ನಿತೀಶ ಖಾರ್ವಿ ಗಂಗೊಳ್ಳಿ (Nithish Kharvi) > ನಿತೀಶ ಖಾರ್ವಿ ಗಂಗೊಳ್ಳಿ's Quotes

Showing 1-11 of 11
sort by

  • #1
    Kota Shivarama Karanth
    “ಭೂಮಿಯಲ್ಲಿ ಹುಟ್ಟಿದ ಎಲ್ಲರೂ ಒಟ್ಟುಗೂಡಿ ಒಂದು ದೇವರನ್ನು ಮಾಡಿಕೊಂಡಿದ್ದಾರೆ. ಅವನೇನು ಮಾಡುತ್ತಿದ್ದಾನೋ? ಯಾರ್ಯಾರು ನನ್ನನ್ನು ನಂಬುತ್ತಿದ್ದಾರೆ, ಯಾರ್ಯಾರು ನಂಬುವುದಿಲ್ಲ ಎಂದು ಹುಡುಕಿ ಹೋಗಲಾರ . ಅವನ ಚಿಂತೆಯೇ ಇಲ್ಲದ ಪ್ರಾಣಿಗಳಿಲ್ಲವೋ? ಅವುಗಳನ್ನೂ ಬದುಕಿಸಿ ಇರಿಸಿದ್ದಾನಲ್ಲ . ಅವನನ್ನು ತಿಳಿಯಬೇಕಾದರೆ ನಾವು ಅವನನ್ನು ಹುಡುಕಿದ ಹಾಗೆ ಅವನೂ ನಮ್ಮನ್ನು ಹುಡುಕಿಕೊಂಡು ಬರಬೇಕಾದುದು ಇಲ್ಲ . ನಾವೇ ಅವನಲ್ಲಿ ಪ್ರಶ್ನೆ ಕೇಳುತ್ತೇವೆ. ನಾವೇ ಅವಕ್ಕೆ ಉತ್ತರವನ್ನು ಹೇಳಿಕೊಳ್ಳುತ್ತೇವೆ. ನಮಗೆ ಇಷ್ಟ ಕಂಡಂತೆ ನಡೆದಾಗ ದೇವರ ಇಚ್ಛೆ ಅನ್ನುತ್ತೇವೆ . ಅನಿಷ್ಟ ಪ್ರಾಪ್ತಿಸಿದಾಗ ಅನಿಷ್ಟ ಎನ್ನುತ್ತೇವೆ. ದೇವರು (?) ಕೊಟ್ಟ ಆಯುಷ್ಯವನ್ನು ಇದ್ದಷ್ಟು ಕಾಲ ಎಲ್ಲರ ಜೊತೆ ಒಳ್ಳೆಯ ರೀತಿಯಿಂದ ಬಾಳಿ ಬದುಕುವುದೇ ಪೂಜೆ ಎಂಬ ಬುಧ್ಧಿ ಯಾಕೆ ಬರಬಾರದು ನಮಗೆ?”
    Kota Shivarama Karanth, ಮೂಕಜ್ಜಿಯ ಕನಸುಗಳು [Mookajjiya Kanasugalu]

  • #2
    Kota Shivarama Karanth
    “ನಾನು ದೇವರನ್ನು ನಂಬುವುದಿಲ್ಲ. ಏಕೆಂದರೆ ನಾನು ನೋಡಿಲ್ಲ. ನನಗೆ ಯಾವುದು ಗೊತ್ತಿಲ್ಲವೋ ಅದನ್ನು ನಂಬುವುದಿಲ್ಲ. ರಾಮಕೃಷ್ಣ ಪರಮಹಂಸರು ನಂಬಿದ್ದರು. ಅದನ್ನು ತಪಸ್ಸಿನಿಂದ ಕಂಡುಕೊಂಡರು. ನನಗೆ ರಾಮ ಎಂದರೆ ರಾಜಾ ರವಿವರ್ಮ ಅವರ ಚಿತ್ರ. ಕೃಷ್ಣ ಎಂದರೆ ಗುಬ್ಬಿ ವೀರಣ್ಣನವರ ಕೃಷ್ಣಲೀಲಾ ನೆನಪಿಗೆ ಬರುತ್ತದೆ. ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ನಾವು ನಂಬಿ ಬಂದಿದ್ದೇವೆ. ಆದರೆ ಆ ರೀತಿ ಆಗಿಲ್ಲ. ನನಗೆ ಅನುಕೂಲವಾದಾಗ ಮಾತ್ರ ದೇವರನ್ನು ನಂಬುತ್ತೇನೆ ಎಂಬುದು ಸರಿಯಲ್ಲ.”
    Kota Shivarama Karanth, ಮೂಕಜ್ಜಿಯ ಕನಸುಗಳು [Mookajjiya Kanasugalu]

  • #3
    S.L. Bhyrappa
    “humanity has no hope of survival unless religion is wiped out.”
    Translated by Sandeep Balakrishna S.L. Bhyrappa, Aavarana: The Veil

