Malooru Krishnarao Indira (Kannada: ಮಾಳೂರು ಕೃಷ್ಣರಾವ್ ಇಂದಿರ; 5 January 1917 – 15 March 1994) was a well-known Indian novelist in the Kannada language. She has written novels like Phaniyamma which has won various prestigious awards. She started writing novels at the age of forty-five. Some of her novels have been made into movies.
Born to a prosperous agriculturist, her formal education lasted for seven years before she got married at the age of twelve to M. Krishna Rao. She studied Kannada poetry and also had a good knowledge of Hindi literature.
Indira's novels, Tungabhadra, Sadananda, Navaratna and Phaniyamma have won her the Kannada Sahitya Akademi awards. This annual award is given to the best Kannada literature of the year. In view of her contribution to literature, an award is constituted in Indira's name and is given to the best women writers.
Thejaswini Niranjana, has translated Phaniyamma to English, and this translation has won her the Sahitya Akademi of India award and more awards.
ನಾನು ಓದಿದ ಶ್ರೀಮತಿ ಎಂ ಕೆ ಇಂದಿರಾ ಅವರ ಮೊದಲ ಪುಸ್ತಕ. ಬಹುಶ ನನಗೆ ಇವರ ಕಥೆಗಳು ಸ್ತ್ರೀವಾದ (ಹಾಗಂತ ನಾನು Anti Women sentiments ಅಂದುಕೋಬೇಡಿ ತಲೆ ದಿಮ್ ಅನ್ನಿಸುವ ಕಥೆಗಳನ್ನ ನೋಡೋಕೆ ಓದೋಕೆ ಅಷ್ಟಾಗಿ ಹಿಡಿಸಲ್ಲ)ಮತ್ತು ಸಾಂಸಾರಿಕ ತಾಪತ್ರಯಗಳ ಗೋಳು ಎಂಬ ಭಾವನೆ ಇದ್ದ ಪರಿಣಾಮ ಯಾವುದೇ ಪುಸ್ತಕ ಮುಟ್ಟುವ ಗೋಜಿಗೆ ಹೋಗಿರಲಿಲ್ಲ. ಆದರೆ ಇದರ ಶೀರ್ಷಕೆ ತುಂಬಾ ಕುತೂಹಲ ಹುಟ್ಟುಸಿತು ಹಾಗಾಗಿ ಎತ್ತಿಕೊಂಡೆ. ಈಗಷ್ಟೇ ಶುವಮೊಗ್ಗದಿಂದ ಬೆಂಗಳೂರಿಗೆ ವರ್ಗವಾಗಿರುವ ಒಂದು ಬ್ರಾಹ್ಮಣ ಕುಟುಂಬ ಹೊಸ ಊರಲ್ಲಿ ಬಾಡಿಗೆ ಮನೆ ಹುಡುಕುವ ಸನ್ನಿವೇಶಗಳೇ ಈ ಪುಸ್ತಕದ ತಿರುಳು. ತಮ್ಮ ಸಂಬಂಧಿಕರ ವಠಾರದ ಮನೆಯಲ್ಲೇ ಉಳಿಯಬೇಕಾಗಿ ಬರುವ ಸನ್ನಿವೇಶ ಅಲ್ಲಿ ನಡೆಯುವ ಕೀಟಲೆ, ಕಿರಿಕಿರಿ,ಆವಾಗಿನ ಜನರ ಜೀವನ ಬವಣೆ ಓದೋಕೆ ಮಜಾ ಮತ್ತು ಹೀಗೂ ಇತ್ತ ಅಂತ ಅನಿಸುವುದೇ ಇರುವುದಿಲ್ಲ ಈಗಿನ ಓದುಗರಿಗೆ.( ನಾವು ೨೩ ವರ್ಷದ ಹಿಂದೆ ನಮ್ಮ ದೊಡ್ಡಮ್ಮನವರು ಬೆಂಗಳೂರಿನಲ್ಲಿ ಮನೆ ಹುಡುಕಬೇಕಾದಾಗ ನಡೆದ ವಿಷಯಗಳು ನೆನಪಿಗೆ ಬಂದು ನೊಸ್ಟಾಲ್ಜಿಕ್ ಅನ್ನಿಸಿತು).ಇವಾಗ ಎಷ್ಟು ಸುಲಭ ಪ್ರಕ್ರಿಯೆಗಳು ಇವೆ ಬಾಡಿಗೆ ಮನೆ ಸಿಗೋದಕ್ಕೆ. ತುಂಬಾ ದೂರ ಸಾಗಿಬಂದಿದ್ದೇವೆ ಈ ಯಾಂತ್ರೀಕೃತ ಬದುಕಿನಲ್ಲಿ ಅಲ್ಲವೇ.
