Kuppali Venkatappa Puttappa widely known by the pen name Kuvempu was a Kannada writer and poet, widely regarded as the greatest poet of 20th century Kannada literature. He is immortalised by some of his phrases, and in particular for his contribution to Universal Humanism or in his own words Vishwa maanavataa Vaada. He has penned the Karnataka State anthem Jaya Bharata Jananiya Tanujate.
He has written several Poems, stories and plays. His work Sri Ramayana Darshanam, the rewriting of the great ancient Indian epic Ramayana in modern Kannada, is regarded as revival of the era of Mahakavya (Epic poetry) in a contemporary form and charm.
He has received several awards for his works in the field of literature such as, Jnanpith Award, Sahitya Akademi Award , Pampa Award , Karnataka Ratna. He has also received The Padma Bhushan, the third highest civilian award in the Republic of India and Padma Vibhushan, the second highest civilian award in the Republic of India. He is the second among Kannada poets to be revered as Rashtrakavi
His son K P Poornachandra Tejaswi was a famous writer as well.
ಇಲ್ಲಿನ ಕವಿತೆಗಳ ವಸ್ತು ಪ್ರೀತಿ, ವಾತ್ಸಲ್ಯ ಮತ್ತು ವಿರಹ, ಕವಿ ಇಲ್ಲಿ ತನ್ನ ಜೀವನದ ಮುಖ್ಯ ಘಟ್ಟಗಳ ನೋವು ನಲಿವನ್ನು ಮುದ್ದಾದ ಕಾವ್ಯದಿಂದ ವರ್ಣಿಸಿದ್ದಾರೆ. ಮದುವೆಯ ಆರಂಭದ ದಿನಗಳು, ಮೊದಲನೆಯ ಮಗುವಿನ ಸುದ್ದಿಯ ಖುಷಿ, ಮಗುವಿನ ಕಾಯುವಿಕೆ, ಮಗುವಿನ ಬೆಳವಣಿಗೆ, ಮಗು ಅಮ್ಮಳ ಜೊತೆ ಅಜ್ಜಿಯ ಮನೆಗೆ ಹೋದಾಗ ಕವಿ ಅನುಭವಿಸಿದ ವಿರಹ (ಅದಕ್ಕೆ ಕವಿ ತನ್ನನ್ನೇ ತಾನು ವಾತ್ಸಲ್ಯ ವಿರಹಿ ಎಂದು ಕರೆದುಕೊಳ್ಳುತ್ತಾರೆ) ಎಲ್ಲವೂ ಕಾವ್ಯ ರೂಪದಲ್ಲಿ ನಲಿದಿವೆ ಮತ್ತು ನಲುಗಿವೆ
ಇಲ್ಲಿ ತುಂಟತನವಿದೆ, ತಂದೆಯ ಪ್ರೀತಿಯಿದೆ, ಹಸುಗೂಸಿನ ಚೆಲುವಿದೆ, ಮಗುವಿನ ಜೊತೆಗೆ ತಂದೆಯು ಬೆಳೆಯುವ ಕ್ರಿಯೆವಿದೆ, ಎಲ್ಲಕ್ಕಿಂತ ಮುಖ್ಯವಾಗಿ ಜಗತ್ತಿನ ಕ್ರೂರ ಬೆಳವಣಿಗೆಗೆ ವಕ್ರವಿನೋದದ ಪ್ರತ್ಯುತ್ತರವೂ ಇದೆ. ಉದಾಹರಣೆಗೆ : ಜಗತ್ತಿನ ಕ್ರೂರ ಯುದ್ಧಗಳನ್ನು ಕಾಣುತ್ತಿರುವ ಕವಿಗೆ, ಇವು ದೇವನಿಗೆ ಪ್ರಿಯ ಎನಿಸುವುದಿಲ್ಲ, ದೇವರಿಗೆ ಪ್ರಿಯ ಎನಿಸಿವುದು ಮಲಗಿರುವ ಮಗುವಿನ ನಿದ್ರಾಹರಣಕ್ಕೆ ಹಪಿಸುತ್ತಿರುವ ನೊಣದ ಜೊತೆಗೆ ಕವಿಯ ಯುದ್ಧ.
ಮಗುವಿನ ಜೊತೆಗೆ ತಂದೆ ಬೆಳೆಯುವುದನ್ನು ಕುವೆಂಪು ವಿವರಿಸುವ ಪರಿ ನೋಡಿ "ಎರಡು ವರುಷದ ಹಿಂದೆ ನಿನ್ನುಸಿರ ತಂದ ನಿನ್ನ ಮೋಹದ ತಂದೆ, ಓ ನನ್ನ ಕಂದ! ಸುಳ್ಳಲ್ಲ, ತೇಜಸ್ವಿ, ಎರಡೆ ವರುಷದ ತಂದೆ : ನಾವಿಬ್ಬರೊಂದೆ!"
