Jump to ratings and reviews
Rate this book

ಚಿತ್ರದುರ್ಗ ಇತಿಹಾಸ #5

ವಿಜಯೋತ್ಸವ | Vijayotsava

Rate this book
Vijayotsava is the fifth book in Ta Ra Su's historical 8 volume fiction series on the Chitradurga Paleyagars. This is the sequel to Hosa Hagalu, that saw Bharamappa Nayaka, ascend the throne of Chitradurga. The present volume narrates how the peace seeking Bharamappa Nayaka is driven to war due to the political upheaval of the time. The fauzdar of Seerya, a feudatory of the Mughals, seeks to subdue Chitradurga by threat of force and is rebuffed by a proud Chitradurga. Ultimately, Seerya has to extend an arm of friendship in order to take on militant Maratha bands that are looting and terrorising the countryside. The armies of Chitradurga effectively rout the wayward bands. Elements of hindu-muslim unity and a romantic tale of a muslim singer and a French soldier are woven into the narrative.

120 pages, Paperback

First published January 1, 1966

1 person is currently reading
98 people want to read

About the author

Tha Ra Su

92 books129 followers
'ತಳುಕು ರಾಮಸ್ವಾಮಯ್ಯ ಸುಬ್ಬರಾಯ' ಅವರು ಕನ್ನಡದ ಮೊದಲ ಪ್ರಾಧ್ಯಾಪಕರಾದ ತಳುಕಿನ ವೆಂಕಣ್ಣಯ್ಯನವರ ತಮ್ಮನವರ ಮಗ. ಇವರು ಹುಟ್ಟಿದ್ದು ೧೯೧೯ರಲ್ಲಿ. ಅವರು ಬರೆದ 'ನಾಗರಹಾವು' ಕಾದಂಬರಿಯಲ್ಲಿನ ರಾಮಾಚಾರಿಯ ಪಾತ್ರದಂತೆಯೇ ಅವರು ಛಲದ ಮನುಷ್ಯರಾಗಿದ್ದವರು. ಬಹಳ ಕಷ್ಟದಲ್ಲಿ ಜೀವಿಸಿದವರು. ಇವರ ಕೃತಿಗಳಾದ ಕಂಬನಿಯ ಕುಯಿಲು, ರಕ್ತರಾತ್ರಿ, ಮತ್ತು ತಿರುಗುಬಾಣ, ಚಿತ್ರದುರ್ಗದ ಇತಿಹಾಸವನ್ನು ಬಹಳ ರಸವತ್ತಾಗಿ ಚಿತ್ರಿಸಿವೆ ಎಂದು ವಿಮರ್ಶಕರ ಅಭಿಪ್ರಾಯ. ಏಪ್ರಿಲ್ ೧೦, ೧೯೮೪ರಲ್ಲಿ ಹೃದಯಾಘಾತವಾಗಿ ಬೆಂಗಳೂರಿನ ರಾಜಾಜಿನಗರದಲ್ಲಿರುವ 'ವರಲಕ್ಷ್ಮಿ ನರ್ಸಿಂಗ್ ಹೋಂ'ನಲ್ಲಿ ನಿಧನ ಹೊಂದಿದರು.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
40 (42%)
4 stars
42 (44%)
3 stars
11 (11%)
2 stars
2 (2%)
1 star
0 (0%)
Displaying 1 - 9 of 9 reviews
Profile Image for ಸುಶಾಂತ ಕುರಂದವಾಡ.
423 reviews25 followers
July 13, 2021
ದುರ್ಗದಲ್ಲಿ ನೆರೆ ಶತ್ರುರಾಜ್ಯಗಳಿಂದ ಅಪ್ಪಣೆ, ಅವರಿಗೆ ನೀಡಿದ ನೆರವು, ವಿದೇಶಿಯೊಬ್ಬನ ಆಗಮನ, ಅವನ ಜೊತೆ ಸೀರ್ಯದ ಗಾಯಕಿಯ ಪ್ರಣಯ ಹೀಗೆ ಸಾಗುತ್ತದೆ ಕಥೆ. ಇದರ ಮಧ್ಯೆ ದುರ್ಗದಲ್ಲಿಯ ರಾಜಕೀಯ ಮತ್ತು ಮರಾಠರ ಮೇಲೆ ಆಕ್ರಮನದಿಂದ ಸಂದ ಜಯದ ಮುನ್ನುಡಿಯೇ ವಿಜಯೋತ್ಸವ.
ಕಾದಂಬರಿಯ ಕೊನೆಯ ಸಾಲು ಇಷ್ಟವಾಗದೆ ಇರುವುದಿಲ್ಲ- "ಮರಾಠರು ಸೋತದ್ದು ದೊಡ್ಡದಲ್ಲ; ಈತನ(ವಿದೇಶಿ ಜಾನ್) ಹೃದಯಕ್ಕೆ ಲಗ್ಗೆ ಹಾಕಿದ ನಿರಾಶೆಯ ಕತ್ತಲು ಸೋತದ್ದು ಹಿರಿದಾದ ವಿಜಯೋತ್ಸವ".
Profile Image for Abhiram's  Book Olavu.
105 reviews3 followers
April 15, 2025
ಅರಸೊತ್ತಿಗೆ ಪಡೆದವನ ತಲೆಯ ಮೇಲೆ ಸದಾ ತೂಗುಗತ್ತಿ ಇದ್ದೆ ಇರುವುದು, ಆದ್ದರಿಂದ ಒಬ್ಬ ನಾಯಕ ಸದಾ ತನ್ನ ಚಿತ್ತವನ್ನ ಪ್ರಜೆ, ರಾಜ್ಯ ಹಾಗೂ ಸ್ಥಾನಗಳನ್ನು ಕಾಪಾಡಿಕೊಳ್ಳುವಲ್ಲಿ ಕೇಂದ್ರೀಕರಿಸಬೇಕು. ಇಲ್ಲವಾದರೆ ನೆರೆಹೊರೆಯವರು ರಾಜ್ಯವನ್ನ ಕಬಳಿಸಿಕೊಂಡಾರೂ!

