Pratap Simha's Blog, page 43
May 16, 2016
May 12, 2016
May 9, 2016
May 7, 2016
ಕಾಂಗ್ರೆಸ್ ಅಧಿನಾಯಕಿಯನ್ನು ಕಟಕಟೆಗೆ ತಂದು ನಿಲ್ಲಿಸಿದ್ದಲ್ಲದೆ ರಾಜ್ಯಸಭೆಯಲ್ಲಿ ಕಕ್ಕಾಬಿಕ್ಕಿಯಾಗುವಂತೆ ಮಾಡಿರುವ ಈ ಸ್ವಾಮಿ ಕಮ್ಮಿ ಆಸಾಮಿಯಲ್ಲ!
ಕಾಂಗ್ರೆಸ್ ಅಧಿನಾಯಕಿಯನ್ನು ಕಟಕಟೆಗೆ ತಂದು ನಿಲ್ಲಿಸಿದ್ದಲ್ಲದೆ ರಾಜ್ಯಸಭೆಯಲ್ಲಿ ಕಕ್ಕಾಬಿಕ್ಕಿಯಾಗುವಂತೆ ಮಾಡಿರುವ ಈ ಸ್ವಾಮಿ ಕಮ್ಮಿ ಆಸಾಮಿಯಲ್ಲ!
ಈ ಮನುಷ್ಯನನ್ನು ನೀವು ಇಷ್ಟಪಡದಿರಬಹುದು. ಆತನ ಮಾರ್ಗ ಇಷ್ಟವಾಗದಿರಬಹುದು, ಆತ ಬಳಸುವ ಪದಗಳು ಕ್ರೋಧಯುಕ್ತ ಅಥವಾ ಅಡೆತಡೆಯಿಲ್ಲದ ರಾಜಕೀಯ ವಾಗ್ಝರಿ ನಿಮಗೆ ಇರಸುಮುರಿಸನ್ನುಂಟು ಮಾಡಬಹುದು. ಆದರೆ ಸೋನಿಯಾ ಗಾಂಧಿ ಎಂಬಾಕೆ ಒಬ್ಬ ಪೇಪರ್ ಟೈಗರ್ ಅಷ್ಟೇ, ರಾಜಕೀಯ ಜಾಣ್ಮೆ ಹಾಗೂ ಮಾಧ್ಯಮದ ಮೂಲಕ ಆಕೆ ಬಹಳ ಗಟ್ಟಿಗಿತ್ತಿ ಎಂಬ ಮಿಥ್ಯೆಯನ್ನು ಸೃಷ್ಟಿಸಲಾಗಿದೆ ಎಂಬುದನ್ನು ಏಕಾಂಗಿಯಾಗಿ ನಿರೂಪಿಸಿದ, ಅಂಥ ಕಲ್ಪನೆಯನ್ನು ನೆಲಸಮ ಮಾಡಿದ ವ್ಯಕ್ತಿ ಡಾ. ಸುಬ್ರಹ್ಮಣ್ಯನ್ ಸ್ವಾಮಿ! ಹಾಗಂತ ಖ್ಯಾತ ಅಂಕಣಕಾರ ಆರ್. ಜಗನ್ನಾಥನ್ ಮೊನ್ನೆ ಹೇಳಿದ್ದರಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ! ನಿಮಗೊಂದು ವೈಯಕ್ತಿಕ ಅನುಭವವನ್ನು ಹೇಳಬೇಕು.
ಗುರುವಾರ ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ವಿಚಾರ ರಾಜ್ಯಸಭೆಯಲ್ಲಿ ಪ್ರಸ್ತಾಪವಾಗುವುದಿತ್ತು. ಮಧ್ಯಾಹ್ಮ 3.30ಕ್ಕೆ ಸ್ವಾಮಿ ಮಾತನಾಡಲಿದ್ದಾರೆ ಎಂದು ಹಿರಿಯ ಪತ್ರಕರ್ತರಾದ ಆರ್. ಗೋಪಾಲನ್ ಹೇಳಿದರು. ನಾನು ಹಾಗೂ ಬೀದರ್ ಸಂಸದ ಭಗವಂತ ಖೂಬಾ ಅವರು ರಾಜ್ಯಸಭೆಗೆ ಧಾವಿಸಿ 3 ಗಂಟೆಯಿಂದಲೇ ಕಾದೆವು. ಗಂಟೆ ನಾಲ್ಕಾದರೂ ಸ್ವಾಮಿ ಹೆಸರನ್ನು ಉಪಸಭಾಪತಿ ಕರೆಯುತ್ತಿಲ್ಲ. ಕಾದು ಕಾದು ಬೇಸತ್ತು ಕಾಫಿಗಾಗಿ ಸೆಂಟ್ರಲ್ ಹಾಲ್ ಗೆ ಬಂದೆವು. ಕಾಂಗ್ರೆಸಿನ ಬಹುತೇಕ ರಾಜ್ಯಸಭಾ ಸದಸ್ಯರು ಸೆಂಟ್ರಲ್ ಹಾಲ್ ನಲ್ಲೇ ಇದ್ದರು.
ಬಂದು ಒಂದೆರಡು ನಿಮಿಷವಾಗುವಷ್ಟರಲ್ಲಿ ಸೆಂಟ್ರಲ್ ನಲ್ಲಿದ್ದ ಅಷ್ಟೂ ಜನ ರಾಜ್ಯಸಭೆ ಸದಸ್ಯರು ಉಸೈನ್ ಬೋಲ್ಟ್ ಪರಕಾಯ ಪ್ರವೇಶ ಮಾಡಿದಂತೆ ಓಡಲಾರಂಭಿಸಿದರು. ಹಾಗಂತ ಸೆಂಟ್ರಲ್ ಹಾಲ್ ನಲ್ಲಿ ಯಾರೂ ಬಾಂಬು ಇಟ್ಟಿರಲಿಲ್ಲ, ಆದರೆ ರಾಜ್ಯಸಭೆಯಲ್ಲಿ ಸ್ವಾಮಿ ಬಾಂಬ್ ಹಾಕಿಬಿಡುತ್ತಾರೆ, ತಮ್ಮ ಅಧಿನಾಯಕಿಯನ್ನು ರಕ್ಷಣೆ ಮಾಡಬೇಕೆಂದು ಕಾಂಗ್ರೆಸಿಗರು ಭಯದಿಂದ ಓಡಿದರೆ, ಲೋಕಸಭೆ ಸದಸ್ಯರು ಟೀವಿ ಮುಂದೆ ನೆರೆದರು. ಡಾ. ಸ್ವಾಮಿ ಅಂದರೆ ಇದೇ! ಅವರನ್ನು Maverick ಎನ್ನಿ, Eccentric ಅಂತ ಕರೆಯಿರಿ, ವಿವಾದಪ್ರಿಯ ಎಂದರೂ ತಪ್ಪಿಲ್ಲ. ಅವರು ಈ ಎಲ್ಲವೂ ಹೌದು.
ಅಟಲ್ ಬಿಹಾರಿ ವಾಜಪೇಯಿ, ಜಯಲಲಿತಾ, ರಾಮಕೃಷ್ಣ ಹೆಗಡೆ, ವಿಪಿ ಸಿಂಗ್, ಚಂದ್ರಶೇಖರ್ರಿಂದ ಎ. ರಾಜಾ, ಟಿ.ಅರ್. ಬಾಲು, ಕರುಣಾನಿಧಿ, ಚಿದಂಬರಂ ಹಾಗೂ ಸೋನಿಯಾ ಗಾಂಧಿವರೆಗೆ ಯಾರನ್ನೂ ಕಾಡದೇ ಬಿಟ್ಟಿಲ್ಲ, ಬಿಡುವ ಜಾಯಮಾನವೂ ಅವರದ್ದಲ್ಲ. ಈ ಸುಬ್ರಹ್ಮಣ್ಯನ್ ಸ್ವಾಮಿಯವರು How to Make Enemies and Antagonise People? ಎಂಬ ಪುಸ್ತಕವನ್ನೇ ಬರೆಯಬಹುದು ಎಂದು ಪತ್ರಕರ್ತ ಪ್ರೇಮ್ ಪಣಿಕ್ಕರ್ ಒಮ್ಮೆ ಕಿಚಾಯಿಸಿದ್ದರು. ಈ ವ್ಯಕ್ತಿ ಯಾವಾಗ ನಿಮ್ಮ ಸ್ನೇಹಿತರಾಗಿರುತ್ತಾರೆ, ಯಾವಾಗ ನಿಮ್ಮ ವಿರುದ್ಧವೇ ತಿರುಗಿ ಬೀಳುತ್ತಾರೆ ಎಂದು ಯಾರಿಗೂ ಗೊತ್ತಾಗುವುದಿಲ್ಲ, ಸ್ವತಃ ಅವರೂ ಸೇರಿದಂತೆ! ಒಮ್ಮೆ, ಎಲ್ ಟಿ ಟಿಇ ಬಗ್ಗೆ ಮೃದುಧೋರಣೆ ತೋರುತ್ತಿರುವ ಮುಖ್ಯಮಂತ್ರಿ ಜಯಲಲಿತಾ ನನ್ನ ಕೊಲೆಗೈಯ್ಯಲು ಒಂದು ಡಜನ್ಗೂ ಹೆಚ್ಚು ಭಾರಿ ಪ್ರಯತ್ನಿಸಿದ್ದಾರೆ, ಪಿತೂರಿ ನಡೆಸಿದ್ದಾರೆ ಎಂದು ಗುರುತರ ಆರೋಪಡಿದ್ದ ಅವರು, 1998ರ ವೇಳೆಗೆ ಜಯಲಲಿತಾ ಅವರ ಪರಮಾಪ್ತರಾಗಿ ಬಿಟ್ಟಿದ್ದರು! ಅಷ್ಟೇಕೆ, 1998ರಲ್ಲಿ ಅಟಲ್ ಬಿಹಾರಿ ವಾಜಪೇಯಿಯವರು ಮೊಟ್ಟಮೊದಲ ಬಾರಿಗೆ ಸ್ಥಿರ ಸರಕಾರ ರಚಿಸಲು ಮುಂದಾದಾಗ ಎನ್ ಡಿ ಎ ಮೈತ್ರಿಕೂಟ ಸೇರಿದ ಎಐಎಡಿಎಂಕೆ ಧುರೀಣೆ ಜಯಲಲಿತಾ ಅವರು ಸುಬ್ರಹ್ಮಣ್ಯನ್ ಸ್ವಾಮಿಯವರನ್ನು ಕ್ಯಾಬಿನೆಟ್ ಗೆ ತೆಗೆದುಕೊಳ್ಳಬೇಕೆಂಬ ಬೇಡಿಕೆ ಇಟ್ಟು ಬಿಟ್ಟರು! ಬಿಜೆಪಿಗೆ ಒಂಥರಾ ಬಿಸಿ ತುಪ್ಪವಾಗಿ ಬಿಟ್ಟಿತು.