ಮೊದಲಿನಿಂದಲೂ ಅಷ್ಟೇ I'm a poetic person; ಕಾವ್ಯಪ್ರಿಯೆ. ಗದ್ಯಕ್ಕೆ ಸಂದರ್ಭವನ್ನು ಹೇಳುವ ಶಕ್ತಿಯಿದ್ದರೆ, ಕಾವ್ಯಕ್ಕೆ ಅದನ್ನು ವರ್ಣಿಸುವ ಶಕ್ತಿ ಹಾಗೂ ಸ್ಥೈರ್ಯವಿದೆ. ಈ ರೀತಿ ಯೋಚಿಸುವಾಗ ನನಗೆ ಸಿಕ್ಕ ಪುಸ್ತಕ "ಜೇನಾಗುವ". ನನಗೆ ಚಿಕ್ಕಂದಿನಿಂದಲೂ ಕುವೆಂಪು ಅಂದ ಕೂಡಲೇ ಮೊದಲಿಗೆ ನೆನಪಾಗುವುದು ಅವರ ಕವಿತೆಗಳು.
ಕವಿಗಳು ಸುಮ್ನೆ ಪ್ರಕೃತಿಯ ಸೌಂದರ್ಯ, ಪಕ್ಷಿ, ಮರ, ಗಿಡ, ಸರೋವರ, ಸಮುದ್ರ ಹೀಗೆ ಕೆಲವಷ್ಟೇ ವಿಷಯಗಳ ಕುರಿತು ಕವಿತೆ ಬರೆದರೆ; ಓದುಗರಿಗೆ ಅಷ್ಟಾಗಿ ರುಚಿಸುವುದಿಲ್ಲ. ಬದಲಿಗೆ ಒಂದು ವಸ್ತುವನ್ನು ಹೇಗೆ ವರ್ಣಿಸುತ್ತಾರೆ ಎಂಬುದು ತುಂಬಾ ಮುಖ್ಯವಾಗುತ್ತದೆ. ನನ್ನ ಪ್ರಕಾರ ಅಂತಹ ಪಟ್ಟಿಯಲ್ಲಿ ಕುವೆಂಪು ಅವರು ಮೊದಲಿಗರು.
ಈ ಕವನ ಸಂಕಲನ "ಜೇನಾಗುವ" ಎಂಬ ಕವಿತೆಯಿಂದಲೇ ಶುರುವಾಗುತ್ತದೆ. ನನ್ನ ನೆಚ್ಚಿನ ಹಾಡು every day in my playlist, ಅದರ ಕೆಲವು ಸಾಲು ಹೀಗಿದೆ:
ಶಿವನೆನ್ನ ಸುಖಕೆ ಸುಖಿ , ಶಿವೆ ನಿನ್ನ ಸುಖಕೆ ಸುಖಿ, ಶಿವ ಶಿವೆಯರಾ ಸುಖವ, ಸವಿ ವಖಿಲ ಲೋಕ ಸುಖಿ, ಬಾ ಬಾರ ಬಾರ ಸಖಿ,
ಆಹಾ! ಹೀಗೆ ಕವಿ ಪ್ರಾಸಾನುಬದ್ಧವಾಗಿ ಎಷ್ಟು ಅಚ್ಚುಕಟ್ಟಾಗಿ ವರ್ಣಿಸುತ್ತಾ ಹೋಗುತ್ತಾರೆ ನೋಡಿ.
ಜೇನಿರುಳು ಅಥವಾ ಪ್ರಥಮ ಮಿಲನ, ಪ್ರಥಮ ವಿರಹ, ಹೋಗಿ ಬರುವೆನು, ಉದಯಗಾನ, ರವಿಗೆ ಕವಿಯ ಸೇರಿಸಿ ನಿಂದೆ; ಹೀಗೆ ಪ್ರೇಮ, ಪ್ರಣಯ, ಸರಸ, ವಿರಸ, ಮಗುವಿನ ಕಾಯುವಿಕೆ, ನಾಮಕರಣ, ಮಗು ಅಜ್ಜಿ ಮನೆಗೆ ಹೋದಾಗ ಇತ್ಯಾದಿ, ಒಂದಕ್ಕಿಂತ ಒಂದು ಪ್ರಣಯಪೂರ್ವಕವಾಗಿ, ತುಂಬಾ ಸ್ಪಷ್ಟವಾದ ಚಿತ್ರಣವನ್ನು ನೀವಿಲ್ಲಿ ಕಾಣಬಹುದು. ಅದರಲ್ಲೂ ಯುಗದ ಕವಿ ಒಂದು ಕವಿತೆಯಲ್ಲಿ ಹೇಳ್ತಾರೆ:
ಅಬ್ಬಾ!!! ಎಲ್ಲಿಗೆ, ಎಲ್ಲಿಯ ಹೋಲಿಕೆ?? ಹೋಲಿಕೆಗೆ ತಕ್ಕ ವರ್ಣನೆ!! ಅದರಲ್ಲೂ ಪತ್ನಿ ಹೇಮಾ ಅವರ ಮೇಲೆ ಸ್ಫುಟವಾಗಿ ಬರೆದಿರುವ ಸಾಲುಗಳು ಕವಿತೆಗೆ ಜೀವ ತುಂಬಿದೆ.
