಮಾಡುವುದಕ್ಕೆ ಶಾಸ್ತ್ರಗಳು ಅಡ್ಡಿಬರುತ್ತವೆ ಎಂದು ಮೇಲ್ವಗ೯ದವರು ಪ್ರತಿಪಾದಿಸುತ್ತಿದ್ದರು. ಹಾಗಾಗಿ ತಾವು ಹಿಂದು ಆಗಿದ್ದರೂ ದೇವಾಲಯದೊಳಕ್ಕೆ ಹೋಗಲು ಬಾಧಕವೇನು ಎಂಬುದನ್ನು ತಿಳಿಯಲು  ಅಂಬೇಡ್ಕರ್ ಮುಂದಾದರು. ಸ್ವತಃ ಶಾಸ್ತ್ರಗಳನ್ನು ಓದಿ ಮೂಲದಿಂದಲೇ ತಿಳಿಯುವ ಮನಸು ಮಾಡಿದರು. ಅದಕ್ಕಾಗಿ ಸಂಸ್ಕೃತವನ್ನು ಕರಗತ ಮಾಡಿಕೊಳ್ಳಲು ನಿಶ್ಚಯಿಸಿ ತಕ್ಕ ಗುರುವಿನ  ಅನ್ವೇಷಣೆಯಲ್ಲಿ ತೊಡಗಿದರು.


ಇತ್ತ ಹೊಸಕೆರೆ ಪಂಡಿತ ನಾಗಪ್ಪ ಶಾಸ್ತ್ರಿಯವರು ನಮ್ಮ ಚಿಕ್ಕಮಗಳೂರಿನ ನರಸಿಂಹರಾಜಪುರದಲ್ಲಿ ಪ್ಲೀಡರ್ (ಲಾಯರ್) ಆಗಿದ್ದರು. ಸಂಸ್ಕೃತದಲ್ಲಿ ಅಸಾಧಾರಣ ಪಾಂಡಿತ್ಯ ಸಾಧಿಸಿದ್ದ ಅವರು ಪ್ಲೀಡರ್  ಪರೀಕ್ಷೆಗಾಗಿ ಓದುತ್ತಿದ್ದಾಗಲೇ ಮ್ಯೆಸೂರು ಅರಮನೆಯಲ್ಲಿ ರಾಜಕುಮಾರ, ಕುಮಾರಿಯರಿಗೆ ಪಾಠ  ಹೇಳಿದ್ದಂಥ ವ್ಯಕ್ತಿ. 1905ರಲ್ಲೇ ಪಂಡಿತ ಹಾಗೂ ಶಾಸ್ತ್ರಿ ಪರೀಕ್ಷೆಗಳಲ್ಲಿ ತೇಗ೯ಡೆಯಾಗಿದ್ದರು. ಪ್ಲೀಡರ್ ಪರೀಕ್ಷೆಯ ನಂತರ ನರಸಿಂಹರಾಜಪುರಕ್ಕೆ ಹಿಂತಿರುಗಿದ ಅವರು ಲಾಯರ್ ಗಿರಿ ಆರಂಭಿಸಿದರು. ಜತೆಗೆ ಸಂಸ್ಕೃತ  ಅಭ್ಯಾಸವೂ ನಿರಂತರವಾಗಿತ್ತು. ಶಾಸ್ತ್ರಿಗಳಿಗೆ 6 ಹೆಣ್ಣು ಹಾಗೂ 4 ಗ೦ಡು ಮಕ್ಕಳು. ಗೌತಮಬುದ್ಧನ ವಿಚಾರಧಾರೆಯನ್ನು ಮೆಚ್ಚಿದ ಈ ಮಡಿವಂತ, ಸಂಸ್ಕೃತದಲ್ಲಿ “ಬುದ್ಧ ಭಾಗವತ’ ಬರೆಯಲು ಮು೦ದಾಗಿದ್ದರು. ಇತ್ತ 1929ರಲ್ಲಿ ಕನಾ೯ಟಕಕ್ಕೆ ಆಗಮಿಸಿದ ಮದನಮೋಹನ ಮಾಳವೀಯ ಹಾಗೂ ನಾಗಪ್ಪ  ಶಾಸ್ತ್ರಿಯವರು ಚಿಕ್ಕಮಗಳೂರಿನಲ್ಲಿ ನಡೆದ ಸಭೆಯ ಸಂದಭ೯ದಲ್ಲಿ ಪರಸ್ಪರ ಭೇಟಿಯಾದರು. ಭೇಟಿ ಸ್ನೇಹಕ್ಕೆ ತಿರುಗಿತು. ಶಾಸ್ತ್ರಿಗಳು ಬರೆಯುತ್ತಿದ್ದ “ಬುದ್ಧ ಭಾಗವತ’ದ ಹಸ್ತಪ್ರತಿಗಳನ್ನು ಓದಿದ ಮಾಳವೀಯ ಬೆಚ್ಚಿ ಬೆರಗಾದರು. ಮುಂಬ್ಯೆಗೆ ಬರುವಂತೆ ಶಾಸ್ತ್ರಿಗಳಿಗೆ ಆಹ್ವಾನ ನೀಡಿದರು. ಲಾಯರ್‍ಗಿರಿಯೂ ಸರಿಯಾಗಿ ನಡೆಯದ ಕಾಲವದು. ಜತೆಗೆ ಹೆಣ್ಣುಮಕ್ಕಳಿಗೆ ಮದುವೆ ಮಾಡಿ ಸೋತಿದ್ದ ಶಾಸ್ತ್ರಿಗಳು  ಸಂಸಾರವನ್ನು ಊರಲ್ಲಿ ಬಿಟ್ಟು 1929, ಅಕ್ಟೋಬರ್‍ನಲ್ಲಿ ಮುಂಬ್ಯೆಗೆ ತೆರಳಿದರು. ಅದೇ ವಷ೯ದ ಡಿಸೆಂಬರ್‍ನಲ್ಲಿ ಮುಂಬ್ಯೆನಲ್ಲಿ ನಡೆದ ಪ್ರಾಥ೯ನಾ ಸಭೆಯೊಂದರ ವೇಳೆ ಮಾಳವೀಯರು ನಾಗಪ್ಪ ಶಾಸ್ತ್ರಿಯವರನ್ನು ಗಾಂಧೀಜಿಯವರಿಗೆ ಪರಿಚಯ ಮಾಡಿಕೊಟ್ಟರು. ಗಾಂಧೀಜಿಯವರು ಅಲ್ಲಿಯೇ ಇದ್ದ  ಅಂಬೇಡ್ಕರ್ ಅವರನ್ನು ಕರೆದು “ತುಮ್ಹೆಗುರು ಕಾ ತಲಾಶ್ ಥಾ ನ? ಆಗಯಾ ದೇಖೋ ತುಮ್ಹಾರಾ ಗುರು’ ಎಂದು ನಗೆಯಾಡಿದರು.