ಆದರೆ ಸುಬ್ರಹ್ಮಣ್ಯನ್ ಸ್ವಾಮಿಯಂಥವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದೆಂದರೆ ಬಗಲಿಗೆ ಕೆಂಡ ಕಟ್ಟಿ ಕೊಂಡಂತೆ ಎಂಬುದು ಅದಕ್ಕೆ ಚೆನ್ನಾಗಿ ಗೊತ್ತಿತ್ತು. ಈ ಮನುಷ್ಯ ಸುಮ್ಮನೆ ಇರುವವರಲ್ಲ, ಸ್ನೇಹಿತರಾಗಿದ್ದಾಗ ಸಾಕ್ಷ್ಯ ಕಲೆಹಾಕಿ ಸ್ನೇಹ ಕಡಿದುಹೋದ ಮೇಲೆ ಮೈಮೇಲೆ ಎಗರಿ ಬರುತ್ತಾರೆ ಎಂಬುದನ್ನು ಬಹಳ ಚೆನ್ನಾಗಿ ಅರ್ಥಮಾಡಿಕೊಂಡ ವಾಜಪೇಯಿ, ಸರಕಾರ ರಚಿಸಲು ಸಾಧ್ಯವಾಗದಿದ್ದರೂ ಪರವಾಗಿಲ್ಲ, ಸುಬ್ರಹ್ಮಣ್ಯನ್ ಸ್ವಾಮಿ ಮಾತ್ರ ಬಿಲ್ಕುಲ್ ಬೇಡವೆಂದರು. ಅಂತಿಮವಾಗಿ ಸರಕಾರವೇನೋ ರಚನೆಯಾಯಿತು, ಅದರ ಬೆನ್ನಲ್ಲೇ ಸುಬ್ರಹ್ಮಣ್ಯನ್ ಸ್ವಾಮಿ ಅವರ ಟೀಕಾ ಪ್ರಹಾರವೂ ಆರಂಭವಾಯಿತು. ‘ಬಿಜೆಪಿ ಸರಕಾರ ಅಮೆರಿಕದ ಎನ್ರಾ ನ್ ಗೆ ಅನುಮತಿ ಕೊಟ್ಟಿದ್ದೇಕೆ? ಹದಿಮೂರು ದಿನಗಳ ಕಾಲ ಪ್ರಧಾನಿಯಾಗಿದ್ದ ಅವಧಿಯಲ್ಲಿ ವಾಜಪೇಯಿಯವರೇ ಎನ್ರಾನ್ ಯೋಜನೆಗೆ ಯೆಸ್ ಎಂದರು, ಏಕೆ? ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಬಿಜೆಪಿಗರು ಕೋಕಾ ಕೋಲಾ ಕುಡಿಯುವುದೇಕೆ? ಕೋಲಾ ಬದಲು ನಿಂಬೆ ರಸ ಹೀರಬಹುದಿತ್ತಲ್ಲವೆ?’ ಇಂತಹ ಹತ್ತಾರು ಪ್ರಶ್ನೆಗಳನ್ನು ಹಾಕಿ ಬಿಜೆಪಿಯನ್ನು ಸಾರ್ವಜನಿಕವಾಗಿ ಮುಜುಗರಕ್ಕೀಡುಮಾಡಲು ಪ್ರಯತ್ನಿಸಿದರು. ಅದಕ್ಕೂ ಮೊದಲು ವಿ.ಪಿ. ಸಿಂಗ್ ಅವರನ್ನು ಹಣಿಯುವುದಕ್ಕಾಗಿ ಯಾವ ವ್ಯಕ್ತಿಯ ವಿರುದ್ಧ ಆ ಹಿಂದೆ ತೀವ್ರ ಹೋರಾಟ ನಡೆಸಿದ್ದರೋ ಅದೇ ಚಂದ್ರಶೇಖರ್ ಅವರ ಪಕ್ಷ ವಹಿಸಿದ್ದರು. ಸುಬ್ರಹ್ಮಣ್ಯನ್ ಸ್ವಾಮಿಯವರ ನಿಘಂಟಿನಲ್ಲಿ ನಿಷ್ಠೆ, ಬದ್ಧತೆಗಳಿಗೆ ಸ್ಥಾನವೇ ಇರಲಿಲ್ಲ. ಇಂತಹ ವಿಚಿತ್ರ, ಕೆಲವೊಮ್ಮೆ ವಿಕ್ಷಿಪ್ತ ಮನಃಸ್ಥಿತಿಗಳ ನಡುವೆಯೂ ಅವರು ಸರಕಾರಗಳನ್ನು ಮುಜುಗರಕ್ಕೀಡುಮಾಡಿದ್ದು, ಪತನಕ್ಕೆ ಕಾರಣವಾಗಿದ್ದು ಇದೆ. ಟೆಲಿಫೋನ್ ಕದ್ದಾಲಿಕೆ ಪ್ರಕರಣವನ್ನು ಬೆಳಕಿಗೆ ತಂದು ರಾಮಕೃಷ್ಣ ಹೆಗಡೆಯವರ ಸರಕಾರ ಬೀಳುವುದಕ್ಕೆ ಕಾರಣರಾಗಿದ್ದೇ ಸುಬ್ರಹ್ಮಣ್ಯನ್ ಸ್ವಾಮಿ. ಅವರು ಹೊಸ ಹೊಸ ಪದಗುಚ್ಚಗಳನ್ನು ಹುಟ್ಟು ಹಾಕಿದ್ದೂ ಇದೆ.
ರಾಮಕೃಷ್ಣ ಹೆಗಡೆಯವರ ಮನಃಸ್ಥಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಅವರು ” Intellectual Constipation ‘’ನಿಂದ ನರಳುತ್ತಿದ್ದಾರೆ ಎಂದಿದ್ದರು. ಅವರನ್ನು ಯಾರೂ ತನ್ನ ಸ್ನೇಹಿತನೆಂದು ಭಾವಿಸುವುದಕ್ಕಾಗಲಿ, ನಂಬುವುದಕ್ಕಾಗಲಿ, ವಿಶ್ವಾಸವಿಡುವುದಕ್ಕಾಗಲಿ ಸಾಧ್ಯವಿಲ್ಲ ಎಂಬಂಥ ಪರಿಸ್ಥಿತಿ ತಾವೇ ಸೃಷ್ಟಿಸಿಕೊಂಡಿದ್ದರು. ಒಂದು ಹಂತದಲ್ಲಂತೂ ಅವರೊಬ್ಬ ಸಿನಿಕ ಎಂದೇ ದೇಶವಾಸಿಗಳು ಭಾವಿಸುವಂತಾಗಿತ್ತು. ಇಂತಹ ಸುಬ್ರಹ್ಮಣ್ಯನ್ ಸ್ವಾಮಿ ಒಮ್ಮೆಲೆ ಬದಲಾಗಿಬಿಟ್ಟರೆ?!
ಅಂಥದ್ದೊಂದು ಅನುಮಾನ ಕಾಡಲಾರಂಭಿಸಿದೆ. ಅವರ ಹಳೆಯ ತಿಕ್ಕಲುತನಗಳ ನಡುವೆಯೂ ಅವರನ್ನು ನಾವು ಇಷ್ಟಪಡಲು ಸಾಕಷ್ಟು ಕಾರಣಗಳು ಇವೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಹೊಸದೊಂದು ಸೂಚನೆಯೇ ನಮಗೆ ಸಿಗುತ್ತಿದೆ.