ಅದಕ್ಕೆ ಚಿತ್ರದುರ್ಗ ಹೊರತಲ್ಲ. ದುರ್ಗದ ಗದ್ದುಗೆಯ ಮೇಲೆಯೂ ಕಣ್ಣರಳಿಸಿದ ಗಿಡುಗಳು ಹಲವಾರು. ಒಂದೆಡೆ ಸೀರ್ಯಾದ ನವಾಬ, ಇನ್ನೊಂದೆಡೆ ಸಣ್ಣಪುಟ್ಟ ಪಾಳೆಯಗಾರರು, ಮಗದೊಂದೆಡೆ ಉಪಟಳ ಗೈವ ತಂಟೆಕೋರ ಮರಾಟರು! ಈ ಎಲ್ಲಾ ರಾಜಕೀಯ ಸನ್ನಿವೇಶಗಳ ಜೊತೆಗೆ ಲೇಖಕರು ಕೆಲವು ಮುಖ್ಯ ಪಾತ್ರಗಳಾದ ಮೆಹೆರ್ ಭಾನು, ಜಾನ್ ಡ್ಯುವೇರೋ, ನಾಯಕರು ಮತ್ತು ಪ್ರಧಾನಿಗಳ ಮೂಲಕ ಜಾತಿ, ಧರ್ಮ, ಸಂಬಂಧಗಳ ಜಿಜ್ಞಾಸೆಗೆ ಓದುಗರನ್ನು ಸೇರಿಸಿದ್ದಾರೆ. ಒಂದು ಸಾಮಾಜಿಕ ಕಾದಂಬರಿ ಶೈಲಿಯಲ್ಲಿ ಬರೆದ ಈ ಭಾಗವು 'ವಿಜಯೋತ್ಸವ'ದಲ್ಲಿ ಕೊನೆಗೊಳ್ಳುವುದು.

