ಪ್ರಕಾಶ್ ರೈ ಅವರ "ಅವರವರ ಭಾವಕ್ಕೆ" ಓದಿ ತುಂಬಾ ಇಷ್ಟ ಪಟ್ಟು ಅವರ ಮತ್ತೊಂದು ಪುಸ್ತಕ ಓದಬೇಕೇಂದು ಆಸೆ ಆಗಿದ್ದ ನನಗೆ ಸಿಕ್ಕಿದ್ದೆ "ಇರುವುದೆಲ್ಲವ ಬಿಟ್ಟು "ಈ ಪುಸ್ತಕದಲ್ಲೂ ಪ್ರಕಾಶ್ ರೈ ತಮ್ಮ ಜೀವನದ ಅನುಭವಗಳನ್ನು, ನಡೆದ ಘಟನೆಗಳನ್ನು ಹಾಗೂ ಜೀವನದ ಮೌಲ್ಯಗಳನ್ನು ,ಲೇಖನಗಳ ರೂಪದಲ್ಲಿ ಬಹಳ ಸುಂದರವಾಗಿ ಪ್ರಕಟಿಸಿದ್ದಾರೆ...ಇವರ ಬರವಣಿಗೆ ಶೈಲಿಯಲ್ಲಿ ಹಾಗೂ ಕಥೆ ಹೇಳುವ ಶೈಲಿಯಲ್ಲಿ ಏನೋ ಮ್ಯಾಜಿಕ್ ಇದ್ದಂತೆ ಅನಿಸುತ್ತದೆ...ಎಲ್ಲರಿಗಿಂತ ವಿಭಿನ್ನ ಯೋಚನೆ ಇವರ ಬರಹಗಳಲ್ಲಿ ಇದೆ ಎಂದು ಓದಿದ ಮೇಲೆ ಅನಿಸುತ್ತದೆ. ಒಂದೊಂದು ಲೇಖನವು ಅವರ ಜೀವನದಲ್ಲಿ ನಡೆದ ಘಟನೆಗಳನ್ನು ನೆನಪಿಸುತ್ತಾ ಕೊನೆಯಲ್ಲಿ ಜೀವನದ ಸಿದ್ಧಾಂತಗಳನ್ನು ಬದುಕಿನ ಮೌಲ್ಯಗಳನ್ನು,ಹಾಗೂ ವೈಯಕ್ತಿಕ ಜೀವನವನ್ನು ಬಹಳ ಸುಂದರವಾಗಿ ತೆರೆದಿಟ್ಟಿದ್ದಾರೆ ಲೇಖಕರು.ಇದರಲ್ಲಿ ಭಾವನಾತ್ಮಕ ವಿಷಯಗಳು ಜಾಸ್ತಿ ಇದ್ದು ಲೇಖಕರು ಮನಸ್ಸು ಬಿಚ್ಚಿ ಬರೆದಿದ್ದಾರೆ ಎನ್ನುವುದರಲ್ಲಿ ಅನುಮಾನವಿಲ್ಲ.ಇದು ಓದಲೇಬೇಕಾದ ಪುಸ್ತಕವಂತೂ ಹೌದು
ಪ್ರಕಾಶ್ ರೈರವರು ತಮ್ಮ ಜೀವನದಲ್ಲಿ ನಡೆದಿರುವ ಘಟನೆಗಳನ್ನು ಸಂಗ್ರಹಿಸಿ ಈ ಹೊತ್ತಿಗೆಯನ್ನು ಹೊರತಂದಿದ್ದಾರೆ. ಎಲ್ಲರ ಜೀವನದಲ್ಲೂ ಒಂದಲ್ಲ ಒಂದು ಘಟನೆ ಅವರ ಜೀವನದ ಹಾದಿಯನ್ನೇ ಬದಲಾಯಿಸಿ ಬಿಟ್ಟಿರುತ್ತೆ. ರೈರವರ ದೃಷ್ಟಿಕೋನದಿಂದ ಆ ಘಟೆನೆ'ಗಳಿಗೆ ಅಂದು ಹೇಗೆ ಪ್ರತಿಕ್ರಿಯಿಸಿದ್ದರು ಹಾಗೂ ಹೇಗೆ ಪ್ರತಿಕ್ರಿಯಿಸಬೇಕಾಗಿತ್ತು ಮತ್ತು ಈ ಎಲ್ಲಾ ಘಟನೆಗಳು ಅವರಿಗೆ ಕಲಿಸಿದ ಪಾಠಗಳು ಇಂದಿಗೂ ಹೇಗೆ ಅವರಿಗೆ ಅನ್ವಯಿಸುತ್ತದೆ ಎಂದು ಇದರಲ್ಲಿ ಹೇಳಿದ್ದಾರೆ. ಸಣ್ಣ ಕಥೆಗಳಿರುವ ಈ ಹೊತ್ತಿಗೆ ತುಂಬಾ ಕುತೂಹಲಕಾರಿಯಾಗಿದೆ. ಎಲ್ಲರೂ ಓದಲೇಬೇಕಾದ ಒಂದು ಒಳ್ಳೆಯ ಹೊತ್ತಿಗೆ.
Well narrated... His point of view on all the aspects of the life is different than the normal people. However some times reader may feel that nobody is perfect including the author in some real life scenarios.