ಎಪ್ಪತ್ತಾರು ವರ್ಷದ ಅವರ ನಡತೆಯಲ್ಲಿ ಆಹ್ಲಾದಕರ, ಆಪ್ಯಾಯಮಾನವಾದ ಬದಲಾವಣೆಗಳು ಕಂಡುಬಂದಿವೆ. ಅದರಿಂದ ಸಮಾಜ ಮತ್ತು ದೇಶಕ್ಕೆ ಆಗಾಧ ಒಳಿತಾಗುತ್ತಿದೆ. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ, ಪಿಎಚ್ ಡಿಯನ್ನೂ ಮಾಡಿರುವ, ಇಬ್ಬರು ನೊಬೆಲ್ ಪುರಸ್ಕೃತರ ಜತೆ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುವ ಸುಬ್ರಹ್ಮಣ್ಯನ್ ಸ್ವಾಮಿ ಅವರ ಜ್ಞಾನ, ತಿಳಿವಳಿಕೆಯ ಲಾಭ ದೇಶ ಮತ್ತು ಸಮಾಜಕ್ಕೆ ಲಭ್ಯವಾಗುವ ಎಲ್ಲ ಸಂಕೇತಗಳೂ ಗೋಚರಿಸುತ್ತಿವೆ. ಅವರು ರಾಜಕೀಯದೊಳಗಿದ್ದುಕೊಂಡು ಭ್ರಷ್ಟಾಚಾರದ ವಿರುದ್ಧ ‘ಕ್ರುಸೇಡರ್?’ ಆಗಿ ಹೊರಹೊಮ್ಮಿದ್ದಾರೆ. ಈ ಹಿಂದೆ ಪ್ರತಿಪಕ್ಷ ಸ್ಥಾನದಲ್ಲಿದ್ದ ಬಿಜೆಪಿಗಿಂತ ಒಬ್ಬ ಸುಬ್ರಹ್ಮಣ್ಯನ್ ಸ್ವಾಮಿ ಸೋನಿಯಾ-ಮನಮೋಹನರ ಕೇಂದ್ರ ಸರಕಾರಕ್ಕೆ ಅತಿದೊಡ್ಡ ಕಂಟಕವಾಗಿ ಪರಿಣಮಿಸಿದ್ದರು.ಇಂದಿಗೂ ಸೋನಿಯಾ ಹಾಗೂ ಅವರ ಕಾಂಗ್ರೆಸ್ ಹೆದರುವುದು ನರೇಂದ್ರ ಮೋದಿಯವರ ಮೌನಕ್ಕೆ, ಸುಬ್ರಹ್ಮಣ್ಯನ್ ಸ್ವಾಮಿಯವರ ಮುಂದಿನ ನಡೆ ಏನೆಂಬ ಊಹೆಗೆ. ಇಷ್ಟಕ್ಕೂ ಅವರು ಯುಪಿಎ ಸರಕಾರವನ್ನು ಮಟ್ಟಹಾಕಿದ್ದು, ಸೊಕ್ಕಡಗಿಸಿದ್ದು, ನಿದ್ದೆಗೆಡಿಸಿದ್ದು ಸಾಮಾನ್ಯ ಸಂಗತಿಯೇ?
1. ರಾಮನ ಹೆಸರಿನಲ್ಲಿ ರಾಜಕೀಯ ಮಾಡಿದ್ದು, ವೋಟು ಬೇಡಿದ್ದು, ಕೊನೆಗೆ ಅಧಿಕಾರದ ಗದ್ದುಗೆ ಏರಿದ್ದು ಬಿಜೆಪಿ. ಆದರೆ ಅದೇ ರಾಮನ ಸೇತುವೆಯನ್ನು ಯುಪಿಎ ಸರಕಾರ ಹಾಗೂ ಕರುಣಾನಿಧಿಯವರ ತಮಿಳುನಾಡು ಸರಕಾರ 2007ರಲ್ಲಿ ನಾಶಪಡಿಸಲು ಹೊರಟಾಗ ಬಿಜೆಪಿ ಬೊಬ್ಬೆ ಹಾಕಿತೇ ಹೊರತು, ಬೇರೇನನ್ನೂ ಮಾಡಲಿಲ್ಲ. ಅಂದು ರಾಮಸೇತುವಿನ ರಕ್ಷಣೆಗೆ ಮುಂದಾಗಿದ್ದು ಇದೇ ಸ್ವಾಮಿ. ಸೇತು ಸಮುದ್ರ ಹಡಗು ಕಾಲುವೆ ಯೋಜನೆಯನ್ನು ಕೈಬಿಡುವಂತೆ ಸುಬ್ರಹ್ಮಣ್ಯನ್ ಸ್ವಾಮಿಯವರು 2009ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದರು. ಆದರೆ ಅವರ ಪತ್ರವನ್ನು ಪ್ರಧಾನಿ ನಿರ್ಲಕ್ಷಿಸಿದಾಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಸ್ವಾಮಿ, ಯೋಜನೆಗೆ ತಡೆಯಾಜ್ಞೆ ತಂದರು!
2. 1962ರ ಯುದ್ಧದ ನಂತರ ಭಾರತ-ಚೀನಾ ನಡುವಿನ ಸಂಬಂಧ ಸಂಪೂರ್ಣವಾಗಿ ಹಳಸಿ ಹೋಗಿತ್ತು. ಚೀನಾದ ಜತೆ ಮತ್ತೆ ರಾಜತಾಂತ್ರಿಕ ಸಂಬಂಧಕ್ಕೆ ಚಾಲನೆ ನೀಡಿದ್ದು ಮೊರಾರ್ಜಿ ಸರಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ಅಟಲ್ ಬಿಹಾರಿ ವಾಜಪೇಯಿ. ಆದರೆ ಟಿಬೆಟ್ ನಲ್ಲಿರುವ ಹಿಂದು ಧರ್ಮದ ಪವಿತ್ರ ಸ್ಥಳಗಳಾದ ಕೈಲಾಸ ಪರ್ವತ ಮತ್ತು ಮಾನಸ ಸರೋವರ ಯಾತ್ರೆಗೆ 1981ರಲ್ಲಿ ಚೀನಾ ಅವಕಾಶ ನೀಡುವಂತೆ ಮಾಡಿದ್ದು ಸುಬ್ರಹ್ಮಣ್ಯನ್ ಸ್ವಾಮಿಯವರ ಮನವೊಲಿಕೆ ಪ್ರಯತ್ನ.
3. ಇಸ್ರೇಲ್ ಜತೆ ರಾಜತಾಂತ್ರಿಕ ಸಂಬಂಧ ಆರಂಭಿಸಿದ್ದು ಮಾಜಿ ಪ್ರಧಾನಿ ನರಸಿಂಹ ರಾವ್, ಅದನ್ನು ಗಟ್ಟಿಗೊಳಿಸಿದ್ದು, ರಕ್ಷಣಾ ಒಪ್ಪಂದಗಳವರೆಗೂ ಕೊಂಡೊಯ್ದಿದ್ದು ಅಟಲ್ ಬಿಹಾರಿ ವಾಜಪೇಯಿ. ಆದರೆ 1982ರಲ್ಲಿ ಇಸ್ರೇಲ್ ಗೆ ಮೊಟ್ಟಮೊದಲ ಬಾರಿಗೆ ಭೇಟಿ ನೀಡಿದ ಭಾರತೀಯ ರಾಜ ಕಾರಣಿ ಸುಬ್ರಹ್ಮಣ್ಯನ್ ಸ್ವಾಮಿ. ಆಗಿನ ಖ್ಯಾತ ಇಸ್ರೇಲಿ ನಾಯಕ ಇಝೆಲ್ ರಬಿನ್, ಪ್ರಧಾನಿ ಮೆನಕಿಮ್ ಬೆಗಿನ್ ಅವರನ್ನು ಭೇಟಿಯಾಗುವ ಮೂಲಕ ಉಭಯ ರಾಷ್ಟ್ರಗಳ ನಡುವೆ ಉತ್ತಮ ಸಂಬಂಧ ಸ್ಥಾಪನೆಗೆ ಪೂರಕ ಪ್ರಯತ್ನ ಮಾಡಿದರು.
4. ಇವೆಲ್ಲಕ್ಕಿಂತ ಮುಖ್ಯವಾಗುವುದು 2ಜಿ ಹಗರಣದ ಆಳ ಮತ್ತು ಹರವನ್ನು ತೆರೆದಿಡುವಲ್ಲಿ ಸ್ವಾಮಿ ವಹಿಸಿದ ಪಾತ್ರ. ಟೆಲಿಕಾಂ ಮಾಜಿ ಸಚಿವ ಎ. ರಾಜ ರಾಜಿನಾಮೆ ನೀಡಿದ್ದು 2011ರಲ್ಲಾಗಿದ್ದರೂ ಸುಬ್ರಹ್ಮಣ್ಯನ್ ಸ್ವಾಮಿ 2008ರಿಂದಲೇ ಆತನ ಹಿಂದೆ ಬಿದ್ದಿದ್ದರು, ಹಗರಣವನ್ನು ಬಯಲಿಗೆಳೆಯಲು ಪ್ರಯತ್ನಿಸಿದ್ದರು. ರಾಜ ಅವರನ್ನು ವಿಚಾರಣೆಗೆ ಗುರಿಪಡಿಸಬೇಕೆಂದು 2008ರಲ್ಲಿ ಬರೆದ 5 ಪತ್ರಗಳನ್ನು ಪ್ರಧಾನಿ ಕಸದ ಬುಟ್ಟಿಗೆ ಎಸೆದಾಗ, ನೇರವಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದರು. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸುಪ್ರೀಂಕೋರ್ಟ್ ರಾಜ ಸೇರಿದಂತೆ ಉದ್ಯಮ ಸಂಸ್ಥೆಗಳ ದೊಡ್ಡ ದೊಡ್ಡ ತಲೆಗಳ ಪಾತ್ರವನ್ನೂ ತಲಾಷ್ ಮಾಡಬೇಕೆಂದು ಸಿಬಿಐಗೆ ನಿರ್ದೇಶನ ನೀಡಿತು. ಅಲ್ಲದೆ ಸಿಬಿಐ ತನಿಖೆ ಮೇಲೆ ತಾನೇ ನಿಗಾ ಇಟ್ಟಿತು.