ಒಟ್ಟಿನಲ್ಲಿ, ತ. ರಾ. ಸು. ರವರ ಬರಹಕ್ಕೆ ಮರುಳಾಗದವರುಂಟೇ??
Profile Image for Abhi.
89 reviews20 followers
January 2, 2021
||• ದುರ್ಗದ ದಂತಕಥೆಗಳು •||

ವಿಜಯೋತ್ಸವ

ಇತ್ತೀಚೆಗೆ ಬಂದಿರುವ ದುರಭ್ಯಾಸವೆಂದರೇ - ಪುಸ್ತಕದ ಹೆಸರು ನೋಡಿ ಬಹುಶಃ ಕಥೆ ಹೀಗಿರಬಹುದು ಎಂಬ ಎಣಿಕೆಗಳು ಶುರುಮಾಡಿಕೊಳ್ಳುವುದು.‌ ಮೂರು ಬಾರಿಯೂ ತಪ್ಪಾಗಿ ಎಣಿಸಿ, ಮೂರು ಬಾರಿಯೂ ಲೇಖಕರು ಆಶ್ಚರ್ಯ ಪಡಿಸಿದ್ದಾರೆ. ‌"ವಿಜಯೋತ್ಸವ" ಎಂದರೆ ಯುದ್ದದಲ್ಲಿ ಗೆದ್ದಿರಬಹುದು ಎಂದುಕೊಂಡೆ, ಆದರೆ ತ.ರಾ.ಸುರವರು ಯುದ್ಧದಾಚೆಯ ಸೂಕ್ಷ್ಮಗಳನ್ನು ಬಹಳ ನಯವಾಗಿ ನಿರೂಪಿಸಿದ್ದಾರೆ.

ಹೊಸ ಹಗಲು ಮುಗಿಸಿದ ನಂತರದ ಮುರುಘಾ ರಾಜೇಂದ್ರಸ್ವಾಮಿಗಳು ಹೇಳುವ ಕಾಲಜ್ಞಾನದ ನುಡಿಗಳು ರಾಜ ಭರಮಣ್ಣ ನಾಯಕರನ್ನು ಅಣಜಿಯ ಯುದ್ಧದ ಫಲಿತಾಂಶಕ್ಕಿಂತ ಹೆಚ್ಚು ಚಿಂತೆಗೀಡು ಮಾಡುತ್ತದೆ. ಲೇಖಕರು ಮೊದಲ ಪುಸ್ತಕದಲ್ಲಿ ಹೇಳಿದಂತೆ ಸತ್ಯದೊಂದಿಗೆ ಅವರ ಕಲ್ಪನೆಗಳನ್ನು ‌ಹೇರಳವಾಗಿ ಬೆರೆಸಿದ್ದಾರೆ. ಈ ಪುಸ್ತಕವು ನಾಯಕರ ಚಿಂತೆಯನ್ನು ಹಾಗೂ ರಾಜಗುರುಗಳ ಕಾಲಜ್ಞಾನವನ್ನು ನಿಜವಾಗಿಸುವಂತೆ ಬರೆದಿದ್ದಾರೆ..!