  • #4
    Kota Shivarama Karanth
    “ಹುಟ್ಟಿ ಬಂದಿದ್ದೇವೆ, ಕೈ, ಮೂಗು, ಬಾಯಿ, ಪಡೆದು. ಅವೆಲ್ಲ ಇರುವುದು ಯಾತಕ್ಕೆ? ಕಚ್ಚಲಿಕ್ಕೆ ಹುಲಿಯ ‘ಬಾಯಿ ಕೊಡು’, ಹೊರಲಿಕ್ಕೆ ಆನೆಯ ‘ಮೈ ಕೊಡು’, ನುಸುಳಲಿಕ್ಕೆ ನುಸಿಯ ‘ಶರೀರ ಕೊಡು’ ಅಂದರೆ ಹೇಗಾದೀತು? ಎಲ್ಲರಿಗೆ ಎಲ್ಲವೂ ಬೇಕಾದರೆ ಅವನು ಕೊಡುವುದಾವುದು ಎಲ್ಲಿಂದ? ಅವನೇ ನಮ್ಮನ್ನು ಹುಟ್ಟಿಸಿದ್ದಾನೆ ಎಂತ ತಿಳಿಯುವುದಾದರೆ, ಕೊಡುವಷ್ಟನ್ನು ಕೊಟ್ಟೆ ಹುಟ್ಟಿಸಿದ್ದಾನೆ ಎಂತ ತಿಳಿಯಬೇಕು.”
    Kota Shivarama Karanth, ಮೂಕಜ್ಜಿಯ ಕನಸುಗಳು [Mookajjiya Kanasugalu]

  • #5
    Kota Shivarama Karanth
    “ಜನ ಆದರ್ಶವಾದಿಗಳನ್ನು ಪೂಜಿಸುವುದರಲ್ಲಿ ತೃಪ್ತರು, ಅನುಸರಿಸುವುದರಲ್ಲಿ ಯಾವಾಗಲೂ ಹಿಂದೆಯೇ”
    Kota Shivarama Karanth

  • #6
    Kota Shivarama Karanth
    “ಕನ್ನಡದ ಮಕ್ಕಳಿಗೆ ಹಿಂದಿ, ಸಂಸ್ಕೃತಗಳ ರೂಢಿಯಿಲ್ಲ, ಹಾಗಾಗಿ ಅವರಿಗೆ ‘ಭಾರತ ಮಾತೆ’ ಎಟುಕದ ವ್ಯಕ್ತಿ. ಅವಳ ಸಲುವಾಗಿ ಮಕ್ಕಳ ಬಾಯಿಯಿಂದ ‘ಭರತ್ ಮತಾ ಕೀ ಜೈ’ ಅನ್ನಿಸುವಾಗ ನಗು ಬರುತ್ತದೆ. ‘ತಾಯಿಯೇ ನಿನಗೆ ನಮಸ್ಕಾರ’ ಎಂಬ ಅರ್ಥದ ಮಾತುಗಳನ್ನು ‘ವಂದೇ ಮಾತರಮ್’ ಎಂದು ವಿನಯ ರಹಿತವಾಗಿ ‘ಜೋ ಹುಷಾರ್’ ಎಂಬಂತೆ ಸಾಮೂಹಿಕವಾಗಿ ಒದರಿಸುವುದನ್ನು ಕೇಳಿದಾಗ ದುಃಖವಾಗುತ್ತದೆ.”
    Kota Shivarama Karanth

  • #7
    Kota Shivarama Karanth
    “ಯಾರಿಗೂ ಉಪದೇಶ ಮಾಡಬೇಡಿ. ನೀವೇನು ಹೇಳಬೇಕಂತಿದ್ದೀರೋ ಹಾಗೆ ಬದುಕಿ ತೋರಿಸಿ.”
    Kota Shivarama Karanth

  • #8
    Yashwant Chittal
    “ಅಂಗಿಗೆ ಬೆಂಕಿ ಹತ್ತಿದಾಗ ನೋವಿನಿಂದ ವಿಲಿವಿಲಿ ಒದ್ದಾಡಿದ ದೇಹದ 'ಸಾಯಬಾರದು' ಎಂಬ ಸಂಕಲ್ಪದ ಹಿಂದೆ ಕೋಟಿ ವರ್ಷಗಳ ಇತಿಹಾಸವಿದ್ದರೆ 'ಯಾಕೆ ಬದುಕಿರಬೇಕು?' ಎಂದು ಕೇಳಿಕೊಳ್ಳುವ, ಅರಿಯಬೇಕೆನ್ನುವ, ವಿವೇಕಪ್ರಜ್ಞೆ ತೀರಾ ಇತ್ತೀಚಿನದು, ಅಲ್ಲವೇ?”
    Yashwant Chittal, ಶಿಕಾರಿ | Shikari

  • #9
    Richard P. Feynman
    “Religion is a culture of faith; science is a culture of doubt.”
    Richard P. Feynman

  • #10
    Richard P. Feynman
    “I would rather have questions that can't be answered than answers that can't be questioned.”
    Richard Feynman

  • #11
    Richard P. Feynman
    “I... a universe of atoms, an atom in the universe.”
    Richard P. Feynman



Rss
All Quotes



Tags From ನಿತೀಶ ಖಾರ್ವಿ ಗಂಗೊಳ್ಳಿ’s Quotes