ಅದರ ಪರಿಣಾಮವೇ ಇಂದು ಎಲ್ಲರೂ ತಿಹಾರ್ ಜೈಲು ಸೇರಿರುವುದು. ಹಾಗಂತ ಸ್ವಾಮಿ ಸುಮ್ಮನಾಗಲಿಲ್ಲ. ಆಗ ಗೃಹ ಸಚಿವರಾಗಿದ್ದ ಹಾಗೂ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಕೂಡ ರಾಜಾ ಜತೆ ಸಮಾನ ಪಾಲುದಾರ ಎಂದು ಚಿದಂಬರಂ ಅವರನ್ನೂ ಕಟಕಟೆಗೆ ಎಳೆದು ತರಲು ಸ್ವಾಮಿ ಮುಂದಾಗಿದ್ದಾರೆ. ಶಿವಗಂಗಾದಿಂದ ಅಕ್ರಮವಾಗಿ ಚುನಾಯಿತರಾಗಿದ್ದಾರೆಂದು ಚಿದಂಬರಂ ಆಯ್ಕೆಯನ್ನು ಪ್ರಶ್ನಿಸಿ ಕೋರ್ಟ್ ಗೂ ಹೋಗಿದ್ದರು. ಸೋನಿಯಾ ಗಾಂಧಿಯವರನ್ನೂ ಬಿಟ್ಟಿಲ್ಲ. ಸೋನಿಯಾ ಗಾಂಧಿಯವರನ್ನು ಒಬ್ಬ ಭ್ರಷ್ಟ ಮಹಿಳೆ ಎಂದು ಕರೆಯುವ, ಹಾಗೆ ಕರೆದೂ ಜಯಿಸುವ ತಾಕತ್ತು ಈ ದೇಶದಲ್ಲಿ ಯಾರಿಗಾದರೂ ಇದ್ದರೆ ಅದು ಸುಬ್ರಹ್ಮಣ್ಯನ್ ಸ್ವಾಮಿಯವರಿಗೆ ಮಾತ್ರ!
ಸಾವಿರಾರು ಕೋಟಿ ರು. ಗಳನ್ನು ಆಕೆ ನುಂಗಿದ್ದಾರೆ ಎಂದು ಸ್ವಾಮಿ ಬಹಿರಂಗ ಆಪಾದನೆ ಮಾಡಿದ್ದಾರೆ. ಹೊಸ ದೆಹಲಿಯಲ್ಲಿರುವ ಅವರ ನಿವಾಸದ ಮೇಲೆ ಕಾಂಗ್ರೆಸಿಗರು ದಾಳಿ ಮಾಡಿದಾಗಲೂ ಸ್ವಾಮಿ ಸುಮ್ಮನಾಗಲಿಲ್ಲ.
ಈ ಮಧ್ಯೆ ಮುಂಬೈ ಭಯೋತ್ಪಾದಕ ದಾಳಿಯ ನಂತರ ಡಿಎನ್ಎ ಪತ್ರಿಕೆಗೆ ಬರೆದ ‘ಹೌ ಟು ವೈಪ್ ಔಟ್ ಇಸ್ಲಾಮಿಕ್ ಟೆರರ್ರಿಸಂ’ ಎಂಬ ಅವರ ಲೇಖನ ‘ಸಿಕ್ ’ಯುಲರ್ ವಾದಿಗಳಿಂದ ತೀವ್ರ ಟೀಕೆಗೆ ಒಳಗಾದರೂ ಸ್ವಾಮಿ ಸತ್ಯವಾದ ಮಾತುಗಳನ್ನಾಡಿದ್ದರು. ಕೇರಳದಲ್ಲಿ ತಲೆಯೆತ್ತುತ್ತಿರುವ ಇಸ್ಲಾಮಿಕ್ ಬ್ಯಾಂಕಿಂಗ್ ವಿರುದ್ಧ ಹೋರಾಡಿದ್ದೂ ಸ್ವಾಮಿಯವರೇ ಹೊರತು ಬಿಜೆಪಿಯಲ್ಲ. ಯುಪಿಎ ಅಧ್ಯಕ್ಷೆ ಹಾಗೂ ರಾಷ್ಟ್ರೀಯ ಸಲಹಾ ಮಂಡಳಿಯ(ಎನ್ಎಸಿ) ಮುಖ್ಯಸ್ಥೆಯಾಗಿದ್ದ ಸೋನಿಯಾ ಗಾಂಧಿಯವರ ವಿರುದ್ಧ ದೆಹಲಿಯಲ್ಲಿ ಎಫ್-ಐಆರ್ ದಾಖಲಿಸಿದ್ದು ಮಾತ್ರವಲ್ಲ, ಎನ್ಎಸಿ ತರಲು ಹೊರಟಿರುವ ಕೋಮುಹಿಂಸಾಚಾರ ತಡೆ ಕಾಯಿದೆ ಹಿಂದುಗಳಿಗೆ ಹೇಗೆ ಮಾರಕವಾಗಲಿದೆ ಮತ್ತು ಹಿಂದುಗಳನ್ನು ಹಣಿಯುವ ಉದ್ದೇಶ ಹೊಂದಿದೆ ಎಂಬುದನ್ನು ತಮ್ಮ ದೂರಿನಲ್ಲಿ ಪರಿ ಪರಿಯಾಗಿ ವಿವರಿಸಿದರು.
ಹೀಗೆ ಅವರೊಬ್ಬ ಹಿಂದುಪರ ‘ಕ್ರೆಡಿಬಲ್ ವಾಯ್ಸ್’ಆಗಿ ಹೊರಹೊಮ್ಮಿದರು. ಹಾಗಾಗಿ ರಾಷ್ಟ್ರವಾದಿಗಳ ಮನಸು ಮತ್ತು ಹೃದಯಕ್ಕೆ ಹತ್ತಿರವಾಗಿದ್ದಾರೆ. ಪ್ರಜಾತಾಂತ್ರಿಕ ಮಾರ್ಗದ ಮೂಲಕ, ಕೋರ್ಟ್ ಗೆ ಎಳೆಯುವ ಮೂಲಕ ಭ್ರಷ್ಟರನ್ನು ಮಟ್ಟಹಾಕುತ್ತಿದ್ದಾರೆ, ನಡುಕ ಹುಟ್ಟಿಸುತ್ತಿದ್ದಾರೆ. ಅವರ ಪಾಲಿಗೆ ‘ಸ್ವಾಹಾ’ ಕಾರ್ಯವನ್ನು ಬಯಲಿಗೆಳೆಯುವುದೇ ‘ಸ್ವಾಮಿ’ಕಾರ್ಯ!
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಅಮ್ಮ-ಮಗನನ್ನು ಕಟಕಟೆಗೆ ತಂದು ನಿಲ್ಲಿಸಿದ್ದ ಸ್ವಾಮಿ, ಅಗಸ್ಟಾ ವೆಸ್ಟ್ ಲ್ಯಾಂಡ್ ಪ್ರಕರಣವನ್ನಿಟ್ಟುಕೊಂಡು ಬುಡವನ್ನೇ ಅಲುಗಾಡಿಸುತ್ತಿದ್ದಾರೆ. ಇದುವರೆಗೂ ಅಭಿವೃದ್ಧಿ ಕಾರ್ಯ ಮಾಡಲು ಲೋಕಸಭೆಯಲ್ಲಿ ಗುಜರಾತಿನ ಸಿಂಹ ಮಾತ್ರವಿತ್ತು. ಈಗ ಭ್ರಷ್ಟರ ಎದೆಯಲ್ಲಿ ನಡುಕವನ್ನುಂಟು ಮಾಡಲು ರಾಜ್ಯಸಭೆಗೆ ಹುಲಿಯೂ ಬಂದಿದೆ ಸ್ವಾಮಿ!
May 6, 2016
May 5, 2016
April 30, 2016
‘ ಕೃಷ್ಣಾ ‘ ನೀ ಬೇಗನೆ ಬಾರೋ ಅಂತ ಕರೆಯೋ ಕಾಲ ಕಾಂಗ್ರೆಸಿಗೆ ಬಂತಾ?
‘ ಕೃಷ್ಣಾ ‘ ನೀ ಬೇಗನೆ ಬಾರೋ ಅಂತ ಕರೆಯೋ ಕಾಲ ಕಾಂಗ್ರೆಸಿಗೆ ಬಂತಾ?
ಬಹುಶಃ ಕನಾ೯ಟಕದ ಇತಿಹಾಸದಲ್ಲಿ ಅತಿ ಹೆಚ್ಚು ಅಡೆತಡೆಗಳನ್ನು, ಸಂಕಷ್ಟಗಳನ್ನು ಎದುರಿಸಿದ ಮುಖ್ಯಮಂತ್ರಿಯೆಂದರೆ ಎಸ್.ಎಂ. ಕೃಷ್ಣ ಅವರು. ನಾಳೆಗೆ ಕೃಷ್ಣ ಅವರು 85ಕ್ಕೆ ಕಾಲಿಡುತ್ತಿದ್ದಾರೆ. ದೇವರು ಅವರನ್ನು ಚೆನ್ನಾಗಿ ಇಟ್ಟಿರಲಿ ಹಾಗೂ ಕಾ೦ಗ್ರೆ ಸಿಗರಿಗೆ ಕೃಷ್ಣ ಅವರನ್ನು ಮೇಲ್ಪಂಕ್ತಿಯಾಗಿಟ್ಟು ನಡೆಯುವಂಥ ಸದ್ಬುದ್ಧಿ ಕೊಡಲಿ.