ದೆಹಲಿಯ ಬಾದಷಹರ ಪತ್ರದೊಂದಿಗೆ ಶುರುವಾಗುವ ಈ ಪುಸ್ತಕವು ಎಲ್ಲೂ ವೇಗವನ್ನು ಕಳೆದುಕೊಂಡಿಲ್ಲ. ಸೀರ್ಯದ (ನನಗನಿಸಿದಂತೆ‌ ಇಂದಿನ ಸಿರಾ) ದೆಹಲಿಯ ದಿವಾನ್ ಖಾಸಿಂ ಖಾನ್‌ನ ವಕೀಲ ಜ಼ುಲ್‌ಫಿಕರ್ ಖಾನ್ ತರುವ ರಾಜಸದಲ್ಲಿ ಅವರಿಗೆ ದುರ್ಗದ ನಾಯಕರು ಸಾಮಂತರಾಗುವಂತೆ, ಕಪ್ಪ ಕಾಣಿಕೆ ಸಲ್ಲಿಸುವಂತೆ ಹೇಳಿರುತ್ತಾರೆ.‌ ಕುಪಿತಗೊಳ್ಳುವ ನಾಯಕ‌ ಮತ್ತು ದಳವಾಯಿಗಳನ್ನು ಪ್ರಧಾನಿ ಪರಶುರಾಮಪ್ಪ ಸಮಾಧಾನಗೊಳಿಸಿ ಒಂದು ತುಲನಾತ್ಮಕದ‌ ನಿರ್ಧಾರ ತೆಗೆದುಕೊಳ್ಳುವಂತೆ ಮಾಡುತ್ತಾರೆ. ಅವರ ನಿರ್ಧಾರ ದುರ್ಗಕ್ಕೆ ಶ್ರೀಮಂತವಾಗಿಸುವುದೋ, ಸಾಮಂತವಾಗಿಸುವುದೋ ಎಂಬುದು ತಿಳಿಯಲು ಪುಸ್ತಕ ಓದಬೇಕು.

ಪುಸ್ತಕಕ್ಕೆ ಸಾಕಷ್ಟು ಏರಿಳಿತಗಳನ್ನು ಕೊಟ್ಟು ಓದುಗನಿಗೆ ಎಲ್ಲೂ ಏಕತಾನ ಎನಿಸಿದಂತೆ ನೋಡಿಕೊಳ್ಳುತ್ತಾರೆ‌ ಲೇಖಕರು. ಗೀತೆ ಮತ್ತು ಉಪನಿಷತ್‌ಗಳ ಉಲ್ಲೇಖ ಪುಸ್ತಕದ ಒಟ್ಟಂದವನ್ನು ದ್ವಿಗುಣಗೊಳಿಸಿವೆ. ಧರ್ಮ ಮತ್ತು ಸತ್ಯದ ಕುರಿತು ಈಶಾವಾಸ್ಯೋಪನಿಷತ್‌ನ ಶ್ಲೋಕ ನಮ್ಮೊಳಗೆ ಪ್ರಶ್ನೆಗಳನ್ನು ಉದಯಿಸುತ್ತದೆ.

"ಹಿರಣ್ಮಯೇಣ ಪಾತ್ರೇಣ ಸತ್ಯಸ್ಯಾಪಿಹಿತಂ ಮುಖಂ
ತತ್ತ್ವಂ ಪುಷನ್ನಪಾವೃಣು ಸತ್ಯಧರ್ಮಾಯ ದೃಷ್ಟಯೇ"

(ಅರ್ಥ ಪುಸ್ತಕದಲ್ಲಿ)

ಈ ಶ್ಲೋಕದ ವಿಶೇಷತೆಗಿಂತ ಇದನ್ನು ತ.ರಾ.ಸುರವರು ಮೆಹರ್‌ಬಾನು ಎಂಬ ಮುಸ್ಲಿಂ ಗಾಯಕಿಯಿಂದ‌ ಹೇಳಿಸಿದ್ದಾರೆ! ಬಾದಷಹ ಮತ್ತು ನಾಯಕರ ನಡುವಿನ ಮನಸ್ತಾಪವೆಂದ ಮೇಲೆ ಹಿಂದೂ ಮುಸ್ಲಿಂ ಗಲಭೆಗಳನ್ನು ಬೆಣ್ಣೆಯಿಂದ ಕೂದಲ ತೆಗೆದಷ್ಟೇ ಚಂದವಾಗಿ ನಿರೂಪಿಸಿದ್ದಾರೆ.