ಹೀಗೆ 1930ರಲ್ಲಿ ನಾಗಪ್ಪ ಶಾಸ್ತ್ರಿಗಳಿಂದ ಅಂಬೇಡ್ಕರ್ ಅವರಿಗೆ ಸಂಸ್ಕೃತಪಾಠ ಆರ೦ಭವಾಯಿತು. ವಾರಕ್ಕೆ ಮೂರು ದಿನ ಪಾಠ, ಮುಂದಿನ ಪಾಠಕ್ಕೆ ಹೋದೊಡನೆಯೇ ಹಿಂದಿನ ಪಾಠದ ಬಗ್ಗೆ  ಅಂಬೇಡ್ಕರ್ ಅವರಿಂದ ಪ್ರಶ್ನೆಗಳ ಪಟ್ಟಿಯೇ ಸಿದ್ಧವಾಗಿರುತ್ತಿತ್ತು. ಅದಕ್ಕೆ ಉತ್ತರ ಹೇಳಿದ ಮಾತ್ರಕ್ಕೆ  ಅ ಪ್ರಶ್ನೆ ಮತ್ತೆ ಬರುವುದಿಲ್ಲವೆಂಬ ಬಗ್ಗೆ ಯಾವ ಖಾತ್ರಿಯೂ ಇರಲಿಲ್ಲ. ಅಂಬೇಡ್ಕರ್ ತಮ್ಮ ಮನದಲ್ಲಿ ಮೂಡಿದ ಸಂಶಯಗಳನ್ನೆಲ್ಲ ಮುಂದಿಟ್ಟು ಚಚಿ೯ಸುತ್ತಿದ್ದರು. ಹೀಗೆ ಎರಡು ವಷ೯ಗಳ ಕಾಲ ನಾಗಪ್ಪ ಶಾಸ್ತ್ರಿಗಳ ಬಳಿ ಸಂಸ್ಕೃತ ಕಲಿತ ಅಂಬೇಡ್ಕರ್ ಏಳು ವಷ೯ಗಳಲ್ಲಿ ಸಂಸ್ಕೃತದಲ್ಲಿ ಅಗಾಧ  ಪಾಂಡಿತ್ಯವನ್ನು ಸಂಪಾದಿಸಿದರು.