“Nearly all men can stand adversity, but if you want to test a man’s character,
give him power’ಅಂದರೆ ಒಬ್ಬ ಮನುಷ್ಯನ ವ್ಯಕ್ತಿತ್ವ ಅಥವಾ ಗಟ್ಟಿತನವನ್ನು ಪರೀಕ್ಷಿಸಬೇಕಾದರೆ ಅವನಿಗೆ ಅಧಿಕಾರ ಕೊಟ್ಟು ನೋಡು ಎಂದಿದ್ದರು ಅಮೆರಿಕದ ಪ್ರಖ್ಯಾತ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್. ಎಷ್ಟೋವ್ಯಕ್ತಿಗಳು ಅವರ ಕೌಟುಂಬಿಕ ಹಿನ್ನೆಲೆಯಿಂದಲೋ, ಅದೃಷ್ಟದ ಬಲದಿಂದಲೋ, ಪರಿಸ್ಥಿತಿ ಸಹಜವಾಗಿಯೇ ಕಲ್ಪಿಸಿದ ಅನುಕೂಲಕರ ಸನ್ನಿವೇಶದಿಂದಲೋ ಅಥವಾ ಇನ್ನಾರದ್ದೋ ಶ್ರೀರಕ್ಷೆಯಿಂದಲೋ ಅಧಿ ಕಾರದ ಗದ್ದುಗೆಯೇರಿದ ನೂರಾರು ಉದಾಹರಣೆಗಳಿವೆ. ಆದರೆ ಗದ್ದುಗೆಯೇರಿದ ಮೇಲೆ ಯೋಗ್ಯತೆಯನ್ನು ಎತ್ತರಿಸಿಕೊಳ್ಳಲಾಗದೆ, ದೂರದೃಷ್ಟಿ ಹಾಗೂ ಸೂಕ್ಷ್ಮೆ ಗ್ರಾಹಿತ್ವದ ಕೊರತೆಯಿಂದ ಅಧಿಕಾರದ ಸ್ಥಾನವೇ ಅವರನ್ನು ತರಗೆಲೆಯಂತೆ ಮಾಡಿದ್ದುಂಟು. ಆದರೆ ಯೋಗ್ಯತೆಯಿಟ್ಟುಕೊಂಡು ಉನ್ನತ ಸ್ಥಾನಕ್ಕೇರಿದ ಹಾಗೂ ಏರಿದ ನಂತರ ಎದುರಾದ ಸಮಸ್ಯೆಗಳನ್ನು ಸಮಥ೯ವಾಗಿ ನಿಭಾಯಿಸಿ ವ್ಯಕ್ತಿತ್ವದ ಪರಿಚಯ ಮಾಡಿಕೊಟ್ಟ ನಾಯಕರು ಮಾತ್ರ ಕೆಲವೇ ಕೆಲವು ಮಂದಿ. ಅಂಥ ವಿರಳ ನಾಯಕರಲ್ಲಿ ನಮ್ಮ ಕನಾ೯ಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಮುತ್ಸದ್ದಿ ಎಸ್.ಎಂ. ಕೃಷ್ಣ ಒಬ್ಬರು. ಅವರ ಬಗ್ಗೆ ಯೋಚಿಸಿದಾಗಲೆಲ್ಲ ಅಬ್ರಹಾಂ ಲಿಂಕನ್ ಮಾತು ನೆನಪಿಗೆ ಬರುತ್ತದೆ. ಕೃಷ್ಣ ಅವರು ಎದುರಿಸಿದ ಸಮಸ್ಯೆಗಳು ಒಂದೋ, ಎರಡೋ?!
ರಾಜ್ಕುಮಾರ್ ಅಪಹರಣ
ನಾಗಪ್ಪ ಹತ್ಯೆ
ವಿಠಲೇನಹಳ್ಳಿ ಗೋಲಿಬಾರ್
ಮೂರು ವಷ೯ ಸತತ ಬರ
ಮುನ್ನೂರಕ್ಕೂ ಹೆಚ್ಚು ರೈತರ ಆತ್ಮಹತ್ಯೆ
ಕಾವೇರಿ ಗಲಾಟೆ
ಜಯಲಲಿತಾ ಕಿರಿಕ್ಕು
ಬಹುಶಃ ಕನಾ೯ಟಕದ ಇತಿಹಾಸದಲ್ಲಿ ಅತಿ ಹೆಚ್ಚು ಅಡೆತಡೆಗಳನ್ನು, ಸಂಕಷ್ಟಗಳನ್ನು ಎದುರಿಸಿದ ಮುಖ್ಯಮಂತ್ರಿಯೆಂದರೆ ಎಸ್.ಎಂ. ಕೃಷ್ಣ ಅವರು. ಇಷ್ಟಾಗಿಯೂ ಸಾವ೯ಜನಿಕವಾಗಿ ಎಂದೂ ಅವರು ತಾಳ್ಮೆ ಕಳೆದುಕೊಳ್ಳಲಿಲ್ಲ. ಎಂದಿನ ಸಭ್ಯತೆ, ಸಜ್ಜನಿಕೆಯನ್ನು ಬಿಡಲಿಲ್ಲ. ಒಬ್ಬ ಮುಖ್ಯಮಂತ್ರಿ ಹೇಗಿರಬೇಕೆಂದರೆ ಕೃಷ್ಣ ಅವರಂತೆ ವಿದ್ಯಾವಂತ, ಬುದ್ಧಿವಂತ, ದೂರದೃಷ್ಟಿ ಹೊಂದಿರುವಾತ ಆಗಿರಬೇಕೆಂದು ಬೇರೆ ರಾಜ್ಯಗಳಿಗೆ ನಾವು ಉದಾಹರಣೆ ಕೊಡುವಂತೆ ಇದ್ದರು. ಅವರು ಉಡುಗೆ ತೊಡುಗೆಯಲ್ಲಿ ಮಾತ್ರ ಶಿಸ್ತನ್ನು ಹೊಂದಿದ್ದರು ಎಂದು ಭಾವಿಸಬೇಡಿ, ಕನಾ೯ಟಕದ ವಿತ್ತ ಸಚಿವಾಲಯಕ್ಕೂ ಶಿಸ್ತನ್ನು ತಂದರು. ಸ್ವತಃ ವಿತ್ತ ಸಚಿವರೂ ಆಗಿದ್ದ ಕೃಷ್ಣ, Karnataka Fiscal Responsibility Act – 2002 ಅಥವಾ ವಿತ್ತೀಯ ಹೊಣೆಗಾರಿಕೆ ಕಾಯಿದೆಯನ್ನು ಜಾರಿಗೆ ತಂದರು.
ಅಂದರೆ ಆದಾಯದ(ಆಯ) ಆಧಾರದ ಮೇಲೆ ಸರಕಾರ ಖಚ೯ನ್ನು(ವ್ಯಯ) ಮಾಡಬೇಕು, ವ್ಯಯ ಆಯಕ್ಕಿಂತ ಜಾಸ್ತೀಯಾಗಬಾರದು ಎಂದು ಕಟ್ಟುನಿಟ್ಟಾದ ಚೌಕಟ್ಟು ಹಾಕಿಕೊಟ್ಟರು. ಹಾಗಂತ ಖಚ೯ನ್ನು ತಡೆಯುವುದಕ್ಕಾಗುವುದಿಲ್ಲ. ಅಭೀವೃದ್ಧಿ ಕಾಯ೯ಗಳಿಗೆ ಅಪರಿಮಿತ ಹಣ ಬೇಕಾಗುತ್ತದೆ ಎಂಬುದನ್ನು ಮನಗಂಡು, ಆದಾಯವನ್ನು ಹೆಚ್ಚಿಸುವುದರ ಬಗ್ಗೆ ಅತಿಹೆಚ್ಚಿನ ಗಮನಹರಿಸಿದರು. ಮುಂದಿನ ಎಲ್ಲ ಮುಖ್ಯಮಂತ್ರಿಗಳೂ ಹೆಚ್ಚೂಕಡಿಮೆ ಅದೇ ಚೌಕಟ್ಟಿನಲ್ಲಿ ನಡೆದರು, ಸಿದ್ಧರಾಮಯ್ಯನ್ನೊಬ್ಬರನ್ನು ಬಿಟ್ಟು! ಅದರ ಪರಿಣಾಮವೇ ಬಿಜೆಪಿ ಸರಕಾರ 5 ವಷ೯ಗಳಲ್ಲಿ ಮಾಡಿದ ಸಾಲದ ಎರಡೂವರೆ ಪಟ್ಟನ್ನು ಸಿದ್ದರಾಮಯ್ಯನವರು ಮೂರು ವಷ೯ದಲ್ಲೇ ಮಾಡಿದ್ದಾರೆ! ಇದೇನೇ ಇರಲಿ, ರಾಜ್ಯದ ಖಜಾನೆಯನ್ನು ಭದ್ರಪಡಿಸಿದ್ದು, ಆಥಿ೯ಕತೆಯನ್ನು ಸರಿಪಡಿಸಿದ್ದು ಮಾತ್ರವಲ್ಲ, ಅಡಳಿತ ವ್ಯವಸ್ಥೆಯನ್ನೂ ತ್ವರಿತ ಹಾಗೂ ಭ್ರಷ್ಟಾಚಾರ ಮುಕ್ತವನ್ನಾಗಿ ಮಾಡುವ ಸಲುವಾಗಿ ಭೂ ದಾಖಲೆಗಳ ಗಣಕೀಕರಣಕ್ಕೆ ಕೈಹಾಕಿದರು ಕೃಷ್ಣ.