ಮೆಹರ್‌ಬಾನುವಿನ ಅಂದದ ಬಗ್ಗೆ ಬರೆದಿರುವ ಸಾಲುಗಳು ಇದು ಯುದ್ಧದ ಕುರಿತಾದ ಪುಸ್ತಕವಾ ಎಂಬ ಪ್ರಶ್ನೆಗಳು ಮೂಡುತ್ತವೆ. ಈ ಪುಸ್ತಕದ ಬಹುಮುಖ್ಯ ಪಾತ್ರ ಈಕೆಯದು!

ಲೇಖಕರು ಇಲ್ಲಿ ಒಬ್ಬ‌‌ ಪ್ರಚಂಡ‌‌ ರಾಜ ಮತ್ತು ಸಂಯಮ‌ ಕೂಡಿದ ಪ್ರಧಾನಿಯ ರಾಜತಾಂತ್ರಿಕತೆಯೊಂದಿಗೆ ಇನ್ನೂ ಹತ್ತು ಹಲವು ವಿಷಯಗಳನ್ನು ಸೇರಿಸಿದ್ದಾರೆ! ಕೇವಲ ಯುದ್ಧ ರಾಜಕೀಯ ದಳ್ಳುರಿಗಳ ಕುರಿತು‌ ಬರೆಯದೇ ಧರ್ಮ, ಪ್ರೀತಿ, ಜಾತಿ, ಮಾನವತಾವಾದಗಳ ಬಗ್ಗೆಯೂ ಬರೆದಿರುವ ಈ ಪುಸ್ತಕವು ಈ ಹಿಂದಿನ ನಾಲ್ಕು ಪುಸ್ತಕಗಳಿಗಿಂತ ಹೆಚ್ಚು ಅಭಿಮಾನ ಗಳಿಸಿಕೊಳ್ಳುತ್ತದೆ.

ಯುದ್ಧ ನಾಯಕರು, ಬಾದಷಹರು, ಮರಾಠರು ಮತ್ತು ನಿಂಬಾಳ್ಕರರ ನಡುವೆ‌ ನಡೆದರೂ ಇವರ್ಯಾರು ವಿಜಯೋತ್ಸವ ಆಚರಿಸುವುದಿಲ್ಲ! ಗೆದ್ದದ್ದು ಏನು ಎಂಬ ಪ್ರಶ್ನೆ ಮೂಡಿದರೇ ದಯವಿಟ್ಟು ಪುಸ್ತಕ ಓದಿ. ಓದಿದ್ದರೇ ಎಂದಿನಂತೆ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ. ಧನ್ಯವಾದ!

ಅಭಿ...
Profile Image for Karthik Jodangi.
18 reviews
October 1, 2025
ಆಸೆ, ಬಯಕೆಗಳನ್ನು ಅಪೇಕ್ಷಿಸುವ ಬದಲು ಅವೆಲ್ಲವನ್ನು ನನಗೆ ಪೂರೈಸುವ ಶಕ್ತಿ ನೀಡಲು ಪ್ರಾರ್ಥಿಸಬೇಕು ಎಂಬ ಅಂಶ ಇಷ್ಟವಾಯಿತು
18 reviews
April 20, 2024
ತ.ರಾ.ಸು ಅವರ ಚಿತ್ರದುರ್ಗ ಇತಿಹಾಸದ ಕುರಿತ ಕಾದಂಬರಿ ಮಾಲೆಯ ಐದನೆಯ ಕೃತಿ.