“ಜನ್ಮನಾ ಜಾಯತೇ ಶೂದ್ರಃ

ಸಂಸ್ಕಾರಾತ್ ದ್ವಿಜ ಉಚ್ಯತೇ’


  ಅಂದರೆ ಹುಟ್ಟುವಾಗ ಎಲ್ಲರೂ ಶೂದ್ರರೇ. ಆದರೆ ಸಂಸ್ಕಾರದಿಂದ ಉಚ್ಚರಾಗಬಹುದು ಎಂಬ  ಮಾತಿದೆ.

ಕದ೯ಮ, ವಸಿಷ್ಠ, ಪರಾಶರ, ಕೃಷ್ಣ,  ದ್ವೈಪಾಯನ(ವ್ಯಾಸ), ಕಪಿಲ, ದವ೯ತಿ (ಮಾತಂಗಿ), ಸತ್ಯಕಾಮ ಜಾಬಾಲಿ, ವಾಲ್ಮೀಕಿ, ವಿಶ್ವಾಮಿತ್ರ ಮುಂತಾದ ಋಷಿಮುನಿಗಳ ಮೂಲವನ್ನು ಹುಡುಕಿಕೊ೦ಡು ಹೋದರೆ ಅವಯಾ೯ರೂ ಬ್ರಾಹ್ಮಣರಲ್ಲ. ಡಾಕ್ಟರ್ ಮಕ್ಕಳು ಡಾಕ್ಟರೇ ಆಗಬೇಕು, ಎಂಜಿನಿಯರ್ ಮಕ್ಕಳು ಎಂಜಿನಿಯರ್‍ಗಳೇ ಆಗಬೇಕು ಎಂದು ಹೇಗೆ ಇಲ್ಲವೋ ಅದೇ ರೀತಿ ಒಬ್ಬ ಬ್ರಾಹ್ಮಣನ ಮಗನಾಗಿ ಹುಟ್ಟಿದ ಮಾತ್ರಕ್ಕೆ ಬ್ರಾಹ್ಮಣನಾಗುವುದೂ  ಇಲ್ಲ. ಆದರೆ ಬ್ರಾಹ್ಮಣನ ಮಗನಾಗಿ ಹುಟ್ಟುವುದರಿಂದ ಜ್ಞಾನ, ಸಭ್ಯ ನಡತೆಗಳಂತಹ ವಿಚಾರಗಳನ್ನು ಸಹಜವಾಗಿಯೇ ಪಡೆದುಕೊಳ್ಳುವ ಅನುಕೂಲವಿರುತ್ತದೆ. ಆದರೂ ಬ್ರಾಹ್ಮಣನಾಗಬೇಕಾದರೆ ಸ್ವತಃ  ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು. ಹಾಗೆ ಜ್ಞಾನ ಸಂಪಾದನೆ ಮಾಡಿಕೊಂಡಾಗ ಆತನಿಗೆ ಮರುಹುಟ್ಟು ಲಭೀಸುತ್ತದೆ, ದ್ವಿಜನಾಗುತ್ತಾನೆ. ಮಹಷಿ೯ ಅರವಿಂದ್, ಪಂಡಿತ್ ಶ್ಯಾಮ್‍ಜಿ ಕೃಷ್ಣವಮ೯  (ಪಂಡಿತ ಪದವಿ ಪಡೆದ ಮೊದಲ ಬ್ರಾಹ್ಮಣೀತರ), ಸ್ವಾಮಿ ದಯಾನಂದ ಸರಸ್ವತಿ,  ಸ್ವಾಮಿ ವಿವೇಕಾನಂದ, ಲಾಲ್ಬಹದ್ದೂರ್ ಶಾಸ್ತ್ರಿ, ಬಾಬು ರಾಜೇಂದ್ರ ಪ್ರಸಾದ್, ಕೆ.ಕೆ. ಮುನ್ಷಿ  ಇವಯಾ೯ರೂ ಬ್ರಾಹ್ಮಣರಲ್ಲ, ಕಲಿತು  ಶ್ರೇಷ್ಠರೆನಿಸಿಕೊಂಡವರು.