ಪಹಣಿ, ಪಟ್ಟಾಗಳನ್ನು ಕೇಳಿದರೆ ತಿಂಗಳು ತಳ್ಳುತ್ತಿದ್ದರೆ, ಕಾಸು ಕೊಟ್ಟರಷ್ಟೇ ಕಾಪಿ ಕೊಡುತ್ತಿದ್ದರು. ಅಂಥ ವ್ಯವಸ್ಥೆಗೆ ಚಾಟಿಯೇಟು ಕೊಟ್ಟು, ತಂತ್ರಜ್ಞಾನವನ್ನು ತಂದು ಬದಲಾಯಿಸಿದರು. ಕನ್ನಡ ಸಾಫ಼್ಟ್ವೇರ್ ಅಭೀವೃದ್ಧಿಗೆ ಹಾಗೂ ಸರಕಾರಿ ಕಚೇರಿಗಳಲ್ಲಿ ಅದರ ಅಳವಡಿಕೆಗಾಗಿ ಭೂಮಿ ಯೋಜನೆ ಹೆಸರಿನಲ್ಲಿ ಗಣಕೀಕರಣ ಮಾಡಿದರು.
ನೀವು ಕನಾ೯ಟಕ ರಾಜಕಾರಣದ ಇತಿಹಾಸವನ್ನು ನೋಡಿದರೆ ಒಂದೊಂದು ಕಾಲಘಟ್ಟಗಳಲ್ಲಿ ಒಂದೊಂದು ಲಾಬಿಗಳು ರಾಜಕಾರಣವನ್ನು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟು- ಕೊಳ್ಳಲು ಪ್ರಯತ್ನಿಸುತ್ತಾ ಬಂದಿವೆ. ಕೆ.ಸಿ. ರೆಡ್ಡಿ, ಕೆಂಗಲ್ ಹನುಮಂತಯ್ಯನವರ ಕಾಲದಲ್ಲಿ ತಲೆದೋರಿದ ಹೆಂಡದ ಲಾಬಿಯಿಂದ ಹಿಡಿದು ಸಿದ್ದರಾಮಯ್ಯನವರ ಕಾಲದ ಸ್ಯಾಂಡ್ ಮ್ಯೆನಿಂಗ್ ಲಾಬಿವರೆಗೂ ನೀವು ದೃಷ್ಟಿ ಹಾಯಿಸಬಹುದು. ಮೊದಲಿಗೆ ಹೆಂಡದ ದೊರೆಗಳು, ನಂತರ ಎಜುಕೇಶನ್ ಲಾಬಿ, ಮ್ಯೆನಿಂಗ್ ಮಾಫಿಯಾ, ರಿಯಲ್ ಎಸ್ಟೇಟ್ ದುಡ್ಡಿನ ದಪ೯, ಮರಳು ದಂಧೆ ಹೀಗೆ ಪಟ್ಟಿ ಬೆಳೆಯುತ್ತದೆ. ಇವುಗಳಲ್ಲೊಂದಾದ ಹೆಂಡದ ದೊರೆಗಳು ಸೆಕೆಂಡ್ಸ್ ಮೂಲಕ ತೆರಿಗೆ ಕದಿಯುತ್ತಿದ್ದರು. ಇಂಥ ಕಳ್ಳರನ್ನು ಮಟ್ಟಹಾಕಲು ಹಾಗೂ ರಾಜ್ಯದ ಅದಾಯವನ್ನು ಹೆಚ್ಚಿಸಲು 2003ರಲ್ಲಿ ಕನಾ೯ಟಕ ಸ್ಟೇಟ್ ಬೆವೆರೇಜಸ್ ಕಾಪೊ೯ರೇಶನ್ ಲಿಮಿಟೆಡ್ ಸ್ಥಾಪನೆ ಮಾಡಿದರು. ಆ ಮೂಲಕ ಮದ್ಯ ವಿತರಣೆ ಹಾಗೂ ಮಾರಾಟ ವ್ಯವಸ್ಥೆಯನ್ನು ನಿಯಂತ್ರಣಕ್ಕೆ ತಂದು ಬೊಕ್ಕಸಕ್ಕೆ ಲಾಭ ಮಾಡಿದರು ಕೃಷ್ಣ. ಈ ಹಿಂದೆಲ್ಲ ಹೆಂಡದ ದೊರೆಗಳು ರಾಜಕಾರಣಿಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದರು. ಆದರೆ ಇಂದು ಹೆಂಡದಿಂದ ರಿಯಲ್ ಎಸ್ಟೇಟ್, ಮರಳುಗಾರಿಕೆವರೆಗೂ ಎಲ್ಲ ದಂಧೆಗಳನ್ನು ರಾಜಕಾರಣಿಗಳೇ ಸ್ವತಃ ನಿಯಂತ್ರಿಸುತ್ತಿದ್ದಾರೆ ಎಂಬುದು ಬೇರೇ ಮಾತು ಬಿಡಿ!
ಮತ್ತೆ ಕೃಷ್ಣ ಅವರ ಸಾಧನೆಯ ವಿಷಯಕ್ಕೆ ಬರುವುದಾದರೆ, ಇವತ್ತು ಬೆಂಗಳೂರನ್ನು ಒಂದು ತಕ್ಕಡಿಗೆ, ಕನಾ೯ಟಕದ ಉಳಿದ ಭಾಗವನ್ನು ಮತ್ತೊಂದು ತಕ್ಕಡಿಗೆ ಇಟ್ಟರೆ ಬೆಂಗಳೂರೇ ಹೆಚ್ಚು ತೂಗುತ್ತದೆ! ಏಕೆಂದರೆ ಕೆಂಪೇಗೌಡ ಬೆಂಗಳೂರಿನ ನಿಮಾ೯ತೃವಾದರೂ ಆ ಬೆಂಗಳೂರಿಗೆ ಐಟಿ ಗರಿಯನ್ನು ಇಟ್ಟು ಜಾಗತಿಕ ಮಟ್ಟದಲ್ಲಿ ಬೆಂಗಳೂರು ಹೆಸರುವಾಸಿಯಾಗುವಂತೆ ಮಾಡಿದ್ದು ಕೃಷ್ಣ ಅವರು. ಅದು ಟ್ಯಾಕ್ಸ್ ಹಾಲಿಡೇ ಇರಬಹುದು, ಉಚಿತ ಭೂಮಿ ನೀಡಿಕೆ ಇರಬಹುದು, ಮೂಲಭೂತ ಸೌಕಯ೯ಗಳನ್ನು ಕಲ್ಪಿಸುವುದು ಹಾಗೂ ಉದ್ಯಮ ಕ್ಷೇತ್ರದ ಎಲ್ಲ ಬೇಡಿಕೆಗಳಿಗೂ ಸ್ಪಂದಿಸುವುದು ಇರಬಹುದು, ಇಂತಹ ಕೆಲಸಗಳಿಂದ ಜಗತ್ತಿನ ಪ್ರತಿಷ್ಠಿತ ಕಂಪನಿಗಳು ಬೆಂಗಳೂರಿನತ್ತ ಮುಖಮಾಡುವಂತೆ ಮಾಡಿದರು. ಹಾಗಾಗಿ ಇವತ್ತು ಬೆಂಗಳೂರೊಂದರಿಂದ ಬರುವ ಆದಾಯವನ್ನು ಇಡೀ ಕನಾ೯ಟಕ ಸರಿಗಟ್ಟಲು ಸಾಧ್ಯವಿಲ್ಲ. ನಮ್ಮ ರಾಜ್ಯದ ಖಜಾನೆ ತುಂಬುವುದೇ ಬೆಂಗಳೂರಿನಿಂದ. ಹಾಗಂತ ಕೃಷ್ಣ ಅವರು ಐಟಿ ಅಭೀವೃದ್ಧಿಗೆ ಬರೀ ಬೆಂಗಳೂರನ್ನೇ ಆಯ್ದುಕೊಳ್ಳಲಿಲ್ಲ, ಮ್ಯೆಸೂರು, ಮಂಗಳೂರು, ಹುಬ್ಬಳ್ಳಿಗಳತ್ತಲೂ ದೃಷ್ಟಿಹಾಯಿಸಿದರು. ಹಾಗಾಗಿಯೇ ಈ ನಗರಗಳಲ್ಲೂ ಇಂದು ಐಟಿ ತಾಣಗಳನ್ನು ಕಾಣುತ್ತಿದ್ದೇವೆ. ರೈತನೊಬ್ಬನಿಗೆ ಸಹಾಯ ಮಾಡಿದರೆ ಸಾಲದು ಅಂತ, ಆ ರೈತನ ಮಗ ಎಂಜಿನಿಯರಿಂಗ್ ಮಾಡಿದರೆ ಅವನಿಗೆ ಉದ್ಯೋಗ ನೀಡುವ, ಭವಿಷ್ಯ ಕಟ್ಟಿ- ಕೊಳ್ಳಲು ವೇದಿಕೆ ಸೃಷ್ಟಿ ಮಾಡಿಕೊಡುವ ಕೆಲಸವನ್ನು ಕೃಷ್ಣ ಮಾಡಿದರು. ನೂರಾರು ಸಾಫ಼್ಟ್ವೇರ್ ಕಂಪನಿಗಳು ಬೆಂಗಳೂರನ್ನು ಅರಸಿಕೊಂಡು ಬರುವಂತೆ ಮಾಡಿ ಲಕ್ಷಾಂತರ ಉದ್ಯೋಗ ಸೃಷ್ಟಿಸಿದರು. ಹಾಗಾಗಿಯೇ ಸುಶಿಕ್ಷಿತರ, ವಿದ್ಯಾವಂತರ, ಮಧ್ಯಮವಗ೯ದವರ ಪ್ರೀತಿಗೆ ಪಾತ್ರರಾದರು. ಇವತ್ತು ಬೆಂಗಳೂರಿನ ಟ್ರಾಫಿಕ್ ನಮಗೆ ಉಸಿರು ಕಟ್ಟಿಸಿರಬಹುದು, ಆದರೆ ಕೃಷ್ಣ ಅವರ ಕೆಲಸ ಲಕ್ಷಾಂತರ ಪದವೀಧರರಿಗೆ ಬೆಂಗಳೂರಿನಲ್ಲಿ ಬದುಕು ಸೃಷ್ಟಿಸಿದ್ದು ಅಷ್ಟೇ ನಿಜ. ಇದೇನು ಕಡಿಮೆ ಸಾಧನೆಯೇ?