ಭರಮಣ್ಣನಾಯಕನ ಧೀರ ಜೀವನದ ಮತ್ತು ದುರ್ಗದ ಪ್ರಗತಿಯ ಮುಂದುವರೆದ ಭಾಗ.
ಸೀರ್ಯದವರ ಸಾಮಂತ ಪದವಿ ಸ್ವೀಕಾರ ಮಾಡಬೇಕೆಂದು ಅಲ್ಲಿಯ ದಿವಾನ್ ಫೌಜುದಾರ್ ತನ್ನ ವಕಿಲನನ್ನು ಮತ್ತು ಬಿಜಾಪುರದ ಪ್ರಸಿದ್ದ ಗಾಯಕಿ, ಮೆಹರ್ ಬಾನುವನ್ನು ದುರ್ಗಕ್ಕೆ ಕಳುಹಿಸುತ್ತಾನೆ. ದುರ್ಗ ಅದನ್ನು ನಿರಾಕರಿಸಿ ಪ್ರತ್ಯುತ್ತರವಾಗಿ ಸ್ನೇಹ ಸಂಬಂಧವನ್ನ ಪ್ರಸ್ತಾಪಿಸುತ್ತದೆ.
ಮರಾಠ ಸೇನೆ ಸಂತೋಜಿ ಗೋರ್ಪಡೆ ನಾಯಕತ್ವದಲ್ಲಿ ಸುತ್ತ ಹಳ್ಳಿಗಳಲ್ಲಿ ದರೋಡೆ ಮಾಡುತ್ತಿದ್ದು, ಹೀಗೆ ವಿದೇಶಿಯೋರ್ವ ಜಾನ್ ಡ್ಯುವೇರೋನ, ಸಂಪತ್ತು ಲೂಟಿ ಮಾಡಿದ್ದರು.
ದೊಡ್ಡೇರಿಯಲ್ಲಿ ಸೀರ್ಯದವರು ದುರ್ಗದವರ ಸಹಾಯದಿಂದ ಮರಾಠರನ್ನ ಸೋಲಿಸುತ್ತಾರೆ. ಜಾನ್ ಡ್ಯುವೇರೋ ಸಂತೋಜಿಯನ್ನು ವಧಿಸುತ್ತಾನೆ.

ಗಮನಾರ್ಹ ಸಾಲುಗಳು:
ಮೆಹರ್ ಬಾನುವಿನ ಜಾತ್ಯತೀತ ಭಾವನೆ:

“ಸರ್ವಧರ್ಮ ಸಮಾನತೆಯನ್ನು ಸಾರುವ 'ದೀನ್-ಇಲಾಹಿ' ಮತಸ್ಥಾಪಕ ಅಕ್ಟರ್, ಗೀತೋಪನಿಷತ್ತುಗಳಲ್ಲಿ ತನ್ನ ಬಾಳ ಬೆಳಕನ್ನು ಕಂಡುಕೊಂಡ ದಾರಾಷ್ಹುಕೊ `ರಾಮ-ರಹೀಮ್‌, ಈಶ್ವರ ಅಲ್ಲಾ, ಕಾಶಿ-ಕಾಬಾ' ಎಲ್ಲವೂ ಒಂದೇ ಎಂದು ಸಾರಿದ ದೀನಬಂಧು ಕಬೀರ್, 'ದೇವವಧು'ವಾದ ಜೇಬುನ್ನೀಸಾ, ಮಹಾಕವಿ ಉಮರ್‌ಕಯ್ಯಂ ಇವರು ನಿಜವಾದ ಮುಸ್ಲಿಮರು. ಇಸ್ಲಾಂ ಎಂದರೆ ಕೊಲೆಗಡುಕತನಕ್ಕೆ ಪರ್ಯಾಯ ಶಬ್ದವಲ್ಲ ಜಹಾಪನ, ಪೈಗಂಬರರು ತಮ್ಮ ಪವಿತ್ರ ಖುರಾನಿನಲ್ಲಿ ಸಾರಿದ 'ಅಲ್ಲಾಹೊ ಅಕ್ಟ‌' ಎಂಬ ಘೋಷವೂ, ಉಪನಿಷತ್ತಿನಲ್ಲಿ 'ಏಕಂ ಸದ್ವಿಪ್ರಾ ಬಹುಧಾ ವದಂತಿ' ಎಂಬ ಘೋಷವೇ; ಬಸವಣ್ಣನವರು ಹೇಳಿದ ದೇವನೊಬ್ಬ ನಾಮ ಹಲವು ಕಾಣಿರೋ ಎಂಬ ಮಾತೇ. ಇಸ್ಲಾಂ ಒಂದೇ ಪವಿತ್ರ ಮತ, ಉಳಿದದ್ದೆಲ್ಲವೂ ಹಲಾಲ್' ಎಂದು ಹೇಳುವವರು, ತಮ್ಮ ಕುರುಡುಗಣ್ಣಿಗೆ ಕಂಡ ಕತ್ತಲೇ ಬೆಳಕೆಂದು ಸಾರುವ ಗೂಬೆಗಳು. ಅಂಥ ಹಿಸುಣರ ಮಾತನ್ನೇ ಸತ್ಯವೆಂದು ಪ್ರಭುಗಳೂ ಭ್ರಮಿಸಬಾರದು."
Profile Image for Karthik.
61 reviews19 followers
December 29, 2021
ದುರ್ಗದ ದಂತಕಥೆಗಳು - 5

