Jogi Girish Rao Hatwar ಹುಟ್ಟೂರು ಮಂಗಳೂರಿನ ಸುರತ್ಕಲ್ ಸಮೀಪದಲ್ಲಿರುವ ಹೊಸಬೆಟ್ಟು. ಹತ್ವಾರ್ ಮನೆತನಕ್ಕೆ ಸೇರಿದ ಜೋಗಿ ಓದಿದ್ದು ಗುರುವಾಯನಕೆರೆ ಮತ್ತು ಉಪ್ಪಿನಂಗಡಿಗಳಲ್ಲಿ. ತಂದೆ ಶ್ರೀಧರರಾವ್ ಕೃಷಿಕರು. ತಾಯಿ ಶಾರದೆ. ಹಿರಿಯ ಸೋದರ ಹತ್ವಾರ ನಾರಾಯಣ ರಾವ್ ಯಕ್ಷಗಾನ ಪ್ರಸಂಗಗಳನ್ನು ಬರೆದು, ತಾಳಮದ್ದಲೆ ಅರ್ಥಧಾರಿಯಾಗಿ, ಲೇಖಕರಾಗಿ ಪ್ರಸಿದ್ಧರು. ೧೮ನೇ ವಯಸ್ಸಿಗೆ ಬರಹ ಆರಂಭಿಸಿದ ಜೋಗಿ ಓದಿದ್ದು ಬಿ.ಕಾಂ. ಕಾಲೇಜು ದಿನಗಳಲ್ಲಿ ಅವರ ಸಾಹಿತ್ಯ ಆಸಕ್ತಿಯನ್ನು ರೂಪಿಸಿದವರು ಬಳ್ಳ ವೆಂಕಟರಮಣ. ಬೆಂಗಳೂರಿಗೆ ೧೯೮೯ರಲ್ಲಿ ಕಾಲಿಟ್ಟ ಗಿರೀಶ ರಾವ್ ಹತ್ವಾರ್ ಅವರನ್ನು ಜೋಗಿಯಾಗಿ ರೂಪಿಸಿದವರು ವೈಎನ್ ಕೆ. ಸದ್ಯ ಬೆಂಗಳೂರಲ್ಲಿ ನೆಲೆನಿಂತಿರುವ ಜೋಗಿ ಪತ್ನಿ ಜ್ಯೋತಿ, ಮಗಳು ಖುಷಿಯೊಂದಿಗೆ ಜೀವಿಸುತ್ತಿದ್ದಾರೆ.
A short novella about how people and government are becoming the reason for deforestation in the name of development for their selfishness. Jogi has told it in a suspenseful murder mystery way which makes the book a very light read.
Recommended for beginners..
"ಇನ್ನೊಬ್ಬರ ದುಷ್ಟತನಾನ ಸಹಿಸಿಕೊಳ್ಳೋದು ಕಷ್ಟ ಅಲ್ಲ. ಅದು ನಮ್ಮ ಒಳ್ಳೇತನವನ್ನೂ ಮುಚ್ಚಿಹಾಕೋದನ್ನು ಒಪ್ಪಿಕೊಳ್ಳೋದು ಕಷ್ಟ"
"ಇದೆಲ್ಲ ಪಲಾಯನವಾದ ಅನ್ನಿಸುತ್ತೆ. ಎಷ್ಟೋ ಸಾರಿ ಯಾವುದರಿಂದಲೋ ತಪ್ಪಿಸಿಕೊಳ್ಳೋದಕ್ಕೆ ಇನ್ಯಾವುದರಲ್ಲೋ ಸಿಕ್ಕಿ ಹಾಕ್ಕೋತೀವಿ. ಇರೋದು ಸರಿಯಿಲ್ಲ, ಸಿಗದೇ ಇರೋದು ಅದ್ಭುತ ಜಗತ್ತು ಅಂದ್ಕೋತೀವಿ. ನಮ್ಮ ಬದುಕು ಇನ್ನೆಲ್ಲೋ ಇದೆ ಅಂದ್ಕೋತೀವಿ. ಇರೋ ಕಡೆ ಹುಡುಕೋದಿಲ್ಲ"
"ಪ್ರಕೃತಿಯ ಎಲ್ಲಾ ಗುಟ್ಟುಗಳನ್ನು ತಿಳಿದುಕೊಳ್ಳಬೇಕು ಎಂದು ಬಯಸುವುದು ದುರಾಸೆ"