ಅಂದು ಎಸ್.ಎಂ. ಕೃಷ್ಣ ಅವರು ಬೆಂಗಳೂರು ಅಜೆಂಡಾ ಟಾಸ್ಕ್ ಫೋಸ೯ನ್ನು ರಚನೆ ಮಾಡಿದಾಗ ನಾರಾಯಣಮೂತಿ೯ ಆದಿಯಾಗಿ ಉದ್ಯಮ ಕ್ಷೇತ್ರದ ಅತಿರಥ ಮಹಾರಥರು ಅದರ ಸದಸ್ಯರಾಗಲು ಒಪ್ಪಿಕೊಂಡಿದ್ದರು. ಅದು ಕೃಷ್ಣರ ಮೇಲಿದ್ದ ನ೦ಬಿಕೆ, ವಿಶ್ವಾಸವನ್ನು ತೋರುತ್ತದೆ. ಈ ನಡುವೆ ರಾಜ್ ಕುಮಾರ್ ಅಪಹರಣ, ಸತತ ಬರ, ರೈತರ ಆತ್ಮಹತ್ಯೆ, ವಿಠಲೇನಹಳ್ಳಿ ಗೋಲಿಬಾರ್, ನಾಗಪ್ಪ ಹತ್ಯೆ, ಜಯಾ ಕ್ಯಾತೆ, ಕಾವೇರಿ ಗಲಾಟೆಗಳು ನಡೆದವು. ಈ ಒಂದೊಂದು ಘಟನೆಗಳೂ ರಾಜ್ಯ ಬೆಚ್ಚಿ ನಿಬ್ಬೆರಗಾಗುವಂತೆ ಮಾಡಿದ್ದವು. ಒಬ್ಬ ಸಾಮಾನ್ಯ ವ್ಯಕ್ತಿ ಅವರಾಗಿದ್ದರೆ ಉಡುಗಿ ಹೋಗುತ್ತಿದ್ದರು. ಆದರೆ ಇಂತಹ ಸಮಸ್ಯೆಗಳ ನಡುವೆಯೂ ಮೂರು ವಷ೯ಗಳ ಸತತ ಬರ ಬಂದಾಗ ಅಂತಜ೯ಲಮಟ್ಟವನ್ನು ಹೆಚ್ಚಿಸಬೇಕಾದರೆ ಬೀಳುವ ಹನಿ ಹನಿ ನೀರನ್ನೂ ಕಾಪಿಟ್ಟುಕೊಳ್ಳಬೇಕೆಂದು ಭಾವಿಸಿ ಕೆರೆಗಳ ಪುನಶ್ಚೇತನಕ್ಕೆಂದೇ “ಕಾಯಕ ಕೆರೆ’ ಎಂಬ ಯೋಜನೆ ಜಾರಿಗೆ ತಂದಿದ್ದರು. ಇನ್ನು ಮ್ಯೆಸೂರು-ಬೆಂಗಳೂರು ಹೆದ್ದಾರಿಯನ್ನು ಅಗಲೀಕರಣ ಮಾಡುವ ನಿಧಾ೯ರ ಕೈಗೊಳ್ಳುವುದಕ್ಕೇ ಸಿದ್ದರಾಮಯ್ಯನವರಿಗೆ ಎರಡೂವರೆ ವಷ೯ ಬೇಕಾಯಿತು. ಕೇಂದ್ರ ಸರಕಾರ ದುಡ್ಡು ಕೊಡುತ್ತೇವೆ ಎಂದು ವಷ೯ದ ಹಿಂದೆಯೇ ಒಪ್ಪಿಕೊಂಡಿದ್ದರೂ ಸರಿಯಾದ ಡಿಪಿಆರ್ ಸಲ್ಲಿಸಲು ಇದುವರೆಗೂ ಆಗಿಲ್ಲ. ಆದರೆ ಕೃಷ್ಣ ಅವರು ನಾಲ್ಕುಪಥಗಳ ಬೆಂಗಳೂರು-ಮ್ಯೆಸೂರು ಹ್ಯೆವೆಯನ್ನು ನಾಲ್ಕೂಮುಕ್ಕಾಲು ವಷ೯ದ ಅಧಿಕಾರಾವಧಿ ಯಲ್ಲಿ ನಿಮಾ೯ಣವನ್ನೇ ಮಾಡಿಬಿಟ್ಟಿದ್ದರು! ಈಗಿನವರು ಅಡಿಗಲ್ಲು ಇಡುವುದಕ್ಕೇ ವಷ೯ಗಳು ಬೇಕು, ಕೃಷ್ಣ ನೋಡನೋಡುತ್ತಲೇ ವಿಕಾಸಸೌಧವನ್ನು ಪೂಣ೯ಗೊಳಿಸಿದ್ದರು. ಬಡವರ ನರಳಿಕೆಯನ್ನು ನೋಡಲಾರದೆ ಆರೋಗ್ಯ ಸೇವೆಗೆ ಹೊಸ ಭಾಷ್ಯ ಬರೆದ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೆ ತಂದರು. ಖಾಸಗಿ ಆಸ್ಪತ್ರೆಗಳನ್ನೂ ಆ ಯೋಜನೆಯ ವ್ಯಾಪ್ತಿಗೆ ತಂದು ಕ್ಲಿಷ್ಟ ಸೇವೆಗಳೂ ಬಡವರಿಗೆ ಸಿಗುವಂತೆ ಮಾಡಿದರು. ಊರೂರಲ್ಲಿ ಸ್ತ್ರೀ ಶಕ್ತಿ ಸಂಘಗಳನ್ನು ಆರಂಭಿಸಿ , ಸಾಲ ಸವಲತ್ತು ನೀಡಿ ಗ್ರಾಮೀಣ ಮಹಿಳೆಯರಲ್ಲಿ ಸ್ವಾವಲಂಬನೆ ತರಲು ಮುಂದಾದರು. ರೈತ ಸಂಪಕ೯ ಕೇಂದ್ರಗಳನ್ನು ಸ್ಥಾಪಿಸಿದರು, ಸ್ವಸಹಾಯ ಸಂಘಗಳನ್ನು ಆರಂಭೀಸಿದರು. ಇಂಥ ಯೋಜನೆಗಳು ಐಟಿಯಾಚೆಗಿನ ಕೃಷ್ಣ ಅವರ ದೂರದೃಷ್ಟಿ ಹಾಗೂ ಕಾಳಜಿಯ ಧ್ಯೋತಕವಾಗಿದ್ಡವು .