ಬ್ರಾಹ್ಮಣರಿಗೆ ಅತ್ವ ಸಸ್ಯಹಾರಿಗಳಿಗೆ ಅಂತ ಮನೆಯ ಮುಂದೆ ಒಂದು ನಾಮ ಫಲಕ ನೋಡಿದರೆ ಮೈ ಕೈ ಉರ್ಕೊಳ್ಳೋ ಈಗಿನ ಡೋಂಗಿಗಳಿಗೆ ಈ ಪುಸ್ತಕ ಹಿಡಿಸದೆ ಇರಬಹುದು.
ಎಂ.ಕೆ.ಇಂದಿರಾ ಅವರದ್ದು ನಾನು ಓದಿದ್ದು ಕೆಲವೇ ಪುಸ್ತಕಗಳು. ಚಿತ್ರ ಭಾರತ, ಕಥೆಗಾರ, ಫಣಿಯಮ್ಮ,ಪುಟ್ಟಣ್ಣ ಕಣಗಾಕ್ಯ,ಸದಾನಂದ. ಓದಿದ್ದೆಲ್ಲ ಹಿಡಿಸಿತ್ತು. ಅದಾದ ನಂತರ ಅವರ ಪುಸ್ತಕಗಳ ಲಭ್ಯತೆ ಇರದೆಯೋ,ಬೇರೆ ಲೇಖಕರ ಕಡೆಗೆ ಗಮನ ಹೋಗಿಯೋ ಓದಲಾಗಲಿಲ್ಲ. ಈಗ ಸಿಕ್ಕಿದಾಗ ಓದುವಾಗ ಅವರ ಭಾಷೆ, ಪಾತ್ರಗಳ ನಿಭಾಯಿಸುವ ಬಗೆ ಕೌತುಕ ಹುಟ್ಟಿಸುತ್ತದೆ. ಆದರೆ ಈಗಿನ ಕಾಲಕ್ಕೆ ಸಲ್ಲದ ವಿಷಯಗಳಿದ್ದ ಕಾರಣ ಅಪರಿಚಿತತೆ ಕಾಡುತ್ತದೆ.ಮನುಷ್ಯ ಸ್ವಭಾವಗಳು ಮಾತ್ರ ಎಲ್ಲ ಕಾಲಗಳಲ್ಲಿ ಕೂಡ ಒಂದೇ ತೆರ.
ನಗರಕ್ಕೆ ಬಂದ ದಂಪತಿಗಳು ಮನೆ ಹುಡುಕಲು ಪಡುವ ಪಾಡು ಕಥಾವಸ್ತು. ಸದ್ಯಕ್ಕೆ ಬೇರೆ ದಾರಿಯಿಲ್ಲದೆ ಸಂಬಂಧಿಯೊರ್ವಳ ಮನೆಯಲ್ಲಿ ಕೆಲ ಕಾಲ ತಂಗುತ್ತಾರೆ. ಆ ವಠಾರದ ಜನರ ಬುದ್ಧಿ,ಕಷ್ಟಗಳು,ಮನೆ ನಡೆಸಲು ಪಡುವ ಸಾಹಸ ಎಲ್ಲ ವಿವರವಾಗಿ ವರ್ಣಿತವಾಗಿದೆ. ಆಗಿನ ಕಾಲದ ಸಮಾಜದ ದೃಷ್ಟಿ. (ಬಾಡಿಗೆ ಹಣ ಐವತ್ತು ರೂಪಾಯಿ ತಿಂಗಳಿಗೆ ಅಂದರೆ ದೊಡ್ಡದು ಎಂಬಂತಹ ಕಾಲ)
ಈಗ ಇದನ್ನು ಓದಿದವರು 'ಬ್ರಾಹ್ಮಣ' ಕಾದಂಬರಿ ಅಂತ ಮೂಗು ಮುರಿಯಬಹುದು.