ಅಂಬೇಡ್ಕರ್ ಕೂಡ ಅದೇ ಸಾಲಿಗೆ ಸೇರುತ್ತಾರೆ. ಅಧ೯ ವಯಸ್ಸು ಕಳೆದ ಮೇಲೆ ಸಂಸ್ಕೃತ ಅಧ್ಯಯನ ಮಾಡಿ ಪಾಂಡಿತ್ಯ ಸಾಧಿಸಿದರು. ವೇದ ಉಪನಿಷತ್ತುಗಳನ್ನು ಅಧ್ಯಯನ ಮಾಡಿ, ವಿಶ್ಲೇಷಿಸುವ  ಸಾಮಥ್ಯ೯ ಪಡೆದರು. ಅದರ ಫಲವೇ “Riddles in Hinduism’ ಪುಸ್ತಕ. ವೇದಗಳ ಕಾಲದಲ್ಲಿ  ಜಾತಿ ಪದ್ಧತಿಯಿರಲಿಲ್ಲ. ಅಸ್ಫೃಶ್ಯತೆಯೂ ಇರಲಿಲ್ಲ. ಹಾಗಾದರೆ ಜಾತಿ ವ್ಯವಸ್ಥೆ ಹಿಂದು ಸಮಾಜದಲ್ಲಿ ಹೇಗೆ ಸೇರಿಕೊಂಡಿತು? ಮುಂತಾದ 24 ಒಗಟುಗಳನ್ನು ಪಟ್ಟಿ ಮಾಡಿರುವ ಅಂಬೇಡ್ಕರ್, ನಮ್ಮ  ಪ೦ಡಿತ-ಪಾಮರ ವಗ೯ದ ವಂಚನೆಗಳನ್ನು ಈ ಪುಸ್ತಕದಲ್ಲಿ ಬಯಲುಗೊಳಿಸಿದರು. ಹಾಗಂತ?