"ಮನುಷ್ಯ ಪ್ರಯತ್ನದಿಂದ ದೊರೆತ ಗೆಲುವಿಗಿಂತಲೂ, ದೈವಾನುಗ್ರಹ ದಿಂದ ದೊರೆತ ವಿಜಯೋತ್ಸವ ಹಿರಿದಾದದ್ದು, ಹೆಚ್ಚು ಶಾಶ್ವತವಾದದ್ದು. ಅಲ್ಲವೇ ಜಹಪನಾ ?" ಕೊನೆಯಲ್ಲಿ ಜಾನ್ ಹೇಳುವ ಮಾತಿನಲ್ಲಿ ಈ ಕಾದಂಬರಿಯ ಆಶಯ ಅಡಕವಾಗಿದೆ.
.
ದುರ್ಗದ ಚತುರ ರಾಜಕಾರಣ, ಮೆಹರ್ ಬಾನ್ - ಜಾನ್ ಡ್ಯುವೇರೋ ನಡುವಿನ ಉತ್ಕಟ ಪ್ರೇಮ , ಸಂತೋಜಿ ಘೋರ್ಪಡೆ ಯ ಸೈನಿಕರ ಪುಂಡಾಟ, ದೊಡ್ಡೇರಿಯಲ್ಲಿ ನಡೆದ ಕಾಳಗ - ���ೀಗೇ ಹಲವು ಸಂಗತಿಗಳನ್ನು ‘ವಿಜಯೋತ್ಸವ'ದಲ್ಲಿ ನಾವು ಕಾಣಬಹುದು.
.
ಹಿಂದಿನ ನಾಲ್ಕು ಪುಸ್ತಕಗಳಿಗಿಂತ, ಈ ಕಾದಂಬರಿ ವಿಭಿನ್ನವಾಗಿದ್ದು, ದುರ್ಗದ ಐತಿಹ್ಯ ದೊಂದಿಗೆ ಜಾನ್ ಡ್ಯುವೇರೋ ಹಾಗೂ ಮೆಹರ್ ಬಾನುವಿನ ಕಥೆಯೂ ಸೇರಿ ಒಂದೊಳ್ಳೆ ಓದು ಎನಿಸಿಕೊಳ್ಳುತ್ತದೆ.

- ಕಾರ್ತಿಕ್ ಕೃಷ್ಣ
29-12-2021
Profile Image for Prashanth Mysore.
56 reviews1 follower
January 2, 2021
5th in the series on Chitradurga's Nayakas history. Little disappointed because the focus is more on other characters than the hero Bharamanna Nayaka. Also, disappointed with the description of the war and the way the book ended.
1 review
January 4, 2020
ಚೆನ್ನಾಗಿದೆ. ದುರ್ಗದ ಇತಿಹಾಸವನ್ನು ವಿವರಿಸಿದ್ದಾರೆ.
Displaying 1 - 9 of 9 reviews

Can't find what you're looking for?

Get help and learn more about the design.