ಮರು ಓದು - 2
ವಿಜಯನಗರ ಸಾಮ್ರಾಜ್ಯದ ಉಗಮದ ಪೂರ್ವಕಥೆಯಿಂದ ಶುರುವಾಗುವ ಈ ಸಂಪುಟ ಕೃಷ್ಣದೇವರಾಯನ ಪಟ್ಟಾಭಿಷೇಕದವರೆಗೂ ಮುಂದುವರೆದಿದೆ,. ಮುಂದಿನ ಸಂಪುಟದಲ್ಲಿ ಕೃಷ್ಣದೇವರಾಯನ ಆಳ್ವಿಕೆ ತದನಂತರ ಸಾಮ್ರಾಜ್ಯದ ಅವಸಾನ ಮತ್ತು ಅದರ ಪರಿಣಾಮಗಳವರೆಗೂ ಸಾಗಿ ಅಂತ್ಯವಾಗುತ್ತದೆ.
ನಾನು ಮೊದಲನೇ ಭಾರಿ ಈ ಕೃತಿಗಳನ್ನು ಓದಿದಾಗ ಬೆಕ್ಕಸ ಬೆರಗಾಗಿದ್ದೆ, ಆಗ ವಿಜಯನಗರ ಸಾಮ್ರಾಜ್ಯದ ಜ್ಞಾನವು ಅಷ್ಟಿರಲಿಲ್ಲ, ಆದರೆ ಈ ಓದಿಗೆ, ಈ ಸಂಪುಟ ಅಷ್ಟು ವೈಭವವಾಗಿ ಕಾಣಿಸುತ್ತಿಲ್ಲ, ಲೇಖಕರ ಭಾಷೆಯಲ್ಲಿನ ಉದ್ವೇಗ ಜೀರ್ಣಿಸಿಕೊಳ್ಳಲಾಗದಷ್ಟು ಹೆಚ್ಚಾಗಿದೆ, ವಿದ್ಯಾರಣ್ಯರ ಹೊಗಳಿಕೆಯೇ 200 ಪುಟಕ್ಕು ಮೀರಿ ಹೋಗಿವೆ. ಕೃತಕ ಸನ್ನಿವೇಶಗಳು ಓದುಗನ ಓದಿನ ಓಟಕ್ಕೆ ಅಡ್ಡಿಯಾಗುತ್ತವೆ, ಉದಾ : ಸಭೆಯಲ್ಲಿದ್ದ ಒಂದು ಹೆಣ್ಣು ಮಗಳು ಭುವನೇಶ್ವರಿಯ ಅವತಾರವಂತೆ ಎದ್ದು ಘರ್ಜಿಸಿ ಇವನು ನನ್ನ ಗಂಡನಲ್ಲ ಕಡುಪಾಪಿ ಎಂದು ಕತ್ತಿಯನ್ನು ಕಸಿದುಕೊಂಡು ಕೊಲ್ಲಲು ಮುಂದಾದಳು, ಭಟರು ತಡೆದರು, ಈ ಸನ್ನಿವೇಶವನ್ನು ನೋಡುತ್ತಿದ್ದ ಪ್ರಭುಗಳ ಕಣ್ಣಿನಲ್ಲೂ ನೀರಾಡಿದವು. ಈ ರೀತಿಯ ಕೃತಕ ಕಥೆಗಳು ಐತಿಹಾಸಿಕ ಕಾದಂಬರಿಗಳಲ್ಲಿ ಕಡಿಮೆ ಬಂದಷ್ಟು ಒಳಿತು, ಆದರೆ ಈ ರೀತಿಯ ಸನ್ನಿವೇಶಗಳಿಂದಲೇ ಈ ಸಂಪುಟ ತುಂಬಿ ಹೋಗಿದೆ. ನೈಜ ಇತಿಹಾಸದಿಂದ ತುಂಬಾ ದೂರ ಉಳಿಯುತ್ತದೆ. ಒಂದಷ್ಟು ಒಳ್ಳೆಯ ಕಾದಂಬರಿಗಳನ್ನು ಓದುವ ಇಚ್ಛೆ ಇದ್ದರೆ ಈ ಸಂಪುಟಗಳನ್ನು ಓದಬಹುದು, ವಿಜಯನಗರ ಇತಿಹಾಸವನ್ನು ತಿಳಿದುಕೊಳ್ಳುವ ಇಚ್ಛೆ ಇದ್ದಲ್ಲಿ ಇದನ್ನು ಓದದೇ ಇರುವುದು ಒಳ್ಳೆಯದು