    ಅವರು ಯಾರ ಮೇಲೂ ದ್ವೇಷ ಕಾರಲಿಲ್ಲ. “ಸಂಸ್ಕೃತವನ್ನೇ ಅಧಿಕೃತ ಭಾಷೆಯಾಗಿ ಸ್ವೀಕರಿಸುವಂತೆ’ 1949, ಸೆಪ್ಟೆಂಬರ್ 10ರಂದು ಸಂಸತ್ತಿನಲ್ಲಿ ವಿಧೇಯಕವನ್ನು ಮುಂದಿಟ್ಟಿದ್ದು ಅಂಬೇಡ್ಕರ್ ಅವರೇ.  ಅಂಬೇಡ್ಕರ್ ಎಂದರೆ ಹಿಂದು ಧಮ೯ದಲ್ಲಿನ ಹುಳುಕುಗಳನ್ನು ಎತ್ತಿ ತೋರಿದವರು, ಜಾತಿ ವ್ಯವಸ್ಥೆಯ ಕೆಡುಕು ಮತ್ತು ದೌಜ೯ನ್ಯದ ವಿರುದ್ಧ ಧ್ವನಿಯೆತ್ತಿದವರು, ಕೇವಲ ದಲಿತ ನಾಯಕರು, ಮೀಸಲಾತಿಯ  ಪ್ರತಿಪಾದಕರು ಎಂದು ದಯವಿಟ್ಟು ಭಾವಿಸಬೇಡಿ. ಅವರೊಬ್ಬ ಅಪ್ರತಿಮ ರಾಷ್ಟ್ರವಾದಿಯೂ ಹೌದು.  ಸ್ವಾತಂತ್ರ ಹೋರಾಟಕ್ಕೆ ಅವರ ಕೊಡುಗೆ ಅಷ್ಟಿಲ್ಲವಾದರೂ ದೇಶ ವಿಭಜನೆ ಅನಿವಾಯ೯ವಾದಾಗ ಭೂಭಾಗವನ್ನು ಹಂಚಿಕೊಳ್ಳುವ ಜತೆಗೆ “ಪಾಪುಲೇಷನ್ ಎಕ್ಸ್‍ಚೇಂಜ್’ (ಮುಸಲ್ಮಾನರನ್ನು ಪಾಕಿಸ್ತಾನಕ್ಕೆ ಕಳುಹಿಸಿ, ಹಿಂದುಗಳನ್ನು ಭಾರತಕ್ಕೆ ಕರೆಸಿಕೊಳ್ಳಿ) ಕೂಡ ಮಾಡಿಕೊಳ್ಳಿ, ಹಿಂದು ಮುಸಲ್ಮಾನರು ಒಟ್ಟೊಟ್ಟಿಗೆ ಬದುಕಲು ಸಾಧ್ಯವಿಲ್ಲ, ಮುಸಲ್ಮಾನರ ವಿಶ್ವಭ್ರಾತೃತ್ವವೆನ್ನುವುದು ಇಸ್ಲಾಮಿಕ್ ಬ್ರದರ್ ಹುಡ್ಡೆೀ ಹೊರತು, ಯೂನಿವಸ೯ಲ್ ಬ್ರದರ್‍ಹುಡ್ ಅಲ್ಲ ಎಂಬ ಕಟುಸತ್ಯವನ್ನು ದಿಟ್ಟವಾಗಿ ಹೇಳಿದವರು  ಅವರು ಮಾತ್ರ! ಅವರ “ಥಾಟ್ಸ್ ಆನ್ ಪಾಕಿಸ್ತಾನ್’ ಪುಸ್ತಕವನ್ನು ಓದಿದರೆ ನಿಮಗೆ ಇದೆಲ್ಲ  ಅಥ೯ವಾಗುತ್ತದೆ!


   ನೀವು ಬಾಳಾಸಾಹೇಬ್ ಗಂಗಾಧರ್ ಖೇರ್ ಅಥವಾ ಬಿ.ಜಿ. ಖೇರ್ ಹೆಸರು ಕೇಳಿದ್ದೀರಾ?


ಅವರು ಈಗ ಮಹಾರಾಷ್ಟ್ರವಾಗಿರುವ ಅಂದಿನ ಬಾಂಬೆ ರಾಜ್ಯದ  (ಮಹಾರಾಷ್ಟ್ರಗುಜರಾತ್) ಮೊದಲ ಮುಖ್ಯಮಂತ್ರಿ. ಮುಂಬ್ಯೆನಲ್ಲೊಂದು ಸಾವ೯ಜನಿಕ ಸಭೆ ಆಯೋಜನೆಯಾಗಿತ್ತು. ಪಂಡಿತ್ ನೆಹರು, ಮೊರಾಜಿ೯ ದೇಸಾಯಿ ಅವರಂಥ ಗಣ್ಯರು ಉಪಸ್ಥಿತರಿದ್ದರು. ಮಾತಿಗೆ ನಿಂತ ಬಿ.ಜಿ. ಖೇರ್ ಭಾಷಣದ ಮಧ್ಯೆ,”I am an Indian first and a Maharashtrian next’ ನಾನು ಮೊದಲು ಭಾರತೀಯ, ನಂತರ ಮಹಾರಾಷ್ಟ್ರಿಗ’ ಎಂದುಬಿಟ್ಟರು. ತಮ್ಮ ಸರದಿ ಬಂದಾಗ ಬಿ.ಜಿ. ಖೇರ್ ಅವರ ಮಾತನ್ನು ದೃಷ್ಟಿಯಲ್ಲಿಟ್ಟುಕೊ೦ಡು, “I am an Indian first and Indian last’ ನಾನು ಮೊದಲು ಭಾರತೀಯ ಹಾಗೂ ಅದೇ ಅಂತಿಮ’ ಎಂದರು ಡಾ. ಅಂಬೇಡ್ಕರ್!