ಕವನ ಸಂಕಲನದ ಕೊನೆಯ ಪುಟಗಳನ್ನು "ವಾತ್ಸಲ್ಯ ವಿರಹಿ" ಎಂಬ ಸರಣಿಗಳು ಸಂಪೂರ್ಣವಾಗಿ ಆವರಿಸಿ, ಸಂಕಲನಕ್ಕೊಂದು ವಿಭಿನ್ನವಾದ ಸಾತ್ ಕೊಟ್ಟಿದೆ. ಅದರಲ್ಲೂ ತೇಜಸ್ವಿಗೆ ಬರೆದಿರುವ ಟುವ್ವಿ ಕವನ ಅತ್ಯಂತ ಸೊಗಸಾಗಿದೆ. ನಾನು ಹರಸಾಹಸ ಪಟ್ಟು ಓದಿದ ಕವಿತೆಯಂದರೆ ಅದು "ಕೋಕಿಲೋದಯ ಚೈತ್ರ" ಆ ಪದಪುಂಜಗಳು, ಶಬ್ಧ ಮಣಿಗಳು ನಿಜಕ್ಕೂ ಅವರು ಕವಿಯಲ್ಲಾ; ಶಿವನ ಶಕ್ತಿಯಲ್ಲಿ ಬೆರೆತ ಕವಿ, ನಮಗೆ ಸಾಹಿತ್ಯದ ರವಿ.
ಕುವೆಂಪು ಅವರು ಒಂದು ಕಡೆ: ಒಲುಮೆಚೇಳು ಸಕ್ಕರೆಯದು ಕಚ್ಚಿದರೂ ಅಲ್ಲ ಕಹಿ; ಅದರ ಕೊಂಡಿ ಅಕ್ಕರೆಯದು ಚುಚ್ಚಿದರೂ ಬೆಲ್ಲ ಸಿಹಿ! ಅಂತ ಹೇಳಿದ್ದಾರೆ;
ನಾನು ಕವಿತೆಗಳನ್ನು ಓದುತ್ತಾ ಓದುತ್ತಾ ಕವಿತೆಗಳ ಜೇನನ್ನು ರುಚಿಸಿ, ಹೃದಯವನ್ನು ತಣಿಸಿ, ಪ್ರೀತಿ ಸಾಗರದಲ್ಲಿ ಮಿಂದೆದ್ದು ಜೀವಿಸಿ, ಇಲ್ಲಿ ವರ್ಣಿಸಿರುವೆ. ಹೀಗೆ ಹೇಳ್ತಾ ಹೋದ್ರೆ ಇಡೀ ದಿನ ಸಾಲೋಲ್ಲ.
ಕಾವ್ಯ ಪ್ರೇಮಿಗಳೇ ನೀವು ಕೊಂಡು ಓದಲೇ ಬೇಕಾದ ಪುಸ್ತಕ. ಅಷ್ಟರಲ್ಲಿ ನಾನು ಇನ್ನೊಮ್ಮೆ "ಜೇನಾಗುವ" ಹಾಡು ಕೇಳಿ ಬರುವೆ.
ಇದೊಂದು ತರಹ ಮೌಂಟ್ ಎವರೆಸ್ಟ್ ಎಲ್ಲರಿಗೂ ಗೊತ್ತು; ಅದನ್ನ ಮೊದಲು ಅಳೆದು ಲೆಕ್ಕ ಹಾಕಿದ್ದು ಯಾರು ಅಂತ ಹೆಚ್ಚಿನವರಿಗೆ ಗೊತ್ತಿಲ್ಲವನ್ನೋ ತರಹದ ಪುಸ್ತಕ. “ನಾ ನಿನಗೆ ನೀನೆನೆಗೆ” ಎಲ್ಲಾ ಕೇಳಿದ್ರು ಆ ಕವನ ಎಲ್ಲಿಂದ ಬಂತು ಅಂತ ಹೆಚ್ಚಿನವರಿಗೆ ಗೊತ್ತಿಲ್ಲವನ್ನೋ ಹಾಗೆ ಆ ಕವಿತೆ ಬಂದಿರೋ ಕವನ ಸಂಕಲನವಿದು. ಇಲ್ಲಿ ಕವಿ ಮದುವೆ, ಹೆಂಡತಿ, ಮಗು ಅಂತೆಲ್ಲ ತನ್ನ ಖುಷಿಯ, ವಿರಹದ, ವಾತ್ಸಲ್ಯದ ಭಾವನೆಗಳನ್ನೇ ಇಲ್ಲಿ ಕವನದಲ್ಲಿ ಇಳಿಸಿರೋದು; ಕಾವ್ಯ ಪ್ರಿಯರಿಗೆ ರಸದೌತಣ ಉಣಿಸಿರೋದು; ಓದುಗ ಅನುಭವಿಸೋದು. ಜೈ!