ಇಂಥ ಕೃಷ್ಣ ಮಾರ್ಗವನ್ನು ತುಳಿದಿದ್ದರೆ ಸಾಕಿತ್ತು, ಹಾಲಿ ಮುಖ್ಯಮಂತ್ರಿ ಸಿದ್ದಾರಾಮಯ್ಯನವರು ಒಬ್ಬ ಜನಪ್ರಿಯ ಮುಖ್ಯಮಂತ್ರಿಯಾಗಿ ಬಿಡುತ್ತಿದ್ದರು. ಮುಖ್ಯಮಂತ್ರಿಗಳೇ ನಿಮಗೆ ಗೊತ್ತಾ, ನೀವು ಮೂರು ವರ್ಷ ಅಧಿಕಾರಾವಧಿ ಮುಗಿಸಿದ್ದೀರಿ. ಕೇವಲ ಎರಡು ವರ್ಷ ಪೂರೈಸಿದಾಗಲೇ ಎಸ್.ಎಂ. ಕೃಷ್ಣ ಅವರಿಗೆ ದೇಶದ ನಂಬರ್-1 ಮುಖ್ಯಮಂತ್ರಿ ಎಂದು ಪ್ರತಿಷ್ಠಿತ ಇಂಡಿಯಾ ಟುಡೆ ಮ್ಯಾಗಝಿನ್ ಎರಡನೇ ಬಾರಿಗೆ ಕಿರೀಟಕೊಟ್ಟಿತ್ತು! In two years and four
months as chief minister, Somanahalli Malaiah
Krishna continues to lead with elegance,
clarity and efficiency that have for the second
successive year seen him being rated as India’s
best chief minister ಎಂದು ವಿವರಣೆ ಕೊಟ್ಟಿತ್ತು. ಸುಲಭವಾಗಿ ಸಿಗುವ ಹಾಗೂ ಹೊಸ ಯೋಚನೆ, ಯೋಜನೆಗಳ ಪ್ರಯೋಗಕ್ಕೆ ತೆರೆದುಕೊಳ್ಳುವ ವ್ಯಕ್ತಿ ಕೃಷ್ಣ ಎಂದು ನಾರಾಯಣಮೂತಿ೯ ಹೊಗಳಿದ್ದರು. ಆದರೆ ಇವತ್ತು ಏನಾಗುತ್ತಿದೆ? ಯಾಕಾಗಿ ಸಾಫ಼್ಟ್ವೇರ್ ಕಂಪನಿಗಳು, ಹೊಸ ಯೋಚನೆಯಾದ ಸ್ಟಾಟ್೯ ಅಪ್ಗಳು ಆಂಧ್ರದತ್ತ ಮುಖಮಾಡಿವೆ? ಚಂದ್ರಬಾಬು ನಾಯ್ಡು ಈ ಹಿಂದೆ ಆಂಧ್ರದ ಮುಖ್ಯಮಂತ್ರಿಯಾಗಿದ್ದಾಗ ಅವರಷ್ಟೇ ಚತುರ ಹಾಗೂ ಕುಶಲಮತಿ ಮತ್ತು ಅವರಿಗಿಂತಲೂ ಬುದ್ಧಿವಂತ ಎಸ್.ಎಂ. ಕೃಷ್ಣ ಕನಾ೯ಟಕದ ಮುಖ್ಯಮಂತ್ರಿಯಾಗಿದ್ದರು. ದುರದೃಷ್ಟವಶಾತ್ 12 ವಷ೯ಗಳ ನಂತರ ಚಂದ್ರಬಾಬು ನಾಯ್ಡು ಆಂಧ್ರದ ಮುಖ್ಯಮಂತ್ರಿ ಸ್ಥಾನಕ್ಕೆ ಮರಳಿದ್ದರೆ, ಕನಾ೯ಟಕದಲ್ಲಿ ಅಭೀವೃದ್ಧಿ ವಿಷಯದಲ್ಲಿ ಎಸ್.ಎಂ. ಕೃಷ್ಣ ಅವರನ್ನು ಮೇಲ್ಪಂಕ್ತಿಯಾಗಿ ಇಟ್ಟುಕೊಂಡು ನಡೆಯುವ ಬದಲು ಮುಖ್ಯಮಂತ್ರಿಗಳು ರಿಗ್ರೆ ಸ್ಸಿವ್ ಮನಸ್ಥಿತಿಯನ್ನು ತೋರುತ್ತಿದ್ದಾರೆ. ಹಾಗಾಗಿ ಕಂಪನಿಗಳು ಆಂಧ್ರದತ್ತ ಮುಖಮಾಡಿವೆ ಒಬ್ಬ ವಿದೇಶಾಂಗ ಸಚಿವರಾಗಿಯೂ ವಿನೂತನವಾದ ಪಾಸ್ಪೋಟ್೯ ಸೇವಾ ಕೇಂದ್ರ ಯೋಜನೆಯನ್ನು ಜಾರಿಗೆ ತಂದರು ಕೃಷ್ಣ. ಮಧ್ಯವತಿ೯ಗಳ ದಂಧೆ, ರಾಷ್ಟ್ರೀಯ ಭದ್ರತೆಗೆ ದಕ್ಕೆ, ಭಯೋತ್ಪಾದಕರ ಕೈಗೆ ಪಾಸ್ಪೋಟ್೯ ಸಿಗಬಾರದು, ಕಮಿಷನ್ ದಂಧೆ ನಡೆಯಬಾರದು, ಜನರಿಗೆ ಸುಲಭವಾಗಿ ಪಾಸ್ಪೋಟ್೯ ಸಿಗಬೇಕು ಎಂದು ದೇಶಾದ್ಯಂತ ನೂರಾರು ಪಾಸ್ಪೋಟ್೯ ಸೇವಾ ಕೇಂದ್ರಗಳನ್ನು ಆರಂಭಿಸಿದರು . .
ಇಷ್ಟೆಲ್ಲ ಒಳ್ಳೆಯ ಕೆಲಸ ಮಾಡಿಯೂ ಅದೃಷ್ಟ ಎನ್ನುವುದು ಕೃಷ್ಣ ಹಾಗೂ ಅಟಲ್ ಬಿಹಾರಿ ವಾಜಪೇಯಿಯವರಿಗೆ 2004ರಲ್ಲಿ ಕೈಕೊಟ್ಟಿತು. ಸಮಯಕ್ಕೆ ಸರಿಯಾಗಿ ಅಂದರೆ ಅಕ್ಟೋಬರ್ನಲ್ಲಿ ಚುನಾವಣೆ ನಡೆದಿದ್ದರೆ ಇಬ್ಬರೂ ಮತ್ತೆ ಅಧಿಕಾರಕ್ಕೆ ಬರುತ್ತಿದ್ದರೇನೋ. ಏಕೆಂದರೆ ಆ ವಷ೯ ಮಾನ್ಸೂನ್ನಲ್ಲಿ ಒಳ್ಳೆಯ ಮಳೆಯಾಯಿತು. ಆದರೆ ಏಪ್ರಿಲ್ -ಮೇನಲ್ಲಿ ಚುನಾವಣೆ ನಡೆದಿದ್ದರಿಂದ ಸತತ ಬರ ಇಬ್ಬರ ಭವಿಷ್ಯಕ್ಕೂ ಬರೆ ಎಳೆಯಿತು! ಕಡೆಯದಾಗಿ ಒಂದು ಪ್ರಶ್ನೆ: ಇವತ್ತಿನ ರಾಜಕಾರಣಿಗಳನ್ನು ನೋಡಿದಾಗ ಅಥವಾ ಅವರನ್ನು ಕಲ್ಪಿಸಿಕೊಂಡಾಗ ಕಣ್ಣಮುಂದೆ ಬರುವ ಆಕಾರ ಯಾವುದು? ಸಿಂಟೆಕ್ಸ್ ಡಬ್ಬಿಯನ್ನೂ ನಾಚಿಸುವಂಥ ಡೊಳ್ಳೊಟ್ಟೆ, ಗರಿ ಗರಿಯಾದ ಬಿಳಿ ಬಿಳಿ ಬಟ್ಟೆ, ಕೈ ಕುತ್ತಿಗೆಯಲ್ಲಿ ನಾಯಿ ಚೈನಿನಂಥ ಚಿನ್ನದ ಸರ, ಎಲ್ಲ ಬೆರಳುಗಳಿಗೂ ಗಜಗಾತ್ರದ ಹರಳಿನ ಉಂಗುರ ಮತ್ತು ಬಿಳಿ ಫಾ ಚೂ೯ನರ್ ಕಾರು.
ಇವತ್ತು ನರೇಂದ್ರ ಮೋದಿಯವರು ಮಾಡುವ ಒಳ್ಳೆಯ ಕೆಲಸವನ್ನು ಮಾತ್ರವಲ್ಲ, ಅವರು ಧರಿಸುವ ಉಡುಗೆ ತೊಡುಗೆಯನ್ನೂ ಜನ ಫಾ ಲೋ ಮಾಡುತ್ತಾರೆ. ಅಮೆರಿಕದಲ್ಲಿ ಕಲಿತ ಕೃಷ್ಣ ಈ ವಿಷಯದಲ್ಲಿ ಮೊದಲೇ ಮಾದರಿಯಾಗಿದ್ದವರು. ಅವರು ಉಡುಗೆಯ ತೊಡುಗೆಯಲ್ಲೂ ಮಾದರಿ, ಮಾತು-ಕತೆಯಲ್ಲೂ ಟಾಕು ಠೀಕು. ನೋಟದಲ್ಲೂ ಠೀವಿ. ಎಂದೂ ಎಲ್ಲೆ ಮೀರದ ಮಾತು, ಸಭ್ಯತೆಯ ಗೆರೆ ದಾಟದ ನಡತೆ. ನಾಳೆಗೆ ಕೃಷ್ಣ ಅವರಿಗೆ 84 ವಷ೯ ತುಂಬಿ 85ಕ್ಕೆ ಕಾಲಿಡುತ್ತಿದ್ದಾರೆ. ದೇವರು ಅವರನ್ನು ಚೆನ್ನಾಗಿ ಇಟ್ಟಿರಲಿ ಹಾಗೂ ಕಾಂಗ್ರೆ ಸಿಗರಿಗೆ ಕೃಷ್ಣ ಅವರನ್ನು ಮೇಲ್ಪಂಕ್ತಿಯಾಗಿಟ್ಟು ನಡೆಯುವಂಥ ಸದ್ಬುದ್ಧಿ ಕೊಡಲಿ.
April 28, 2016
April 23, 2016
Pratap Simha's Blog
- Pratap Simha's profile
- 58 followers