   ಅಷ್ಟೇ ಅಲ್ಲ….

ಭಾರತದೊಂದಿಗೆ 1947, ಅಕ್ಟೋಬರ್ 25ರಂದು ಮಹಾರಾಜ ಹರಿಸಿಂಗ್ ಸಹಿ ಹಾಕುವುದರೊಂದಿಗೆ ಭಾರತದ ಒಕ್ಕೂಟದೊಳಗೆ ಸೇಪ೯ಡೆಯಾದ ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ  ವಿಧಿಯಡಿ ವಿಶೇಷ ಸ್ಥಾನಮಾನ ನೀಡುವ ಪ್ರಸ್ತಾಪಕ್ಕೆ ಆಗಿನ ಕಾನೂನು ಸಚಿವ ಸಂವಿಧಾನ ಶಿಲ್ಪಿ  ಅಂಬೇಡ್ಕರ್ ಖಡಾಖಂಡಿತವಾಗಿ ವಿರೋಧಿಸಿದ್ದರು. ಎಲ್ಲ ರಾಜ್ಯಗಳೂ ಸಮಾನ ಹಾಗೂ ಸಮಾನ  ಹಕ್ಕುಅವಕಾಶಗಳನ್ನು ಹೊಂದಿರಬೇಕು ಎಂದು ಪ್ರತಿಪಾದಿಸಿದರು. ಹೀಗೆ ಅಂಬೇಡ್ಕರ್ ನಮಗೆ ಬಗ್ಗುವುದಿಲ್ಲ ಎಂದು ತಿಳಿದ ನೆಹರು ನರಿ ಉಪಾಯ ಮಾಡಿದರು.


  “ಅನಾರೋಗ್ಯ’ದ ಕಾರಣ ಮರುದಿನ ಅಂಬೇಡ್ಕರ್ ಸದನಕ್ಕೆ ಬರಲೇ ಇಲ್ಲ, ಅವರ ಅನುಪಸ್ಥಿತಿಯಲ್ಲಿ  370 ವಿಧಿಗೆ ಅನುಮೋದನೆ ದೊರೆತು ಸಂವಿಧಾನ ಸೇರಿತು. ಈ ಘಟನೆ ನಡೆದ ಮಾರನೇ ದಿನವೇ ಸದನಕ್ಕೆ ಆಗಮಿಸಿದ ಅಂಬೇಡ್ಕರ್‍ರನ್ನು ಕಾರಣ ಕೇಳಿದಾಗ “ಬರಬೇಡ’ ಎಂದು ನೆಹರು ಅವರೇ ಹೇಳಿದ್ದರು ಎಂದು ಮುಖಕ್ಕೆ ಹೊಡೆದಂತೆ ಹೇಳಿದರು. ನೆಹರು ಬಣ್ಣ ಬಯಲಾಯಿತು, ಕಾಶ್ಮೀರ ಶಾಶ್ವತವಾಗಿ ಭಾರತಕ್ಕೆ ಮಗ್ಗುಲ ಮುಳ್ಳಾಯಿತು, ದೇಶದ್ರೋಹಿಗಳ ನೆಲೆವೀಡಾಯಿತು. ಇದೆಲ್ಲವೂ ಸಂವಿಧಾನದ  ಕರಡು ಸಮಿತಿಯ ಚಚೆ೯ಗಳಲ್ಲಿ ದಾಖಲಾಗಿವೆ.


ಇಂತಹ ಮಹಾನ್ ವ್ಯಕ್ತಿಗೆ, ಅವರ ನೇರ ನಡೆ ನುಡಿಗೆ ಗಾಂಧೀಜಿ ಹಾಗೂ ಸದಾ೯ರ್ ಪಟೇಲ್   ಮರಣಾನಂತರ ಕಾಂಗ್ರೆಸ್ ಸ್, ಅದರಲ್ಲೂ ಮೊದಲ ಪ್ರಧಾನಿ ನೆಹರು ಮಹಾಶಯರು ಕೊಟ್ಟ ಬಳುವಳಿಯೇನು ಗೊತ್ತೆ? ಹಿಂದು ಕೋಡ್ ಬಿಲ್ ತರುವ ವೇಳೆಯಲ್ಲಿ ಹೆಣ್ಣುಮಕ್ಕಳಿಗೂ ಆಸ್ತೀ ಹಕ್ಕು ಕೊಡಬೇಕು, “ಹಿಂದು’ ಎಂಬ ಹೆಮ್ಮರದಡಿ ಮುಸೀಂ, ಕ್ರೆçಸ್ತ, ಪಾಸಿ೯ಗಳನ್ನು ಹೊರತುಪಡಿಸಿ ಎಲ್ಲರೂ  ಇರಬೇಕೆಂಬ ಕಾನೂನು ಸಚಿವ ಅಂಬೇಡ್ಕರ್ ಪ್ರತಿಪಾದನೆಗೆ ವಿರೋಧ ವ್ಯಕ್ತಪಡಿಸುವ ನೆಪದಲ್ಲಿ  ಅವರ ವಿಧೇಯಕ ಅಸೆಂಬ್ಲಿಯಲ್ಲಿ ಸೋಲುವಂತೆ ಮಾಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ  ಮಾಡಿದರು ನೆಹರು!

ಅಷ್ಟು ಮಾತ್ರವಲ್ಲ,


1952ರಲ್ಲಿ ಮೊದಲ ಸಾವ೯ತ್ರಿಕ ಚುನಾವಣೆಯಲ್ಲಿ ಅಂಬೇಡ್ಕರ್ ಮುಂಬ್ಯೆ ಉತ್ತರದಿಂದ ಸ್ಪಧಿ೯ಸಿದಾಗ ಅವರ ಸಹಾಯಕನನ್ನೇ ಕಣಕ್ಕಿಸಿದ ಕಾಂಗ್ರೆ ಸ್ ಅಂಬೇಡ್ಕರರನ್ನು ಸೋಲಿಸಿ ಅವಮಾನಿಸಿತು! 1954ರಲ್ಲಿ ಮುಂಬ್ಯೆ ಭಂಡಾರದಲ್ಲಿ ಉಪಚುನಾವಣೆ ಏಪ೯ಟ್ಟಾಗ ಅಂಬೇಡ್ಕರ್ ಮತ್ತೆ ಸ್ಪಧಿ೯ಸಿದರು. ಆಗಲೂ ಕಾಂಗ್ರೆಸ್ ಅಂಬೇಡ್ಕರರನ್ನು ಸೋಲಿಸಿತು. ಆದರೆ ಕುತೂಹಲಕಾರಿ ಸಂಗತಿಯೇನೆಂದು  ಗೊತ್ತಾ? ಆಗ ಅಂಬೇಡ್ಕರ್ ಅವರ ಚುನಾವಣಾ ಏಜೆಂಟ್ ಆಗಿದ್ದ ವ್ಯಕ್ತಿ ತಥಾಕಥಿಕ ವಿರೋಧಿಗಳು ಯಾರನ್ನು ಸಂಘಗಳು ಎಂದು ಆಚಾರವಿಲ್ಲದೆ ಮಾತನಾಡುತ್ತಾರೋ ಅಂಥ ಸಂಘದ ಸ್ವಯಂಸೇವಕ ದತ್ತೋಪಂತ ಠೇಂಗಡಿ!


  ಕಾಂಗ್ರೆಸಿನ ಅಂಬೇಡ್ಕರ್ “ಪ್ರೀತಿ’ಗೆ ಇನ್ನೂ ಉದಾಹರಣೆ ಬೇಕಾ? 1955ರಲ್ಲಿ ತಮಗೆ ತಾವೇ ಭಾರತ ರತ್ನ ಕೊಟ್ಟುಕೊಂಡ ನೆಹರು ಅವರಿಗಾಗಲಿ, 1971ರಲ್ಲಿ ಅದೇ ಕೆಲಸ ಮಾಡಿಕೊಂಡ ಇಂದಿರಾ ಗಾಂಧಿಯವರಿಗಾಗಲಿ ಡಾ. ಅಂಬೇಡ್ಕರ್‍ಗೆ  ಭಾರತ ರತ್ನ ಕೊಡಬೇಕು ಅಂತ ಎಂದೂ ಅನಿಸಲಿಲ್ಲ! ಅಂಬೇಡ್ಕರ್‍ಗೆ 1990ರಲ್ಲಿ ಭಾರತ ರತ್ನ  ಕೊಡಲು ವಿ.ಪಿ. ಸಿಂಗ್ ಬಿಜೆಪಿ ಸಕಾ೯ರವೇ ಬರಬೇಕಾಯಿತು! ಪಾಲಿ೯ಮೆಂಟಿನ ಸೆಂಟ್ರಲ್ ಹಾಲ್‍ಲ್ಲಿ  ಅಂಬೇಡ್ಕರ್ ಭಾವಚಿತ್ರ ಅನಾವರಣ ಮಾಡಿದ್ದೂ ಬಿಜೆಪಿ ಬೆಂಬಲಿತ ಸಕಾ೯ರವೇ. ಉನ್ನತ ವ್ಯಾಸಂಗಕ್ಕೆಂದು ಬ್ರಿಟನ್‍ಗೆ ಹೋಗಿದ್ದಾಗ ಅಂಬೇಡ್ಕರ್ ತಂಗಿದ್ದ ಲಂಡನ್ನಿನ ಕಿಂಗ್ ಹೆನ್ರಿ ರಸ್ತೆಯಲ್ಲಿರುವ ಮನೆ ಮಾರಾಟಕ್ಕೆ ಬಂದರೂ 10 ವಷ೯ಗಳ ಯುಪಿಎ ಆಡಳಿತವಾಗಲಿ, ಮಹಾರಾಷ್ಟ್ರದ ಕಾಂಗ್ರೆಸ್ ಸ್ ಸಕಾ೯ರವಾಗಲಿ ಖರೀದಿಸುವ ಮನಸ್ಸು ಮಾಡಲಿಲ್ಲ! ಅದನ್ನೂ 32 ಕೋಟಿ ರೂ. ಕೊಟ್ಟು ಖರೀದಿಸಲು ಬಿಜೆಪಿಯ  ದೇವೇಂದ್ರ ಫಡ್ನವೀಸ್ ಬರಬೇಕಾಯಿತು!


ಇಂದು ಅಂಬೇಡ್ಕರ್ ಅವರ 125ನೇ ಜನ್ಮದಿನ. ಇಂತಹ  ಪುಣ್ಯದಿನವನ್ನು ರಾಷ್ಟ್ರಾದ್ಯಂತ ಆಚರಿಸಲು, ಅಂಬೇಡ್ಕರ್‍ರ ಕೊಡುಗೆಯನ್ನು ಜಗತ್ತಿಗೆ ಸಾರಲು ನರೇಂದ್ರ ಮೋದಿ ಬಂದಿದ್ದಾರೆ. ಇದೇನೇ ಇರಲಿ, ಜ್ಯೋತಿಬಾ ಫುಲೆ, ಶಾಹು ಮಹಾರಾಜ್, ಅಗಕ೯ರ್  ಮುಂತಾದವರು ದಲಿತರ ವೇದನೆಯನ್ನು, ಅವರಿಗಾಗುತ್ತಿದ್ದ ಅವಮಾನವನ್ನು ಅಥ೯ಮಾಡಿಕೊಂಡು ಕೆಲಸ ಮಾಡಿದ್ದಿದೆ. ಆದರೆ ಸಾಮಾಜಿಕ ಪರಿವತ೯ನೆಯ ಯಾತ್ರೆಯಲ್ಲಿ ಅಂಬೇಡ್ಕರ್  ಏಕಮೇವಾದ್ವಿತೀಯರಾಗಿ ಕಾಣಬರುತ್ತಾರೆ.


dr br am

 •  0 comments  •  flag
Share on Twitter
Published on April 14, 2016 06:27

Pratap Simha's Blog

Pratap Simha
Pratap Simha isn't a Goodreads Author (yet), but they do have a blog, so here are some recent posts imported from their feed.
Follow Pratap Simha's blog with rss.